ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ಹೇಳಿಕೆ..
ಹಳ್ಳಿ ಭಾಷೆಯಲ್ಲಿ ನಾನು ಮಾತಾಡಿದ್ದೇನೆ,ಹಳ್ಳಿ ಭಾಷೆಯಲ್ಲಿ ಹೆದರೋರಿಗೆ ನಾಯಿ ಮರಿ ತರಹ,ಬೆಕ್ಕಿನ ಮರಿ ತರ ಇರ್ತೀವಿ ಅಂತೀವಿ ಎಂದ ಸಿದ್ದು..
ಮುಖ್ಯಮಂತ್ರಿಗಳಿಗೆ ಅಗೌರವ ಮಾಡಬೇಕು ಅನ್ನೋ ಉದ್ದೇಶ ಇಲ್ಲ.
ಪ್ರಧಾನ ಮಂತ್ರಿ ಬಳಿ ಮುಖ್ಯಮಂತ್ರಿ ಧೈರ್ಯವಾಗಿ ಇರಬೇಕು ಅನ್ನೋ ಅರ್ಥದಲ್ಲಿ ಹೇಳಿದ್ದೇನೆ.
ಯಡಿಯೂರಪ್ಪನವರಿಗೆ ರಾಜಾಹುಲಿ ಅನ್ನೋದು ಅನುಮಾನನಾ.?
ನನಗೆ ಟಗರು,ಹೌದ ಹುಲಿಯಾ ಅನ್ನೋದು ಅನುಮಾನನಾ??
ಪ್ರಾಣಿ,ಪಕ್ಷಿಗಳಿಗೆ ಮರಗಳಿಗೆ ಹೋಲಿಕೆ ಮಾಡೋದು ಸಹಜ.
ರಾಜ್ಯದ ಹಿತದೃಷ್ಟಿಯಿಂದ ನಾನು ಹೇಳಿರೋದು ಎಂದ ಸಿದ್ದು.
ವಿಧಾನ ಸೌಧ ದಕ್ಕೆ ಹಣ ತಗೊಂಡು ಬಂದಿದಾರೆ ಅಂದ್ರೆ ಏನ ಅರ್ಥ.
ಮಂತ್ರಿಗಳಿಗೆ ಇಲ್ಲ ಮುಖ್ಯಮಂತ್ರಿಗಳಿಗೆ ಕೊಡೋಕೆ ತಂದಿರಬಹುದು..
ಇದು ನಿಜ ಇರಬಹುದು ಸುಳ್ಳು ಇರಬಹುದು ಎಂದ ಸಿದ್ದು.
ಇಂಜನಿಯರ್ ಯಾಕೆ ವಿಧಾನಸೌಧಕ್ಕೆ ದುಡ್ಡು ತಗೊಂಡು ಬರ್ತಾನೆ..??
ಒಂದು ಟ್ರಾನ್ಸಫರ್ ಇರಬೇಕು,ಇಲ್ಲ ಲಂಚ ಕೊಡೋಕೆ ಬಂದಿರಬೇಕು.
ಹಾಗೆ ಸಂಶಯ ಪಡಬಹುದು ಎಂದ ಸಿದ್ದು.
ವಿಚಾರಣೆ ಮಾಡಲಿ ಸತ್ಯ ಗೊತ್ತಾಗಲಿ ಎಂದ ಸಿದ್ದು..
ರಾಮ ಮಂದಿರ ಕಟ್ಟಿರೋದಕ್ಕೆ ನಮ್ಮ ವಿರೋಧ ಇಲ್ಲ.
ಅದನ್ನು ರಾಜಕೀಯ ಬಳಸಿಕೊಳ್ಳೋದಕ್ಕೆ ನಮ್ಮ ವಿರೋಧ.
ನಾವು ಹಳ್ಳಿಗಳಲ್ಲಿ ರಾಮಮಂದಿರ ಆಂಜನೇಯ ಗುಡಿ ಕಟ್ಟಿಲ್ವಾ ಎಂದ ಸಿದ್ದು.
ಕೋಮುವಾದ ಮಾಡೋ ಪಾರ್ಟಿ ಜನರನ್ನ ಆಳೋಕೆ ಯೋಗ್ಯ ಅಲ್ಲ ಎಂದ ಸಿದ್ದು..
ಪರೋಕ್ಷವಾಗಿ ಬಿಜೆಪಿ ಯೋಗ್ಯ ಅಲ್ಲ ಎಂದ ಸಿದ್ದು.
ಧರ್ಮದ ಹೆಸರಲ್ಲಿ ಜಾತಿ ಹೆಸರಲ್ಲಿ ರಾಜಕಾರಣ ಮಾಡೋದು ತಪ್ಪು ಎಂದ ಸಿದ್ದು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada