ಟಾಲಿವುಡ್ ನಲ್ಲಿ ವಿಲನ್ ಆಗಿ ದುನಿಯಾ ವಿಜಯ್ ಎಂಟ್ರಿ..!ಖಳನಾಯಕನಾಗಿ ಬಾಲಯ್ಯನ ವಿರುದ್ಧ ‘ಸಲಗ’ನ ಅಬ್ಬರ

ದುನಿಯಾ ಮೂಲಕ ನಾಯಕನಟನಾಗಿ ಎಂಟ್ರಿಯಾಗಿದ್ದರು. ಇತ್ತೀಚೆಗೆ ಬಿಡುಗಡೆಯಾದ ‘ಸಲಗ’ ಸಿನಿಮಾ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದವರು. ಸಲಗ ಸಿನಿಮಾದಲ್ಲಿ ನಟನೆ ಜೊತೆ ನಿರ್ದೇಶಕ ಜವಾಬ್ದಾರಿ ಹೊತ್ತು ದುನಿಯಾ ವಿಜಯ್​ ಸಕ್ಸಸ್​ ಆಗಿದ್ದಾರೆ. ಸ್ಯಾಂಡಲ್​ವುಡ್ನಲ್ಲಿ ಕರಿಚಿರತೆ ಸಾಮರ್ಥ್ಯ ಏನು ಎಂಬುದನ್ನು ಸಲಗ ಸಿನಿಮಾ ಮೂಲಕ ತೋರಿಸಿಕೊಟ್ಟಿದ್ದಾರೆ.

ಸಲಗ ಬಳಿಕ ದುನಿಯಾ ವಿಜಯ್‌ಗೆ ಮತ್ತೊಂದು ಅದೃಷ್ಟದ ಬಾಗಿಲು ತೆರೆದಿದೆ. ದುನಿಯಾ ವಿಜಯ್‌ ತೆಲುಗಿಗೆ ಎಂಟ್ರಿ ಕೊಡ್ತಿದ್ದಾರೆ. ಈ ವಿಚಾರ ಹಲವು ದಿನಗಳಿಂದ ಹರಿದಾಡುತ್ತಿದೆ.

ದುನಿಯಾ ವಿಜಯ್ ಸೈಡ್ ಆರ್ಟಿಸ್ಟ್​, ಜೂನಿಯರ್ ಆರ್ಟಿಸ್ಟ್​, ಫೈಟರ್​ ಆಗಿ ಸ್ಯಾಂಡಲ್​ವುಡ್​ನಲ್ಲಿ ನೆಲೆ ಕಂಡುಕೊಳ್ಳಲು ಹೋರಾಟ ನಡೆಸಿದವರು. ಟೈಗರ್​ ಪ್ರಭಾಕರ್​ರಂತೆ ಮಾಸ್ ಸಿನಿಮಾಗಳಿಗೆ ದುನಿಯಾ ವಿಜಯ್ ಟ್ರೇಡ್​ ಮಾರ್ಕ್ ಆದವರು. ಸಲಗ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸೆಕಂಡ್​ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಇದೀಗ ಹೊಸ ವಿಚಾರ ಏನಪ್ಪ ಅಂದರೆ, ದುನಿಯಾ ವಿಜಯ್​ ಟಾಲಿವುಡ್ ಅಖಂಡನ ವಿರುದ್ಧ ತೊಡೆ ತಟ್ಟಲಿದ್ದಾರೆ.ಸಲಗ ಚಿತ್ರದ ಬಳಿಕ ತೆಲುಗು ಚಿತ್ರರಂಗದ ಕಡೆ ವಿಜಯ್ ಹೆಜ್ಜೆ ಇಟ್ಟಿದ್ದಾರೆ.

ತೆಲುಗಿನ ಸ್ಟಾರ್ ನಟ ನಂದಮೂರಿ ಬಾಲಕೃಷ್ಣ ಅವರ ಮುಂದಿನ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅಭಿನಯಿಸುತ್ತಿದ್ದಾರೆ. ಈ ಚಿತ್ರಕ್ಕೆ ಕ್ರ್ಯಾಕ್ ಡೈರೆಕ್ಟರ್ ಗೋಪಿ ಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ದುನಿಯಾ ವಿಜಯ್​ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ? ಯಾವ ಲುಕ್​ನಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಸಾಕಷ್ಟು ಕುತೂಹಲಗಳು ಹುಟ್ಟಿಕೊಂಡಿದೆ. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ದುನಿಯಾ ವಿಜಯ್​ ಅವರ ಮುಂದಿನ ಟಾಲಿವುಡ್ ಸಿನಿಮಾದ ಲುಕ್​ ರಿವೀಲ್​ ಆಗಿದೆ. ಕರಿಚಿರತೆ ನ್ಯೂ ಲುಕ್​ ಕಂಡು ಫ್ಯಾನ್ಸ್​ ಫುಲ್​ ಥ್ರಿಲ್​ ಆಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುಂದಿನ ಒಂದು ತಿಂಗಳು ʼಕೊರೊನಾ ಮಾರ್ಗಸೂಚಿ ವಿಸ್ತರಿಸಿʼ, ಕೇಂದ್ರ ಆರೋಗ್ಯ ಸಚಿವಾಲಯ ಆದೇಶ

Mon Dec 27 , 2021
ನವದೆಹಲಿ : ದೇಶದಲ್ಲಿ ಮಹಾಮಾರಿ ಕೊರೊನಾ ಸೋಂಕಿನ ಹವಾಳಿ ಮತ್ತೆ ಶುರುವಾಗಿದ್ದು, ಒಮಿಕ್ರಾನ್‌ ರೂಪಾಂತರದ ಹರಡುವಿಕೆ ವ್ಯಾಪಕವಾಗ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳನ್ನ ಒಂದು ತಿಂಗಳು ಮುಂದುವರಿಸುವಂತೆ ಆದೇಶ ಹೊರಡಿಸಿದೆ. ಒಮಿಕ್ರಾನ್‌ ಹಿನ್ನೆಲೆ ಆರೋಗ್ಯ ಸಚಿವಾಲಯದಿಂದ ಮಾರ್ಗಸೂಚಿ ಹೊರಡಿಸಲಾಗಿದ್ದು, ಮಾರ್ಗಸೂಚಿ ಪಾಲಿಸುವಂತೆ ಮತ್ತು ಆ ಮಾರ್ಗಸೂಚಿಗಳನ್ನ ಒಂದು ತಿಂಗಳು ಮುಂದುವರಿಸಿ ಎಂದಿದೆ. ಇನ್ನು ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾ, ಸ್ಥಳೀಯ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೇ ಕರ್ಫ್ಯೂ, […]

Advertisement

Wordpress Social Share Plugin powered by Ultimatelysocial