ಅನಾರೋಗ್ಯದಿಂದ ಬಳಲುತ್ತಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾರಾಯಣ ಗೌಡ ನಿಧನ.

ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಎಂ. ನಾರಾಯಣ ಗೌಡ ನಿನ್ನೆ ರಾತ್ರಿ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.ಕೇಂದ್ರ ವಿಭಾಗ ಡಿಸಿಪಿ ಎಂ.ಎನ್ ಅನುಚೇತ್ ಅವರ ತಂದೆ ನಾರಾಯಣ ಗೌಡ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಮೃತ ನಾರಾಯಣ ಗೌಡ ಬೆಂಗಳೂರು ನಗರ ಅಪರಾಧ ವಿಭಾಗ(ಸಿಸಿಬಿ) ಜಂಟಿ ಆಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಎಸ್.ಪಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಇಂದು ಇವರ ಹುಟ್ಟೂರು ಕೋಲಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

U-19 ವಿಶ್ವಕಪ್ನ ಟೀಮ್ ಇಂಡಿಯಾ ಸ್ಕೋರ್ಕಾರ್ಡ್ನಲ್ಲಿ ವಿಕ್ಕಿ ಕೌಶಲ್;

Sun Jan 30 , 2022
ಭಾರತ ಮತ್ತು ಬಾಂಗ್ಲಾದೇಶ 2022 ರ ಅಂಡರ್-19 ವಿಶ್ವಕಪ್ ಪಂದ್ಯದ ಸಂದರ್ಭದಲ್ಲಿ ನಟ ವಿಕ್ಕಿ ಕೌಶಲ್ ಶನಿವಾರ ರಾತ್ರಿ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಟಾಪ್ ಟ್ರೆಂಡ್‌ಗಳಲ್ಲಿ ಒಬ್ಬರಾದರು. ಪಂದ್ಯದ ವೇಳೆ, ಸ್ಕೋರ್‌ಬೋರ್ಡ್ ಪರದೆಯ ಮೇಲೆ ಭಾರತೀಯ ಆಟಗಾರರಾದ ವಿಕ್ಕಿ ಓಸ್ತ್ವಾಲ್ ಮತ್ತು ಕೌಶಲ್ ತಾಂಬೆ ಅವರ ಆರಂಭಿಕ ಹೆಸರನ್ನು ಫ್ಲ್ಯಾಷ್ ಮಾಡಿತು, ಇದು ಸಾಮಾಜಿಕ ಮಾಧ್ಯಮದಲ್ಲಿ `ಯುಆರ್‌ಐ’ ನಟನಿಗೆ ಸಂಬಂಧಿಸಿದ ಮೀಮ್‌ಗಳ ಪ್ರವಾಹಕ್ಕೆ ಕಾರಣವಾಯಿತು. ಇದು ಶೀಘ್ರದಲ್ಲೇ ನಟನ ಗಮನವನ್ನು […]

Advertisement

Wordpress Social Share Plugin powered by Ultimatelysocial