ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ದೃಶ್ಯ ಮಾಧ್ಯಮದವರಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಪತ್ರಕರ್ತರು ಪ್ರತಿಭಟಿಸಿದರು. ನಂತರ ಸ್ಪೀಕರ್ ಮಧ್ಯಪ್ರವೇಶದಿಂದ ಗೊಂದಲ ನಿವಾರಣೆಯಾಗಿರುವುದು ವರದಿಯಾಗಿದೆ.
ವಿಧಾನಸೌಧದಲ್ಲಿ ದೃಶ್ಯ ಮಾಧ್ಯಮದ ಪರ್ತಕರ್ತರನ್ನು ಒಳಹೋಗದಂತೆ ತಡೆದಿದ್ದು, ಇದರಿಂದ ಪತ್ರಕರ್ತರು ಪ್ರತಿಭಟನೆ ನಡೆಸಿದ್ದಾರೆ.
ವಿಧಾನಸೌಧದ ಒಳಹೋಗಲು ಯತ್ನಿಸಿದ ಪತ್ರಕರ್ತರನ್ನು ಪೊಲೀಸರು ತಡೆದಿದ್ದಾರೆ. ಯಾವ ಕಾರಣಕ್ಕೂ ಒಳಗೆ ಬಿಡುವುದಿಲ್ಲ ಎಂದಿದ್ದು, ಮಾಧ್ಯಮದವರು ಪ್ರತಿಭಟನೆ ನಡೆಸುವುದಕ್ಕೆ ಕಾರಣವಾಗಿದೆ.
ಮತಾಂತರ ನಿಷೇಧ ಕಾಯ್ದೆ ಚರ್ಚೆ ಹಿನ್ನೆಲೆಯಲ್ಲಿ ಮಾಧ್ಯಮದವರನ್ನು ಒಳಗೆ ಬಿಡಲಿಲ್ಲ ಎನ್ನಲಾಗಿದೆ. ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಂದು ಒಳಗೆ ಬಿಡುವಂತೆ ಸೂಚನೆ ನೀಡಿದ್ದಾರೆ. ಮಾಧ್ಯಮಗಳ ಪ್ರವೇಶದ ಬಗ್ಗೆ ನಾನು ಯಾವುದೇ ಸೂಚನೆ ನೀಡಿಲ್ಲ ಎಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada