ನೆಕ್ಸಾನ್‌ ಎಲೆಕ್ಟ್ರಿಕ್‌ ಕಾರು ಖರೀದಿಗೆ ಮುಗಿಬಿದ್ದ ಜನ.! ಕಾಯುವಿಕೆ ಬುಕ್ಕಿಂಗ್‌ ಅವಧಿ 6 ತಿಂಗಳು ವಿಸ್ತರಣೆ

ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಗಗನಮುಖಿಯಾಗಿ ಸಾಮಾನ್ಯ ಜನರ ಜೇಬನ್ನು ಸುಡುತ್ತಿರುವಾಗ ಮಧ್ಯಮ ವರ್ಗದವರು, ನಿತ್ಯ 10-20 ಕಿ.ಮೀ. ದ್ವಿಚಕ್ರಗಳಲ್ಲಿ ಸಂಚರಿಸುವವರು ಪೆಟ್ರೋಲ್‌ಗೆ ಪರ್ಯಾಯವಾಗಿ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಮೊರೆಹೋಗುತ್ತಿದ್ದಾರೆ. ಇದು ಅನಿವಾರ್ಯತೆಯಿಂದ ಇಡಲಾಗುತ್ತಿರುವ ಹೆಜ್ಜೆ.ಹಾಗಂತ ಎಲೆಕ್ಟ್ರಿಕ್‌ ಸ್ಕೂಟರ್‌ಗಳ ಬೆಲೆ ಸುಮಾರು 1 ಲಕ್ಷ ರೂ. ಗಿಂತ ಕಡಿಮೆ ಏನಿಲ್ಲ. ಜತೆಗೆ ಪ್ರತಿ 2-3 ವರ್ಷಕ್ಕೆ ಬ್ಯಾಟರಿ ಬದಲಾವಣೆ ಮಾಡಬೇಕು. ಅದಕ್ಕೆ 25-30 ಸಾವಿರ ರೂ. ಕೊಡಬೇಕು..!ಹಾಗಾಗಿ, ಬಹಳಷ್ಟು ಜನರು ಸಾಲ ಮಾಡಿಯಾದರೂ ಸರಿಯೇ ಎಲೆಕ್ಟ್ರಿಕ್‌ ಕಾರು ಖರೀದಿ ಮಾಡಿಬಿಡೋಣ ಎಂಬ ಆಲೋಚನೆಗೆ ಇಳಿದಿದ್ದಾರೆ. ಅಂತಹವರಿಗೆ ಕುಟುಂಬ ಸಮೇತರಾಗಿ ಆರಾಮಾಗಿ ಎಲ್ಲಿಬೇಕಾದರೂ ಸಂಚರಿಸಲು ಇರುವ ಆಯ್ಕೆ ಎಂದರೆ ” ಎಲೆಕ್ಟ್ರಿಕ್‌ ಚಾಲಿತ ಎಸ್‌ಯುವಿ ಮಾದರಿ ಕಾರು”. ಈ ಶ್ರೇಣಿಯ ಪೈಕಿ ಅತ್ಯಂತ ವಿಶ್ವಾಸಾರ್ಹ ಮತ್ತು ಜನಪ್ರಿಯ ಎಂದರೆ, ಅದು ಟಾಟಾ ಮೋಟಾರ್ಸ್‌ ಕಂಪನಿಯ ನೆಕ್ಸಾನ್‌ ಕಾರು.ಈ ಕಾರಿಗೆ ಮಹಾರಾಷ್ಟ್ರದಲ್ಲಿ 2.5 ಲಕ್ಷ ರೂ.ವರೆಗೆ ಸಹಾಯ ಧನ ಕೂಡ ನೀಡಲಾಗುತ್ತಿದೆ. ಈ ರಾಜ್ಯದಲ್ಲೇ ಅತಿಹೆಚ್ಚು ”ನೆಕ್ಸಾನ್‌ ಇವಿ” ಮಾಡೆಲ್‌ ಕಾರುಗಳ ಬುಕ್ಕಿಂಗ್‌ ಆಗಿದೆ. ಹಾಗಾಗಿ ಬುಕ್ಕಿಂಗ್‌ ಕಾಯುವಿಕೆ ಅವಧಿಯು 6 ತಿಂಗಳವರೆಗೆ ವಿಸ್ತರಣೆಗೊಂಡಿದೆ.ಒಂದು ಬಾರಿ ಪೂರ್ತಿ ಬ್ಯಾಟರಿ ಚಾರ್ಜ್‌ ಮಾಡಿದರೆ 312 ಕಿ.ಮೀ. ವರೆಗೆ ಸಂಚರಿಸಬಹುದಾಗಿದೆ ಎಂದು ಕಂಪನಿ ಘೋಷಿಸಿಕೊಂಡಿದೆ. ಆದರೆ, ಕಾರು ಮಾಲೀಕರ ಪ್ರಕಾರ ಒಂದು ಬಾರಿಯ ಪೂರ್ಣ ಚಾರ್ಜ್‌ಗೆ ಸಿಗುವುದು 220 ಕಿ.ಮೀ. ಮಾತ್ರವೇ ಸರಿ.ಅಲ್ಲದೇ, ಈ ಕಾರಿನ ಬೆಲೆಯೇನೂ ಕಡಿಮೆ ಇಲ್ಲ. ದೇಶೀಯ ಉತ್ಪಾದನೆ ಕಾರು ಆಗಿರುವ ಕಾರಣ ತನ್ನ ಪ್ರತಿಸ್ಪರ್ಧಿ ಎಲೆಕ್ಟ್ರಿಕ್‌ ಕಾರು ಕಂಪನಿಗಳ ಮಾಡೆಲ್‌ಗಳಿಗಿಂತ ಕಡಿಮೆ ಬೆಲೆಗೆ ನೆಕ್ಸಾನ್‌ ಮಾರುಕಟ್ಟೆಯಲ್ಲಿ ಲಭ್ಯವಿದೆ. 14-17 ಲಕ್ಷ ರೂ.ಗೆ ನೆಕ್ಸಾನ್‌ ಇವಿ ಕಾರನ್ನು ನಿಮ್ಮದಾಗಿಸಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಜೂಹಿ ಚಾವ್ಲಾ:ಕಾವೇರಿ ಕೂಗು ಯಶಸ್ಸು ದೇಶಕ್ಕೆ ಹರಡಬೇಕು ̤

Thu Feb 3 , 2022
  ಚೆನ್ನೈ: ಸದ್ಗುರು ಜಗ್ಗಿ ವಾಸುದೇವ್‌ ಅವರು ನಡೆಸುತ್ತಿರುವ ಕಾವೇರಿ ಕೂಗು ಅಭಿಯಾನದ ಯಶಸ್ಸು ಭಾರತದಾ ದ್ಯಂತ ಹರಡಬೇಕು ಎಂದು ಬಾಲಿವುಡ್‌ ನಟಿ ಜೂಹಿ ಚಾವ್ಲಾ ಹೇಳಿದ್ದಾರೆ.ಇತ್ತೀಚೆಗೆ ತಮಿಳುನಾಡಿನ ಈರೋಡ್‌ ಜಿಲ್ಲೆಯ ಮೇವಾಣಿ ಗ್ರಾಮದಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಈ ಮಾತನ್ನು ಹೇಳಿದ್ದಾರೆ.“ಅಭಿಯಾನ ದಿಂದಾಗಿ ರೈತರ ಬದುಕಿನಲ್ಲಿ ಉಂಟಾಗಿ ರುವ ಬದಲಾವಣೆಯನ್ನು ಕಂಡು ನನಗೆ ಸದ್ಗುರು ಬಗ್ಗೆ ಇದ್ದ ಗೌರವ ಇನ್ನಷ್ಟು ಹೆಚ್ಚಿದೆ. ಅವರ ಅಭಿಯಾನಕ್ಕೆ ಅಳಿಲು […]

Advertisement

Wordpress Social Share Plugin powered by Ultimatelysocial