ಚಾಕು ಇರಿತದಿಂದ ಹತ್ಯೆಯಾಗಿದ್ದ ರೌಡಿಶೀಟರ್ ಖಘಿ ಮಂಜನ ಹತ್ಯೆಗೈದಿದ್ದ ಪ್ರಮುಖ ಆರೋಪಿಯನ್ನು ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಖಘಿ ಮಂಜ ಹತ್ಯೆ ಸಂಬಂಧ ತನಿಖೆ ನಡೆಸಿದ್ದ ತುಮಕೂರು ಪೊಲೀಸರು ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ವಿಕ್ಕಿಯನ್ನು ಬಂಧಿಸಲು ತೆರಳಿದ್ದಾಗ ಎಎಸ್ ಐ ಪರಮೇಶ್ ಮೇಲೆ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾನೆ ಈ ವೇಳೆ ತಿಲಕ್ ಪಾರ್ಕ್ ಸಬ್ ಇನ್ಸ್ ಪೆಕ್ಟರ್ ನವೀನ್ ರಿಂದ ಪೈರಿಂಗ್ ಮಾಡಿ ಕಾಲಿಗೆ ಗುಂಡು […]

ಇಂದು ಬೆಳ್ಳಂ ಬೆಳಿಗ್ಗೆ ನಂದಿನಿ ಲೇಔಟ್ ಪಿಎಸ್ ಐ ಜೋಗಾನಂದ್ ರಿಂದ ಡಕಾಯಿತಿ ಆರೋಪಿ ಮೇಲೆ ಫೈರಿಂಗ್ ಮಾಡಿರುವ ಘಟನೆ ನಂದಿನಿ ಲೇಔಟ್ ನಲ್ಲಿ ನಡೆದಿದ್ದೆ. ಅನುಬಾನ್ ಬಂಧನಕ್ಕೆ ತೆರಳಿದ್ದ ವೇಳೆ ಪಿಸಿ ಅಭಿಶೇಕ್ ಮೇಲೆ ಡ್ರ್ಯಾಗರ್ ನಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಸಿದರು. ಈ ವೇಳೆ ಆತ್ಮರಕ್ಷಣೆಗಾಗಿ ಪಿಎಸ್ ಐ ಜೋಗಾನಂದ್ ರಿಂದ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಗಾಯಾಳು ಅನುಬಾನ್  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನು ಓದಿ […]

ಕಳುವಾದ ಹಣವನ್ನು ಕೊಡಿಸುವಲ್ಲಿ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಮನ್ನಾಖೇಳಿ ಪೊಲೀಸ್ CPI ಭಜಂತ್ರಿಯವರು ಯಶಸ್ವಿಯಾಗಿದ್ದಾರೆ.. ರಾಜೇಶ್ ಎಂಬ ವ್ಯಕ್ತಿಯು ಡಿಸಿಸಿ ಬ್ಯಾಂಕ್ ಎದುರುಗಡೆ ಕಾರು ನಿಲ್ಲಿಸಿ ಹಣ ತೆಗೆದುಕೊಳ್ಳಲು ಹೋದಾಗ ಮಾರುತಿ ಎಂಬ ವ್ಯಕ್ತಿಯು ಕಾರಿನಲ್ಲಿದ್ದ 71 ಲಕ್ಷ ಹಣ, ಕಾರು ತೆಗೆದುಕೊಂಡು ಪರಾರಿಯಾಗಿದ್ದ… ಪ್ರಕರಣ ನಡೆದು ಎರಡು ವರ್ಷಗಳಾಗಿದ್ದು, CPI ಭಜಂತ್ರಿಯವರು ಹಣವನ್ನು ವಾಪಸ್ ಪಡೆದುಕೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳುವಾದ ಹಣವನ್ನು ಕೊಡಿಸುವಲ್ಲಿ ಪೊಲೀಸರು ಯಶಸ್ವಿ.. […]

ಸಾಹಿಲ್ , ಕೊಲೆಯಾದ ವ್ಯಕ್ತಿ. ಗಂಗೋಡನಹಳ್ಳಿ ಮಾರಮ್ಮನ ದೇವಸ್ಥಾನ ಬಳಿ ಘಟನೆ. ಒಂದೆ ಎರಿಯದವರಿಂದ ಸಾಹಿಲ್ ಗೆ ಹಲ್ಲೆ ನಡೆಸಿ ಹತ್ಯೆ. ಮೂವರು ದುಷ್ಕರ್ಮಿಗಳಿಂದ ಹಲ್ಲೆ. ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ನಡೆದಿರುವ ಗಲಾಟೆ. ಗಲಾಟೆಯಲ್ಲಿ ಸಾಹಿಲ್ ಗೆ ಗಂಭೀರ ಹಲ್ಲೆಯಾಗಿತ್ತು. ಗಾಯಾಳುವನ್ನ ಚಿಕಿತ್ಸೆ ಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾಹಿಲ್ ಸಾವು. ಚಂದ್ರಲೇಔಟ್ ಪೊಲೀಸ್ ಠಾಣೆ ಪ್ರಕರಣ ದಾಖಲು. ಇದನ್ನು ಓದಿ :ಸಚಿವ ಪ್ರಭು ಚವ್ಹಾಣರಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ

ಪೇಪರ್ ಸ್ಟ್ಯಾಂಪ್ ನಲ್ಲಿ ಮಾರುತ್ತಿದ್ದ ಡ್ರಗ್  ಪೆಡ್ಲರ್ ಗಳನ್ನು ಬಂಧಿಸುವಲ್ಲಿ ಹೆಬ್ಬಗೊಡಿ ಪೊಲೀಸರು ಯಶಸ್ವಿಯಾಗಿದ್ದಾರೆ… ದೇವರ ಹೆಸರಿನಲ್ಲಿ ಸ್ಟ್ಯಾಂಪ್ ಪೇಪರ್ ಮಾಡುತ್ತಿದ್ದವರನ್ನು ಬಂಧಿಸಿದ್ದು, ಬಂಧಿತರಿಂದ ಒಟ್ಟಾರೆ 15 ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಾಲಾಗಿದೆ… ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ… ಇದನ್ನು ಓದಿ :17 ಗ್ರಾಮಗಳಲ್ಲಿನ ಮೂಲಸೌಕರ್ಯದ ಯೋಜನೆ    

ಬಹುಕೋಟಿ ಹಣ ವಂಚನೆ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ ರೋಷನ್ ಬೇಗ್ ರನ್ನ ವಶಕ್ಕೆ ಪಡೆಯಲಾಗಿದೆ…ಎಸ್ ಇದರ ಕುರಿತಂತೆ ಇನ್ನಷ್ಟು ಮಾಹಿತಿಯನ್ನ ನೋಡೋಣ ಈ ಸ್ಟೋರಿಯಲ್ಲಿ .ಬಹುಕೋಟಿ ಹಣ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂದೆ ಮಾಜಿ ಸಚಿವ ರೋಷನ್ ಬೇಗ್ರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ ಜೊತೆಗೆ ಕೆಲವೊಂದಿಷ್ಟು ರಾಜಕೀಯ ವ್ಯಕ್ತಿಗಳು ಹೆಸರುಗಳು ಹೊರಬಂದಿದ್ದಾವೆ ಎನ್ನಲಾಗ್ತಿದೆ.ರೋಷನ್ ಬೇಗ್ ರನ್ನ ಬೆಳಗ್ಗೆಯೆ ಸಿಬಿಐ ವಿಚಾರಣೆಗೆ ಒಳಪಡಿಸಿದ್ದರು ಇದಾದ ನಂತರ ಹೆಚ್ಚಿನ ವಿಚಾರಣೆಗಾಗಿ ಅವರನ್ನ […]

ದ್ವಿಚಕ್ರ ವಾಹನದಲ್ಲಿ ಗೋಲ್ಡ್ ಸಾಗುಸುತ್ತಿದ್ದ ಇಬ್ಬರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ದಳಪತ್ ಸಿಂಗ್, ರಾಜಸ್ತಾನದ ವಿಕಾಸ್ ಎಂಬುವವರು ಬಂಧಿತ ಆರೋಪಿಗಳು. ನಿನ್ನೆ ರಾತ್ರಿ ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ವಾಹನಗಳ ಪೊಲೀಸ್ರು ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೊಂಡಾ ಆ್ಯಂಕ್ಟೀವ್ ನಲ್ಲಿ ಬಂದ ಆರೋಪಿಗಳನ್ನು ಪೊಲೀಸ ಸಿಬ್ಬಂದಿಗಳಾದ ಹನುಮಂತ ಹಾಗೂ ಆನಂದ್ ಎಂಬುವವರು ಬೈಕ್ ನಿಲ್ಲಿಸಿ ವಿಚಾರ ಮಾಡಿದ್ದಾರೆ. ಅನುಮಾನ ಗೊಂಡು ಬ್ಯಾಗ್ ಚೆಕ್ ಮಾಡಿದ್ದಾರೆ. 6 […]

ಸಿಲಿಕಾನ್ ಸಿಟಿಯಲ್ಲಿ ಶೂ ಕಳ್ಳರ ಹಾವಳಿ ಹೆಚ್ಚುತ್ತಿದೆ. ಅಪಾರ್ಟ್ಮೆಂಟ್ ನಿವಾಸಿಗಳ ನಿದ್ದೆ ಕೆಡಿಸ್ತಿದ್ದಾರೆ ನಸುಕಿನ ಜಾವ ಬರೋ ಈ ಶೂ ಕಳ್ಳರು. ಮನೆ ಬಾಗಿಲ ಬಳಿ ಬಿಡೋ ಪೂಮ, ನೈಕಿ, ಅಡಿಡಾಸ್, ಟಾಮಿ ಶೂಗಳೇ ಇವರ ಟಾರ್ಗೆಟ್. ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಡರಾತ್ರಿ ಅಪಾರ್ಟ್ಮೆಂಟ್ ಗೆ ಎಂಟ್ರಿ ಕೊಡೋ ಕಳ್ಳರು ಫ್ಲಾಟ್ ಮುಂದಿನ ಕಬೋರ್ಡ್`ಗಳಲ್ಲಿನ ಶೂಗಳನ್ನ ಕ್ಷಣಾರ್ಧದಲ್ಲೆ ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಹೀಗೆ ಕುಮಾರಸ್ವಾಮಿ ಲೇಔಟ್ ನ ಪದ್ಮಾ ನಿಲಯ ರೆಸಿಡೆನ್ಸಿ […]

2 ದಿನದ ಹಸುಗೂಸನ್ನು ಕಿಡ್ನಾಪ್ ಮಾಡಿರುವ ಘಟನೆ ವಾಣಿವಿಲಾಸ್ ಆಸ್ಪತ್ರೆಯಲ್ಲಿ ನಡೆದಿದೆ. ಮಗು ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ವಿವಿ ಪುರಂ ಪೊಲೀಸರು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ… ನವೆಂಬರ್ 9 ರಂದು ಅಬ್ದುಲ್ ರಶೀದ್, ಆರ್ಶಿಯಾ ದಂಪತಿಗೆ ಹೆಣ್ಣು ಮಗುವಾಗಿದ್ದು, ಮಗುವಿಗೆ ಲಂಗ್ಸ್`ನಲ್ಲಿ ನೀರಿದ್ದ ಕಾರಣಕ್ಕೆ ಮಗುವನ್ನು ಐಸಿಯುನಲ್ಲಿ ಇರಿಸಲಾಗಿತ್ತು. ನ.11 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ನಂತರ ಮಗುವಿನ ಅಜ್ಜಿ ಎಂದು ಹೇಳಿಕೊಂಡು ಮಗುವನ್ನು ಒಬ್ಬ ಮಹಿಳೆ ಕದ್ದೊಯ್ದಿದ್ದಾಳೆ. […]

ಇಬ್ಬರ ಮನೆಯಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಪ್ರೇಮಿಗಳಿಬ್ಬರು ನಾಲೆಗೆ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಚನ್ನರಾಯಪಟ್ಟಣ ತಾ. ಬಾಗೂರು- ನವಿಲೆ ಸುರಂಗ ಮಾರ್ಗದ ಬಳಿ ನಡೆದಿದೆ. ಇನ್ನೂ ಈ ನಾಲೆಯ ಬಳಿ ಮಂಗಳವಾರದಿಂದ ಒಂದು ಬೈಕ್ ಹಾಗೂ ಇಬ್ಬರು ಪ್ರೇಮಿಗಳ ಚಪ್ಪಲಿಗಳು ಪತ್ತೆಯಾಗಿದ್ದವು. ೩ ದಿನದಿಂದ ಈ ಚಪ್ಪಲಿಗಳನ್ನ ಗಮನಿಸಿದ ಸ್ಥಳಿಯರಿಗೆ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಚನ್ನರಾಯಪಟ್ಟಣ ಪೊಲೀಸರು ಪರಿಶೀಲಿಸಿ  […]

Advertisement

Wordpress Social Share Plugin powered by Ultimatelysocial