ಏನ್ ದನಾ ಕಾಯಕ್ಕೆ ಹೋಗಿದ್ದಾನಾ ಇಲ್ಲಾ ಎಮ್ಮೆ ಮೇಯ್ಸಕ್ಕೆ ಹೋಗಿದ್ದಾನ ಪತ್ತೆನೇ ಇಲ್ವಲ್ಲ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ವಿರುದ್ಧ ಹರಿಹಾಯ್ದ ಸಂಸದ ಶ್ರೀನಿವಾಸ್ ಪ್ರಸಾದನಂಜನಗೂಡಿನ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿ ಅವರು ಮಾತನಾಡುತ್ತಾ ಕಾಂಗ್ರೆಸ್ ನಾಯಕರನ್ನು ಕುಟುಕಿದರು ಉಪಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಯಾರು ಅಭ್ಯರ್ಥಿ ಇಲ್ಲದೆ ಜೆಡಿಎಸ್ ನಲ್ಲಿದ್ದ ಕೇಶವಮೂರ್ತಿಯನ್ನು ದೊಡ್ಡ ಲೀಡರ್ ಎಂದು ಕರೆತಂದಿದ್ದರು ಈಗ ಅವನೆಲ್ಲಿ ಎಂದು ವ್ಯಂಗ್ಯವಾಡಿದರು.ಈಗ ಅವನ ಸ್ಥಾನಕ್ಕೆ ಮಹದೇವಪ್ಪ ಮತ್ತು ದ್ರುವ ನಾರಾಯಣ ಇಬ್ಬರು ಕಚ್ಚಾಡುತ್ತಿದ್ದಾರೆ ಎಂದು ಛೇಡಿಸಿದರು .ನಾವು ಈ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇವೆ ಇನ್ನೆರಡು ತಿಂಗಳಲ್ಲಿ ಚುನಾವಣೆ ಬರುತ್ತಿದ್ದು ನಮ್ಮ ವಿರೋಧಿಗಳು ನಿಮ್ಮ ಬಳಿ ಬಂದಾಗ ಕೇಶವಮೂರ್ತಿಯನ್ನು ಗೆಲ್ಲಿಸಿ ಎರಡು ವರ್ಷದಲ್ಲಿ ಎಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದೀರಿ ಎಂಬ ಪ್ರಶ್ನೆ ಮಾಡಿ ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada