ವಾಣಿಜ್ಯನಗರಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ಸ್ಥಳೀಯ ನಾಯಕರ ದಂಡು ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಕೆಲವೇ ಕ್ಷಣಗಳಲ್ಲಿ ಹುಬ್ಬಳ್ಳಿಗೆ ಅಮೀತ್ ಶಾ ಬಂದಿಳಿಯಲಿದ್ದಾರೆ. ವಿಶೇಷ ವಿಮಾನದ ಮೂಲಕ ಚುನಾವಣಾ ಚಾಣಕ್ಯ ಆಗಮಿಸಲಿದ್ದು, ಅಮೀತ್ ಶಾ ಆಗಮನದ ಹಿನ್ನೆಲೆ ಹುಬ್ಬಳ್ಳಿಯ ವಿಮಾನ ನಿಲ್ದಾಣದ ಸುತ್ತ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.ಇನ್ನೂ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಚಾಣಕ್ಯ, […]

ಅಂಗವಿಕಲರ ಮಾಸಾಸನ ಹೆಚ್ಚಿಸಲು ಸರಕಾರಿ ಮತ್ತು ಖಾಸಗಿ ಉದ್ಯೋಗವಕಾಶ ಹೆಚ್ಚಿಸಲು ಒತ್ತಾಯಿಸಿ ಮನವಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಪಟ್ಟಣದಲ್ಲಿ ಅಂಗವಿಕಲರಿಗೆ ಮಾಸಾಸನ್ 3000ಕ್ಕೆ ಹೆಚ್ಚಿಸಲು ಹಾಗೂ ಸರ್ಕಾರಿ ಮತ್ತು ಕಾಸಗಿ ಉದ್ಯೋಗವಕಾಶ ಹೆಚ್ಚಿಸಲು ಒತ್ತಾಯಿಸಿ ಮನವಿ ನೀಡಿದರು.ಬಿಜೆಪಿ ಸರ್ಕಾರದ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಬಜೆಟ್ ಅಂಗವಿಕಲರನ್ನು ನಿರ್ಲಕ್ಷ್ಯ ಮಾಡಿ ಎಲ್ಲ ಅಂಗವಿಕಲರಿಗೆ ಮತ್ತು ಪಾಲಕರಿಗೆ ತೀವ್ರ ನಿರಾಶೆ ಉಂಟುಮಾಡಿದೆ ಬಿಜೆಪಿ ಪಕ್ಷ ತನ್ನ ಕರ್ನಾಟಕ ರಾಜ್ಯ […]

ಕಾರವಾರ ತಾಲ್ಲೂಕಾ 7ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ ದೊರೆತಿದ್ದು, ತಾಯಿ ಭುವನೇಶ್ವರಿದೇವಿ ಭಾವಚಿತ್ರ ಹಾಗೂ ಸಮ್ಮೇಳಾನಾಧ್ಯಕ್ಷ ಎಂ.ಎ.ಖತೀಬ್ ಅವರನ್ನು ತೆರೆದ ವಾಹನದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ನಗರದ ಮಿತ್ರಸಮಾಜ ಮೈದಾನದಿಂದ ಆರಂಭವಾದ ಮೆರವಣಿಗೆಗೆ ಬಿಇಓ ಶಾಂತೇಶ ನಾಯಕ ಚಾಲನೆ ನೀಡಿದರು. ಕನ್ನಡಾಂಬೆಯ ಭವ್ಯ ರಥದಲ್ಲಿ ತಾಯಿ ಭುವನೇಶ್ವರಿದೇವಿಯ ಭಾವಚಿತ್ರ ಇರಿಸಿದ್ದು, ಸಮ್ಮೇಳಾನಾಧ್ಯಕ್ಷ ಎಂ.ಎ ಖತೀಬ್ ಅವರನ್ನು ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆಯು ಮಿತ್ರಸಮಾಜ ಮೈದಾನದಿಂದ […]

ನವದೆಹಲಿ: ಕೋವಿಡ್‌ ನಿಂದ ರಕ್ಷಿಸಿಕೊಳ್ಳಲು ತಾಯಿಯೊಬ್ಬಳು ತನ್ನ 10 ವರ್ಷದ ಮಗನೊಂದಿಗೆ ಮನೆಯಲ್ಲೇ ಸ್ವಯಂ ದಿಗ್ಬಂಧನ ಮಾಡಿಕೊಂಡು ವಾಸಿಸುತ್ತಿದ್ದ ಘಟನೆ ಗುರುಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಘಟನೆ ಹಿನ್ನೆಲೆ: ಕೋವಿಡ್‌ ಮೊದಲ ಅಲೆಯ ವೇಳೆ 35 ವರ್ಷದ ಮಹಿಳೆ, ಕೋವಿಡ್‌ ಹರಡುತ್ತಿರುವ ವೇಗದ ಭೀತಿಯಿಂದ ತನ್ನ 10 ವರ್ಷದ ಮಗನೊಂದಿಗ ಮನೆಯಲ್ಲೇ ವಾಸುತ್ತಿದ್ದರು. ಗಂಡ ಕೂಡ ತನ್ನ ಪತ್ನಿ,ಮಗನೊಂದಿಗೆ ಮನೆಯಲ್ಲೇ ವಾಸುತ್ತಿದ್ದರು. ಇದಾದ ಬಳಿಕ ಎರಡನೇ ಅಲೆಯ ವೇಳೆ ಗಂಡ ಕೆಲಸಕ್ಕೆ ಹೋದ […]

ತೆಲಂಗಾಣ: ತೆಲಂಗಾಣದ ಮೇಡಕ್ ಜಿಲ್ಲೆಯಲ್ಲಿ ಪೋಲೀಸರ ಕಸ್ಟಡಿ ಚಿತ್ರಹಿಂಸೆಯಿಂದಾಗಿ 36 ವರ್ಷದ ದೈನಂದಿನ ಕೂಲಿ ಕಾರ್ಮಿಕ ಖದೀರ್ ಖಾನ್ ಎಂಬ ವ್ಯಕ್ತಿಸಾವನ್ನಪ್ಪಿದ್ದು ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಮೆಡಕ್‌ನಲ್ಲಿನ ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ಚೈನ್ ಸ್ನಾಚರ್ ಮತ್ತು ಖದೀರ್‌ನ ನಡುವೆ ಸಾಮ್ಯತೆ ಇದ್ದುದ್ದರಿಂದ ಜನವರಿ 29 ರಂದು ಖದೀರ್‌ನನ್ನು ತಪ್ಪಾಗಿ ಗುರುತಿಸಿ ಬಂಧಿಸಲಾಗಿತ್ತು. ಐದು ದಿನಗಳ ನಂತರ ಅಂದ್ರೆ, ಫೆಬ್ರವರಿ 3 ರಂದು ಬಿಡುಗಡೆಯಾದ ಖದೀರ್‌ ಹೈದರಾಬಾದ್‌ನ ಗಾಂಧಿ ಆಸ್ಪತ್ರೆಯಲ್ಲಿ […]

ಮಾರ್ಟಿನ್ ಟೀಸರ್ ಬಿಡುಗಡೆ ಲೈವ್ ಅಪ್ಡೇಟ್ಸ್: ಮಧ್ಯಾಹ್ನ 1 ಹಾಗೂ 2 ಗಂಟೆಗೆ ಮಾರ್ಟಿನ್ ಸಿನಿಮಾದ ಟೀಸರ್ ಅನ್ನು ವೀರೇಶ್ ಚಿತ್ರಮಂದಿರದಲ್ಲಿ ಪ್ರದರ್ಶಿಸಲಾಗುತ್ತದೆ. ಧ್ರುವ ಸರ್ಜಾ ಅಭಿಮಾನಿಗಳು ಮಾತ್ರವಲ್ಲದೆ ಕೆಲವು ಸಿನಿಮಾ ಸೆಲೆಬ್ರಿಟಿಗಳು ಸಹ ಟೀಸರ್ ನೋಡಲು ಟಿಕೆಟ್ ಖರೀದಿಸಿದ್ದಾರೆ.Martin Teaser Release Live Updates: ಧ್ರುವ ಸರ್ಜಾ (Dhruva Sarja) ನಟನೆಯ ಪ್ಯಾನ್ ಇಂಡಿಯಾ ಸಿನಿಮಾ  ಟೀಸರ್ (Martin Movie Teaser) ಇಂದು ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ. […]

ಲಕ್ನೋ: ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ವಿರುದ್ದ ಸಿಬಿಐನ ಭ್ರಷ್ಟಾಚಾರ ವಿರೋಧಿ ಶಾಖೆ ಬುಧವಾರ ಆದಾಯಕ್ಕಿಂದ ಅಧಿಕ ಆಸ್ತಿ ಪ್ರಕರಣ ದಾಖಲಿಸಿದೆ. ನ್ಯಾಯಮೂರ್ತಿ ಶುಕ್ಲಾ ಅವರು ದೊಡ್ಡ ಪ್ರಮಾಣದ ಆಸ್ತಿ ಹೊಂದಿದ್ದು, 2014ರ ಏಪ್ರಿಲ್ 1 ರಿಂದ 2019ರ ಡಿಸೆಂಬರ್ 6ರವರೆಗೆ ನಾಲ್ಕು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ ಸಂಬಂಧ ಮತ್ತೊಂದು ಪ್ರಕರಣ ದಾಖಲಿಸಿದೆ. ಆದಾಗ್ಯೂ ಈ ಅವಧಿಯಲ್ಲಿ ಎಲ್ಲ ಮೂಲಗಳಿಂದ ಅವರ ಆದಾಯ 1.5 ಕೋಟಿ ರೂಪಾಯಿ […]

  ಕಲಬುರಗಿ, ಫೆಬ್ರವರಿ 23; ಕಲ್ಯಾಣ ಕರ್ನಾಟಕ ಉತ್ಸವ-2023ರಲ್ಲಿ ಜನರು ಭಾವಹಿಸಲು ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕರಸ್ತೆ ಸಾರಿಗೆ ನಿಗಮ ಬಸ್‌ಗಳನ್ನು ಓಡಿಸುತ್ತಿದೆ. ಜನರು ಈ ಬಸ್‍ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಉತ್ಸವದಲ್ಲಿ ಪಾಲ್ಗೊಳ್ಳಲು ಕಲಬುರಗಿ ನಗರ, ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಪ್ರತಿ ಜಿಲ್ಲೆಯಿಂದ ಒಟ್ಟು 91 ಬಸ್‍ಗಳನ್ನು ಓಡಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕರು ಹಾಗೂ ಕಲ್ಯಾಣ ಕರ್ನಾಟಕ ಉತ್ಸವ ಸಮಿತಿಯ ಅಧ್ಯಕ್ಷರಾದ […]

      ಸಾಮಾನ್ಯವಾಗಿ ದೇವರಿಗೆ ಮಾಲೆ ಹಾಕುವ ಭಕ್ತಾದಿಗಳನ್ನು ನೀವೆಲ್ಲಾ ನೋಡಿಯೇ ಇರುತ್ತೀರ. ಅದರದ್ದೇ ಆದ ನಿಯಮಗಳನ್ನು ಅನುಸರಿಸಿ, ಮಡಿಯಾಗಿ ಮಾಲೆಗಳನ್ನು ಧರಿಸಿ ಹಿರಿಯ ಸ್ವಾಮಿಗಳು ಹೇಳಿದ್ದನ್ನು ಪಾಲಿಸುತ್ತಾ, ಬೆಳ್ಳಂಬೆಳಗ್ಗೆ ತಣ್ಣೀರಿನ ಸ್ನಾನ ಮಾಡಿ ಇಂತಿಷ್ಟು ದಿನಗಳ ಕಾಲ ದೇವರ ಜಪದಲ್ಲಿ ನಿರತರಾಗಿರಬೇಕಾಗುತ್ತದೆ.   ಈ ಮಾಲೆ ಧಾರಣೆ ಎಂದ ಕೂಡಲೇ ಎಲ್ಲರ ತಲೆಗೆ ಬರುವುದು ಶ್ರೀ ಅಯ್ಯಪ್ಪ ಸ್ವಾಮಿಯ ಭಕ್ತಾದಿಗಳು ಧರಿಸುವ ಶಬರಿಮಲೆ ಮಾಲೆ. ಬಹುತೇಕರಿಗೆ ಈ […]

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸಭೆಯಲ್ಲಿ ಬಿಜೆಪಿ ನಾಯಕರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಹೊಸದಾಗಿ ಚುನಾಯಿತ ಮೇಯರ್ ಶೆಲ್ಲಿ ಒಬೆರಾಯ್ ಆರೋಪಿಸಿದ್ದಾರೆ. ದೆಹಲಿ ಮಹಾನಗರ ಪಾಲಿಕೆಯ ಸಭೆ ಬುಧವಾರ ನಡೆದಿದ್ದು, ಎಎಪಿಯ ಶೆಲ್ಲಿ ಒಬೆರಾಯ್ ಮೇಯರ್ ಆಗಿ ಆಯ್ಕೆಯಾದರು.  ಅಧ್ಯಕ್ಷತೆಯನ್ನು ವಹಿಸಿಕೊಂಡ ನಂತರ ಶೆಲ್ಲಿ ಒಬೆರಾಯ್ ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಪುನಃ ಕರೆಯಲಾಯಿತು. ಈ ವೇಳೆ ಬಿಜೆಪಿ ಮತ್ತು ಎಎಪಿ ನಾಯಕರು ಪರಸ್ಪರ ಹಲ್ಲೆ ನಡೆಸಿದ್ದಾರೆ. ಸದಸ್ಯರು ನೀರಿನ […]

Advertisement

Wordpress Social Share Plugin powered by Ultimatelysocial