ವಿವಾಹಿತ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ .

ಮಂಗಳೂರು: ವಿವಾಹಿತ ಮಹಿಳೆಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಟೆಕಾರು ಸಮೀಪ ಮಾಡೂರು ಎಂಬಲ್ಲಿ ಭಾನುವಾರ (ಜ.22) ಸಂಜೆ ನಡೆದಿದೆ.

ಮಾಡೂರು ನಿವಾಸಿ ಚಂದ್ರಶೇಖರ -ಗಿರಿಜ ಅವರ ಪುತ್ರಿ ದಿವ್ಯ (26 ವರ್ಷ) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಜ.21 ರಂದು ದಿವ್ಯ ತನ್ನ ಗಂಡನೊಂದಿಗೆ ನೆರೆಮನೆಯ ಕಾರ್ಯಕ್ರಮವೊಂದಕ್ಕೆ ಹೋಗಿದ್ದು, ಅಲ್ಲಿ ಗಂಡ-ಹೆಂಡತಿ ನಡುವೆ ಮನಸ್ತಾಪವಾಗಿರುವುದರಿಂದ ದಿವ್ಯ ಒಬ್ಬರೆ ಮನೆಗೆ ಹಿಂತಿರುಗಿದ್ದಾರೆ. ಬಳಿಕ ಜ.22 ರಂದು ಸಂಜೆ ಮನೆಯ ಬೆಡ್‌ ರೂಂನಲ್ಲಿ ದಿವ್ಯ ನೇಣುಬಿಗಿದುಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಘಟನೆಯ ಬಳಿಕ ತಾಯಿ ಗಿರಿಜಾ ಕೂಡಲೇ ದಿವ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿ ವೈದ್ಯರು ಪರೀಕ್ಷಿಸಿ, ಆದಾಗಲೇ ದಿವ್ಯ ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ದಿವ್ಯ ಒಂದೂವರೆ ವರ್ಷದ ಹಿಂದೆ ಹರೀಶ್‌ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು.

ಈ ಕುರಿತು ದಿವ್ಯ ಅವರ ತಾಯಿ ಗಿರಿಜಾ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನೇಕ ಕೆರೆಗಳು ವಾಡೆದು ಹೋಗಿದ್ದನ್ನು ನಾವು ಕಾಣಬಹುದು.

Mon Jan 23 , 2023
ಪ್ರಸಕ್ತ ವರ್ಷ ಮಳೆ ಹೆಚ್ಚಾಗಿ ಅತಿವೃಷ್ಟಿಯಿಂದ ಕೆರೆ ಕಟ್ಟೆಗಳು, ಹಳ್ಳ ಕೊಳ್ಳ ತುಂಬಿ ಹರಿದು ಕೋಡಿ ಬಿದ್ದಿದ್ದು ಅನೇಕ ಕೆರೆಗಳು ಪಡೆದು ಹೋಗಿದ್ದನ್ನು ನಾವು ಕಾಣಬಹುದು. ಲಕ್ಷ್ಮೇಶ್ವರ ತಾಲೂಕಿನ ಶೆಟ್ಟಿಕೆರೆಯ ಗ್ರಾಮದಲ್ಲಿರುವ ಕೆರೆ ವಿಸ್ತಾರವಾದ ಕೆರೆಯಾಗಿದ್ದು, ಗುಡ್ಡದ ನಡುವೆ ಸುಂದರವಾಗಿರುವ ಈ ಕೆರೆಯ ಅಳಿವಿನಂಚಿನಲ್ಲಿರುವ ನೀರು ನಾಯಿಗಳನ್ನು ಕಾಣಬಹುದು. ಭಾರತದ ಕಾಶ್ಮೀರ, ಅಸ್ಸಾಂ ಹಾಗೂ ದಕ್ಷಿಣ ಭಾರತದಲ್ಲಿ ಅನೇಕ ಕಡೆ ಹಾಗೂ ತುಂಗಾಭದ್ರಾ ನದಿಯಲ್ಲಿ ಕಂಡು ಬರುವ ಈ ಪ್ರಾಣಿಗಳು […]

Advertisement

Wordpress Social Share Plugin powered by Ultimatelysocial