`ಹೆಬ್ಬುಲಿ’ ನಟಿ ಅಮಲಾ ಪೌಲ್ ಗೆ ದೇವಸ್ಥಾನದಲ್ಲಿ ಅವಮಾನ.

 

ಹುಭಾಷಾ ನಟಿ ಅಮಲಾ ಪೌಲ್ ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ಭೇಟಿ ನೀಡಿದ್ದ ವೇಳೆ ಕಹಿ ಅನುಭವವಾಗಿದೆ. ದೇವಸ್ಥಾನದ ಬಾಗಿಲಲ್ಲೇ ನಟಿಗೆ ಅವಮಾನ ಮಾಡಲಾಗಿದೆ.

ಕೇರಳದ ಮಹಾದೇವ ದೇವಸ್ಥಾನಕ್ಕೆ ನಟಿ ಅಮಲಾ ಪೌಲ್ ಭೇಟಿ ನೀಡಿದ್ದರು.

ಈ ವೇಳೆ ದೇವಸ್ಥಾನಕ್ಕೆ ಪ್ರವೇಶ ನೀಡಲು ಅಲ್ಲಿನ ಅಧಿಕಾರಿಗಳು ನಿರಾಕರಿಸಿದ್ದರು. ಒಳಗಡೆ ಬರಬೇಡಿ, ಹೊರಗಡೆಯೇ ದೇವರ ದರ್ಶನ ಪಡೆದು ಹೋಗಿ ಎಂದು ಹೇಳಿದ್ದಾರೆ.

ದೇಶದ ಕೆಲವು ಹಿಂದೂ ಧರ್ಮದ ದೇವಾಲಯದಲ್ಲಿ ಅನ್ಯ ಧರ್ಮದವರಿಗೆ ಪ್ರವೇಶ ನೀಡುವುದಿಲ್ಲ. ಈ ನಿಯಮಗಳನ್ನ ಅಲ್ಲಿನ ಅರ್ಚಕರು, ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಅದರಂತೆಯೇ ಕೇರಳದ ಎರ್ನಾಕುಲಂನಲ್ಲಿರುವ ತಿರುವೈರಾನಿಕುಲಂ ಮಹಾದೇವ ದೇವಸ್ಥಾನಕ್ಕೆ ಅಮಲಾ ಬರದಂತೆ ತಡೆದಿದ್ದಾರೆ. ಅಮಲಾ ಪೌಲ್ ಕ್ರಿಶ್ಚಿಯನ್ ಧರ್ಮದವರು ಆಗಿರುವ ಕಾರಣ ದೇವಸ್ಥಾನದ ಪ್ರವೇಶಕ್ಕೆ ನಿರಾಕರಿಸಲಾಗಿದೆ.

ಇನ್ನು ನಟಿ ಅಮಲಾ ಪೌಲ್ ದೇವಸ್ಥಾನದ ನೋಂದಣಿ ಪುಸ್ತಕದಲ್ಲಿ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ. 2023ರಲ್ಲೂ ಧಾರ್ಮಿಕ ತಾರತಮ್ಯ ಇನ್ನೂ ಅಸ್ತಿತ್ವದಲ್ಲಿದೆ ಎನ್ನುವುದು ದುಃಖಕರ ವಿಷಯವಾಗಿದೆ. ನನಗೆ ದೇವಾಲಯ ಪ್ರವೇಶಿಸಲು ನಿರಾಕರಿಸಿದರೂ ದೂರದಿಂದಲೇ ದೈವಿಕ ಅನುಭವವಾಯಿತು. ನಾನು ಮನಸ್ಸಿನಲ್ಲೇ ಪ್ರಾರ್ಥಿಸಿದೆ. ಆದಷ್ಟು ಬೇಗ ಈ ಧಾರ್ಮಿಕ ತಾರತಮ್ಯ ಬದಲಾಗಲಿ ಎಂದು ಆಶಿಸುತ್ತೇನೆ. ನಾವೆಲ್ಲರೂ ಒಂದೇ ಎಂದು ಎಲ್ಲರನ್ನು ಸಮಾನವಾಗಿ ಪರಿಗಣಿಸುವ ಸಮಯ ಬರುತ್ತದೆ ಎಂದು ಅಮಲಾ ಬರೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಇದೀಗ ಹೊಸ ಚಿತ್ರ.

Thu Jan 19 , 2023
ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಇದೀಗ ಹೊಸ ಚಿತ್ರ ಮಿಸ್ಟರ್ ನಟ್ವರ್ ಲಾಲ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅಭಿನಯದ 1979ರ ಹಿಂದಿ ಹಿಟ್ ಚಲನಚಿತ್ರದ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರವು ಕ್ರೈಮ್-ಆಯಕ್ಷನ್ ಥ್ರಿಲ್ಲರ್ ಆಗಿದೆ. ಮಡಮಕ್ಕಿ ಮತ್ತು ನಂಜುಂಡಿ ಕಲ್ಯಾಣ ಚಿತ್ರದ ನಾಯಕ ತನುಷ್ ಶಿವಣ್ಣ ಇದೀಗ ಹೊಸ ಚಿತ್ರ ಮಿಸ್ಟರ್ ನಟ್ವರ್ಲಾಲ್ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಬಾಲಿವುಡ್ […]

Advertisement

Wordpress Social Share Plugin powered by Ultimatelysocial