ಆರ್.ಚಂದ್ರು ಸಾರಥ್ಯದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ನಟನೆಯ ಕಬ್ಜ ಸಿನಿಮಾದ ನಮಾಮಿ ನಮಾಮಿ ಹಾಡು ಸಖತ್ ವೈರಲ್ ಆಗ್ತಾ ಇದೆ. ಎರಡು ದಿನಗಳ ಹಿಂದೆ ಐದು ಭಾಷೆಗಳಲ್ಲಿ ಬಿಡುಗಡೆಯಾದ ಶ್ರಿಯಾ ಶರಣ್ ಕಂಗೊಳಿಸಿರುವ ಹಾಡು ಎಲ್ಲಾ ಭಾಷೆಯಗಳಲ್ಲೂ ಮೆಚ್ಚುಗೆಯನ್ನ ಪಡೆಯುತ್ತಿದೆ. ಈಗ ಈ ಹಾಡಿಗೆ ಶ್ರೀಸಾಮಾನ್ಯರು ರೀಲ್ಸ್ ಮಾಡ್ತಿರೋದು ವಿಶೇಷ.
ಈ ವಾರ ತೆರೆಯ ಮುಂದೆ ಗೌಳಿ ಸಿನಿಮಾ
ಸೂರ ನಿರ್ದೇಶನದ ರಘು ಸಿಂಗಂ ನಿರ್ಮಾಣದ ಶ್ರೀನಗರ ಕಿಟ್ಟಿ ನಟನೆಯ ಬಹುನಿರೀಕ್ಷಿತ ಸಿನಿಮಾ ಗೌಳಿ ಈ ವಾರ ಪ್ರೇಕ್ಷಕರ ಮುಂದೆ ಬರಲಿದೆ. ಟೀಸರ್ ಮತ್ತು ಒಂದು ಖಡಕ್ ಟ್ರೈಲರ್ನಿಂದ ಸದ್ದು ಮಾಡುತ್ತಿರುವ ಗೌಳಿ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ಗೌಳಿ ಸಿನಿಮಾದ ಮೂಲಕ ಶ್ರೀನಗರ ಕಿಟ್ಟಿ ಕಂಬ್ಯಾಕ್ ಮಾಡೇ ಮಾಡ್ತಾರೆ ಎಂದು ಗಾಂಧಿನಗರ ಭವಿಷ್ಯ.
ಭೋಲಾ ಶಂಕರ್ ಮೋಷನ್ ಪೋಸ್ಟರ್
ಮೆಗಾಸ್ಟಾರ್ ಚಿರಂಜೀವಿ ನಟನೆಯ ಹೊಸ ಸಿನಿಮಾ ಭೋಲಾ ಶಂಕರ್ ಸಿನಿಮಾದ ಮೋಷನ್ ಪೋಸ್ಟರ್ ಶಿವರಾತ್ರಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಈ ವರ್ಷ ಚಿರಂಜೀವಿ ಅವರು ವಾಲ್ಟೇರು ವೀರಯ್ಯ ಸಿನಿಮಾದ ಮೂಲಕ ಪ್ರೇಕ್ಷಕರನ್ನ ರಂಜಿಸಿದ್ದಾರೆ. ಮುಂಬರುವ ಏಪ್ರಿಲ್ 14 ರಂದು ಭೋಲಾ ಶಂಕರ್ ಸಿನಿಮಾ ತೆರೆಕಾಣಲಿದೆ.
ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ಮೇಘನಾ ರಾಜ್
ತನ್ನ ಪತಿ ಚಿರಂಜೀವಿ ಸರ್ಜಾ ಅಗಲಿದ ನಂತರ ಎರಡು ವರ್ಷ ಸಿನಿಮಾ ರಂಗದಿಂದ ದೂರವಿದ್ದ ಮೇಘನಾ ರಾಜ್ ಸರ್ಜಾ ಈಗ ಮತ್ತೆ ತೆರೆಯ ಮೇಲೆ ಪ್ರೇಕ್ಷಕರನ್ನ ರಂಜಿಸಲು ಸಜ್ಜಾಗುತ್ತಿದ್ದಾರೆ. ಎರಡ್ಮೂರು ಸಿನಿಮಾಗಳಲ್ಲಿ ಬ್ಯುಸಿ ಇರೋ ವಿಚಾರವನ್ನ ಮೇಘನಾ ಈ ಹಿಂದೆ ಹೇಳಿಕೊಂಡಿದ್ದರು. ಆದ್ರೆ ಸಿನಿಮಾ ಹೆಸರೇನು ಅನ್ನೋ ಗುಟ್ಟನ್ನ ಬಿಟ್ಟುಕೊಟ್ಟಿರಲಿಲ್ಲ ಮೇಘನಾ. ಶಿವರಾತ್ರಿ ಹಬ್ಬದ ಪ್ರಯುಕ್ತ ತನ್ನ ಮುಂದಿನ ಸಿನಿಮಾ ಹೆಸರು ತತ್ಸಮ ತದ್ಭವ ಎಂದು ಅಭಿಮಾನಿಗಳಿಗೆ ಸೋಶಿಯಲ್ ಮೀಡಿಯಾದ ಮೂಲಕ ತಿಳಿಸಿದ್ದಾರೆ ಮೇಘನಾ ರಾಜ್ ಸರ್ಜಾ.
ಶಿವಣ್ಣ ಸಿನಿ ಜರ್ನಿಗೆ ಜಸ್ಟ್ 37 ವರ್ಷ
ಆನಂದ್ ಸಿನಿಮಾದ ಮೂಲಕ ಆನಂದವಾಗಿ ಪ್ರೇಕ್ಷಕರ ಮನಸ್ಸಿನಲ್ಲಿ ವಿರಾಜಮಾನರಾಗಿರುವ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಅವರ ಸಿನಿಮಾ ಕರಿಯರ್ಗೆ ಇಂದಿಗೆ 37ವರ್ಷ ತುಂಬಿದೆ. ವೇದ ಯಶಸ್ವಿ 50ದಿನ ಪುರೈಸಿದ ಸಂತಸದಲ್ಲಿರುವ ಶಿವಣ್ಣ ಅವರು ಶಿವರಾತ್ರಿ ಪ್ರಯುಕ್ತ ನಿರ್ದೇಶಕ ನರ್ತನ್ ಜೊತೆಗೆ ರಣಗಲ್ ಸಿನಿಮಾವನ್ನ ಘೋಷಣೆ ಮಾಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada