ಕೃಷಿಕರ ಸಮಸ್ಯೆ ಬಗೆಹರಿಸುವ ಸ್ಟಾರ್ಟಪ್‌ಗೆ ಪ್ರೋತ್ಸಾಹ.

ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿರುವ ಕೇಂದ್ರ ಸರ್ಕಾರವು, ಕೃಷಿಯಾಧಾರಿತ ತಂತ್ರಜ್ಞಾನ ಕ್ಷೇತ್ರದಲ್ಲಿನ ಸ್ಟಾರ್ಟಪ್‌ಗೆ ಪ್ರೋತ್ಸಾಹ ನೀಡಲು ನಿಧಿ ಸ್ಥಾಪಿಸಲಿದೆ.ಬುಧವಾರ ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್‌ನಲ್ಲಿ ಈ ವಿಷಯ ಪ್ರಕಟಿಸಲಾಗಿದ್ದು, ಗ್ರಾಮೀಣ ಭಾಗದಲ್ಲಿ ಸ್ಟಾರ್ಟಪ್‌ಗಳನ್ನು ಪ್ರಾರಂಭಿಸುವ ಯುವಕರಿಗೆ ಪ್ರೋತ್ಸಾಹ ನೀಡಲು ಈ ನಿಧಿಯನ್ನು ಸ್ಥಾಪಿಸಲಾಗುತ್ತಿದೆ. ಮುಖ್ಯವಾಗಿ ಕೃಷಿಕರ ಸಮಸ್ಯೆಗಳಿಗೆ ಪರಿಹಾರ ರೂಪಿಸುವ ಸ್ಟಾರ್ಟಪ್‌ಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.ಕೃಷಿ ಕ್ಷೇತ್ರಕ್ಕೆ ನೀಡಲಾಗುವ ಸಾಲದ ಮೊತ್ತವನ್ನು ಹೆಚ್ಚಿಸಲಾಗಿದ್ದು, 20 ಲಕ್ಷ ಕೋಟಿ ಎಂದು ಈ ಬಾರಿಯ ಬಜೆಟ್‌ನಲ್ಲಿ ನಿಗದಿಪಡಿಸಲಾಗಿದೆ.ಅಲ್ಲದೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸೊಸೈಟಿಗಳನ್ನು ಕಂಪ್ಯೂಟರೀಕರಣವನ್ನು ಈ ಬಜೆಟ್‌ನಲ್ಲಿ ಘೋಷಿಸಲಾಗಿದೆ. ದೇಶದ 63,000 ಸಾವಿರ  ಸೊಸೈಟಿಗಳನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತದೆ. ಇದಕ್ಕಾಗಿ 2,516 ಕೋಟಿ ತೆಗೆದಿರಿಸಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು.

Wed Feb 1 , 2023
ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತು ಖಂಡಿತ ಕೇಳಿರುತ್ತೀರಿ. ಆರೋಗ್ಯ ಚೆನ್ನಾಗಿದ್ದರೆ ಅದುವೇ ದೊಡ್ಡ ಆಸ್ತಿ. ತುಂಬಾ ಆಸ್ತಿ ಇದೆ, ಸಂಪತ್ತು ಇದೆ, ಒಳ್ಳೆಯ ಉದ್ಯೋಗವಿದೆ ಹೀಗೆ ಎಲ್ಲವೂ ಇದ್ದು ದೈಹಿಕ, ಮಾನಸಿಕ ಆರೋಗ್ಯ ಸರಿಯಿಲ್ಲನೀವು ಜಿಮ್‌ಗೆ ಹೋಗುವುದಾದರೆ ಒಳ್ಳೆಯ ಜಿಮ್‌ ಟ್ರೈನರ್‌ ಬಳಿ ಹೋಗಿ, ಯೋಗ ಅಭ್ಯಾಸ ಮಾಡುವುದಾದರೆ ಒಳ್ಳೆಯ ಯೋಗ ಟ್ರೈನರ್ ಬಳಿ ಹೋಗಿ.ಯೂಟ್ಯೂಬ್ ನೋಡಿ ಅಭ್ಯಾಸ ಮಾಡಲು ಹೋಗಬೇಡಿ, ಇನ್ನು ಯಾವುದೇ ವ್ಯಾಯಾಮ ಮಾಡುವುದಾದರೆ ಶಿಸ್ತು […]

Advertisement

Wordpress Social Share Plugin powered by Ultimatelysocial