ಬಹುಭಾಷಾ ನಟ ಸುದೀಪ್ ಅವರ ಸಿನಿ ಪಯಣಕ್ಕೀಗ 26 ವರ್ಷ. ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಕಿಚ್ಚ ಸುದೀಪ್ ಛಾಪು ಮೂಡಿಸಿದ್ದಾರೆ.ಬಾಲಿವುಡ್ನಲ್ಲಿ, ಟಾಲಿವುಡ್ನಲ್ಲಿ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಸುದೀಪ್ಗೆ ಅಭಿಮಾನಿಗಳು ಪ್ರೀತಿಯಿಂದ ನಾನಾ ಬಿರುದುಗಳನ್ನು ನೀಡಿದ್ದಾರೆ.ಹಲವು ಸೂಪರ್ಹಿಟ್ ಚಿತ್ರಗಳನ್ನು ನೀಡಿದ ಖ್ಯಾತಿ ಕಿಚ್ಚ ಅವರಿಗಿದೆ. ಅಷ್ಟೇ ಅಲ್ಲ, ಪರಭಾಷೆಗೂ ತೆರಳಿ ಹಿಟ್ ಚಿತ್ರ ನೀಡಿದ್ದು ಸುದೀಪ್ ಹೆಚ್ಚುಗಾರಿಕೆ.’ಈ 26 ವರ್ಷಗಳ ಪಯಣ ನಿಮ್ಮಿಂದಾಗಿ ಬಹಳ ಸ್ಮರಣೀಯವಾಗಿತ್ತು. ಎಲ್ಲವುದಕ್ಕೂ ನಿಮಗೆ ಧನ್ಯವಾದ. ಈ ಸಂದರ್ಭದಲ್ಲಿ ಚಿತ್ರರಂಗದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಸಾವಿರಾರು ಅಭಿಮಾನಿಗಳು ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿ ಶುಭಾಶಯ ಕೋರಿದ್ದಾರೆ. ಇದನ್ನು ಅಭಿಮಾನಿಗಳುಈ ಪಯಣದಲ್ಲಿ ಜೊತೆಗಿದ್ದ ಪತ್ನಿಗೂ ಸುದೀಪ್ ಟ್ವೀಟ್ನಲ್ಲಿ ಧನ್ಯವಾದ ತಿಳಿಸಿದ್ದಾರೆ. ‘ನನ್ನ ಜೊತೆ ನೀನು ಈ ಪಯಣದಲ್ಲಿ 26 ವರ್ಷ ಕಳೆದಿದ್ದಿ. ಈ ಸಂದರ್ಭದಲ್ಲಿ ನೀನು ಮಾಡಿದ ತ್ಯಾಗಕ್ಕೆ ನಾನು ಎಷ್ಟು ಧನ್ಯವಾದ ಹೇಳಿದರೂ ಕಮ್ಮಿಯೇ. ನನಗೆ ಶಕ್ತಿಯಾಗಿ ನಿಂತಿರುವುದಕ್ಕೆ ಧನ್ಯವಾದ. ಕೆಲಸಕ್ಕೆ ಸಂಬಂಧಿಸಿದಂತೆ ಆಡಿದ ಚುಚ್ಚುಮಾತುಗಳಿಗೂ ಧನ್ಯವಾದ, ಇದರಿಂದ ನನ್ನ ನಟನೆಯಲ್ಲಿ ನಾನು ಮತ್ತಷ್ಟು ಸುಧಾರಣೆಯನ್ನು ಮಾಡಿಕೊಂಡಿದ್ದೇನೆ’ ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.’ಕೋಟಿಗೊಬ್ಬ-3′ ಚಿತ್ರದ ಬಳಿಕ, ಸುದೀಪ್ ಅವರು ನಟಿಸಿರುವ ಬಹುನಿರೀಕ್ಷೆಯ ಬಿಗ್ಬಜೆಟ್ ಸಿನಿಮಾ ‘ವಿಕ್ರಾಂತ್ ರೋಣ’ ಬಿಡುಗಡೆಗೆ ಅಭಿಮಾನಿಗಳು ಕಾಯುತ್ತಿದ್ದಾರೆ. ಫೆ.24ರಂದು ಬಿಡುಗಡೆಯಾಗಬೇಕಿದ್ದ ಈ ಸಿನಿಮಾ ಮುಂದೂಡಲ್ಪಟ್ಟಿದ್ದು, ಶೀಘ್ರದಲ್ಲೇ ಹೊಸ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಚಿತ್ರತಂಡ ಇತ್ತೀಚೆಗಷ್ಟೇ ತಿಳಿಸಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada