ಕಾಂಗ್ರೆಸ್ ನಿಂದ 2013ರಲ್ಲಿ ನಾನು ಸುಧಾಕರ್ ಗೆ ಟಿಕೆಟ್ ಕೊಡಿಸದಿದ್ದರೆ ಎಂಎಲ್ಎ ಆಗದೇ ಇಂದು ಸಚಿವರಾಗುತ್ತಿದ್ದರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಸುಧಾಕರ್ ವಿರುದ್ದ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕುವುದರ ಲ್ಲೇ ಇದ್ದಾರೆ ಎನ್ನುವ ಆರೋಗ್ಯ ಸಚಿವ ಸುಧಾಕ ರ್ ಹೇಳಿಕೆಗೆ ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 2013ರಲ್ಲಿ ಕಾಂಗ್ರೆಸ್ ನಿಂದ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಸುಧಾಕರ್ ಗೆ ಟಿಕೆಟ್ ಕೊಡಿಸಿದವರು ಯಾರು ಎಂದು ಕೇಳಿ, ಮಹದೇ ವಪ್ಪ ಬೇರೆ ಅವನಿಗೆ ಟಿಕೆಟ್ ನೀಡುವಂತೆ ಸಿಫಾರ ಸು ಮಾಡಿದ್ದರು ಎಂದು ಹೇಳಿದರು.
ಮಕ್ಕಳು ಶಾಲೆಗೆ ಬರಲಿ ಎಂದು ಸೈಕಲ್, ಸಾಕ್ಸ್, ಸಮವಸ್ತ್ರದಂತಹ ಸೌಲಭ್ಯ ನೀಡುವಂತಹದ್ದು, ಈ ಸೌಲಭ್ಯ ನೀಡದಿದ್ದರೆ ಮಕ್ಕಳು ಶಾಲೆಯಿಂದ ಹೊರಗುಳಿಯಲಿದ್ದಾರೆ. ಈಗಾಗಲೇ ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳು ಶಾಲೆಯಿಂದ ಹೊರಗುಳಿ ದಿದ್ದಾರೆ. ಈ ಸರ್ಕಾರ ಬಂಡ ಸರ್ಕಾರವಾಗಿದೆ. ಸರ್ಕಾರದಲ್ಲಿ ಎಲ್ಲರೂ ಬಂಡರೇ ಎಂದು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann