ಹೆಂಡತಿ, ಅತ್ತೆ, ಮಾವನ ಕಿರುಕುಳದಿಂದ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ರಂಗನಹಳ್ಳಿ ಬೋವಿಕಾಲೋನಿಯಲ್ಲಿ ನಡೆದಿದೆ. ಲೋಕೇಶ್ (30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ತಿಳಿದು ಬಂದಿದೆ. ನವೆಂಬರ್ 15 ರಂದು ಈ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ. ನನ್ನ ಸಾವಿಗೆ ಹೆಂಡತಿ ಹೇಮಾ, ಅತ್ತೆ ಧನಲಕ್ಷಿ, ಮಾವ ರಾಜು ಹಾಗೂ ಹೆಂಡತಿಯ ಪ್ರಿಯಕರ ಚೇತನ್ ಕಾರಣ .ಪ್ರತಿ ನಿತ್ಯ ಬ್ಲಾಕ್ ಮೇಲ್, ಕೊಲೆ […]

ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ದಂಪತಿಗಳನ್ನು ಅಪರಿಚಿತರು ಬರ್ಬರ ಹತ್ಯೆಗೈಯ್ದಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಮುದ್ನಾಳ ವ್ಯಾಪ್ತಿಯಲ್ಲಿ ನಡೆದಿದೆ. ಹತ್ಯೆಗೋಳಗಾದವರು ಶಾಂತಿಲಾಲ ದೇವಲಪ್ಪ ರಾಠೋಡ ಮತ್ತು ಮಡದಿ ರುಕ್ಮಿಣಿ ಶಾಂತಿಲಾಲ ರಾಠೋಡ .ದಂಪತಿಗಳು ಇಬ್ಬರು ಮುದ್ನಾಳ ಹಳ್ಳದ ತಾಂಡಾದ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಹಾಗೂ ನಾರಾಯಣಪುರದ ಬಸರಿಗಿಡ ತಾಂಡಾದ ನಿವಾಸಿಗಳೆಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಅನುಪಮ ಅಗರವಾಲ್ ಭೇಟಿ ಪರಿಶೀಲನೆ […]

“ಭಗ್ನ ಪ್ರೇಮಿ” ಮೈಸೂರು : ಪ್ರೇಮ ವೈಫಲ್ಯದ ಕಾರಣದಿಂದ ಮನೆ ಮುಂದೆ ನಿಂತಿದ್ದ ಯುವತಿಗೆ ಯುವಕನೋರ್ವ ಚಾಕು ಇರಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಅಶ್ವಿನಿ (19) ಚಾಕು ಇರಿತಕ್ಕೆ ಒಳಗಾದ ಯುವತಿ ಎಂದು ತಿಳಿದು ಬಂದಿದೆ. ಗಗನ್ ಅಲಿಯಾಸ್ ಕೆಂಚ ಎಂಬ ಯುವಕ ಕೃತ್ಯ ನಡೆಸಿರುವ ಆರೋಪಿ.ಮೈಸೂರಿನ ಕೆ. ಆರ್ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಯುವತಿ ಅಶ್ವಿನಿ ನಿಂತಿದ್ದ ಸಮಯದಲ್ಲಿ ಗಗನ್ ಅಲಿಯಾಸ್ ಕೆಂಚ ಚಾಕುವಿನಿಂದ ಇರಿದಿದ್ದಾನೆ. ಪ್ರೇಮ ವೈಫಲ್ಯದಿಂದ […]

ಗಾಂಜಾ, ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಹಲಸೂರು  ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಜಯವಾಡದಿಂದ ಕಡಿಮೆ ಬೆಲೆಗೆ ಗಾಂಜಾ ತಂದು ಬೆಂಗಳೂರು ಮತ್ತು ಕೇರಳದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕೇರಳ ಮೂಲದ ಮೊಹಮ್ಮದ್ ಸಾಕಿರ್ ಮತ್ತು ಕೃಷ್ಣ ಕುಮಾರ್ ಎಂಬುವರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಒಂದು ಲೀಟರ್ ವೀಡ್ ಆಯಿಲ್, 16 ಕೆಜಿ ಗಾಂಜಾ, ಒಂದು ವೋಲ್ಸ್ ವ್ಯಾಗನ್ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  

 ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ  ಗಿರಿಯಪ್ಪ (60) ಅಕ್ಕಮ್ಮ (55) ರವರ ಮಗ ರಾಮು, ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಪಟ್ಟು, ಕ್ಷುಲ್ಲಕ ಕಾರಣಕ್ಕೆ ಹೆತ್ತವರ ಮೇಲೆ ಜಗಳ ತೆಗೆದು ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ತಂದೆ ಸಾವು–ಬದುಕಿನ‌ ಮಧ್ಯೆ ಹೋರಾಡಿ, ಗಂಗಾವತಿ ಆಸ್ಪತ್ರೆಯಲ್ಲಿ    ಸಾವನ್ನಪ್ಪಿದ್ದಾರೆ. ಸದ್ಯಕ್ಕೆ ಆರೋಪಿ ರಾಮು ಪೊಲೀಸ್ ಅಧಿಕಾರಿಗಳ  ವಶದಲ್ಲಿದ್ದಾನೆ.

ದಿನೆ ದಿನೇ ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಹಟ್ಟಹಾಸ ಹೆಚ್ಚುತ್ತಲೇ ಇದೆ, ಅದೇ ರೀತಿ ಬೆಂಗಳೂರಿನ ಮಹದೇವಪುರದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ತಂಡವೊಂದು ಲೋಕೇಶ್ವರ ರಾವ್ (31) ಎಂಬ ವ್ಯಕ್ತಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಬೆಳಗ್ಗೆ ಉದಯನಗರ ಮುಖ್ಯರಸ್ತೆಯ ಬಳಿ ಇದ್ದಾಗ ಅಲ್ಲಿಗೆ ಆಗಮಿಸಿದ ದುಷ್ಕರ್ಮಿಗಳ ತಂಡ ಏಕಾಏಕಿ ಮಾರಕಾಸ್ತ್ರಗಳಿಂದ ಲೋಕೇಶ್ವರ ರಾವ್ ಅವರ ಮೇಲೆ ಹಲ್ಲೆ […]

Advertisement

Wordpress Social Share Plugin powered by Ultimatelysocial