ಪಿಎಸ್ಐ ಹಗರಣ, ಬಿಜೆಪಿ ಸರ್ಕಾರದ ವಿರುದ್ಧದ ಭ್ರಷ್ಟಾಚಾರಗಳ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿಯವರಿಗೆ ನ್ಯಾಯ ಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಪೋಸ್ಟರ್ಗಳನ್ನು ಪ್ರಕಟಿಸಿದ್ದಾರೆ.ಕಲಬುರರ್ಗಿ, ಯಾದಗಿರಿಗೆ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಂಡಿದ್ದ ಮೋದಿಯವರಿಗೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಪಿಎಸ್ಐ ಹಗರಣದಿಂದ ಸಹಾಯಕರ ನೇಮಕಾತಿ ಹಗರಣ ಸೇರಿ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜೀನಿಯರ್ ನೇಮಕಾತಿ ಹಗರಣದಲ್ಲಿ ವಂಚಿತರಾದ ಅರ್ಹರಿಗೆ ನ್ಯಾಯಕೊಡಿಸಿ ಎಂದು ಪ್ರಶ್ನಿಸಿದ್ದಾರೆ.ಕೋವಿಡ್ ಸಂದರ್ಭದಲ್ಲಿ ಅಗತ್ಯ ಸಲಕರಣೆ ಪೂರೈಕೆ ಮಾಡಿದ್ದ ಗುತ್ತಿಗೆದಾರ ಬಸವರಾಜ ಅಮರಗೋಳ ಅವರಿಗೆ ಬಿಲ್ ಪಾವತಿ ಮಾಡಿಲ್ಲ. ಇದರಿಂದ ಬೇಸತ್ತು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಅವರ ಪ್ರಾಣ ಉಳಿಸಿ, ನ್ಯಾಯಕೊಡಬೇಕು ನೀವೇ ಅಲ್ಲವೇ ಎಂದು ಮೋದಿಗೆ ಹೇಳಿದ್ದಾರೆ.ಕೊರೊನಾ ಕಾಲದಲ್ಲಿ ೩೦೦೦ ಸಾವಿರ ಕೋಟಿ ರೂ. ಅವ್ಯವಹಾರ ನಡೆದಿದೆ. ಸೋಂಕಿಗೆ ಬಲಿಯಾದ ಸತ್ತವರ ಆತ್ಮಗಳು ನ್ಯಾಯಕ್ಕಾಗಿ ಕಾಯುತ್ತೀವೆ. ನಂದಿನಿ ಹಾಲು ಸಂಸ್ಥೆ ಮೇಲೆ ಗುಜರಾತಿನ ಅಮುಲ್ ಮೇಲೆ ಕಣ್ಣು ಬಿದ್ದಿದೆ. ನಮ್ಮ ರೈತರ ಅನ್ನದ ತಟ್ಟೆಗೆ ಮಣ್ಣು ಹಾಕಬೇಡಿ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.ರಸ್ತೆಗುಂಡಿಗಳಿಗೆ ಸಂಭವಿಸಿದ ಅಪಘಾತದಲ್ಲಿ ಪೋಷಕರನ್ನು ಕಳೆದುಕೊಂಡ ಹತ್ತಾರು ಕುಟುಂಬಗಳ ಮಕ್ಕಳಿಗೆ ಹಾಗೂ ಮಕ್ಕಳನ್ನು ಕಳೆದುಕೊಂಡ ಪೋಷಕರಿಗೆ ನ್ಯಾಯ ಒದಗಿಸಿ. ತಪ್ಪಿಸ್ಥರಿಗೆ ಶಿಕ್ಷೆ ಕೊಡಿಸಿ ಎಂದು ಒತ್ತಾಯಿಸಿದ್ದಾರೆ.ಶೇ. ೪೦ ರಷ್ಟು ಕಮೀಷನ್ ಕೊಟ್ಟಿಲ್ಲ ಎಂದು ಕಾರಣಕ್ಕಾಗಿ ಕಾಮಗಾರಿಯ ಹಣ ನೀಡದೆ, ಬಿಜೆಪಿ ಸತಾಯಿಸಿದೆ. ಈ ಸಾವಿನ ಸರಣಿಯನ್ನು ಕೊನೆಗಾಣಿಸುವರು ಯಾರು ಎಂದು ಪ್ರಶ್ನಿಸಿದ್ದಾರೆ.ಮೆಟ್ರೊ ಪಿಲ್ಲರ್ ಕುಸಿತದಿಂದ ತಾಯಿ, ಮಗು ಸಾವು ಇದಕ್ಕೆ ಯಾರು ಹೊಣೆಗಾರರು ಎಂದು ಸಿದ್ದರಾಮಯ್ಯ ಮೋದಿಗೆ ತಿವಿದಿದ್ದಾರೆ.
https://play.google.com/store/apps/details?id=com.speed.newskannada