ಟಾಟಾದ ಈ ಕಂಪನಿಯಿಂದ ಎರಡೇ ವಾರಗಳಲ್ಲಿ ₹1,000 ಕೋಟಿ ಗಳಿಸಿದ ರೇಖಾ ಜುಂಜುನ್‌ವಾಲಾ!.

 

ಟೈಟಾನ್ ಕಂಪನಿ ಲಿ.ನ ಷೇರುಗಳು 2023ರ ಕೇಂದ್ರ ಬಜೆಟ್‌ ಬಳಿಕ ಒಂದೇ ಸಮನೆ ಏರಿಕೆ ಕಾಣುತ್ತಿವೆ. ಫೆ. 2, 2023ರಂದು ಸುಮಾರು 2,310 ರೂ.ನಲ್ಲಿ ವಹಿವಾಟು ಕೊನೆಗೊಳಿಸಿದ್ದ ಟೈಟಾನ್‌ ಕಂಪನಿ ಷೇರಿನ ಬೆಲೆಯು ಕಳೆದ ಎರಡು ವಾರಗಳಲ್ಲಿ ಭಾರೀ ಖರೀದಿ ಆಸಕ್ತಿಯ ನಡುವೆ ತೀವ್ರ ಏರಿಕೆ ಕಂಡಿದೆ. ಈ ವೇಳೆ ಪ್ರತಿ ಷೇರಿನ ಬೆಲೆಯು 2,310 ರೂ.ನಿಂದ 2,535 ರೂ.ಗೆ ಏರಿಕೆಯಾಗಿದೆ. ಇದರಿಂದ ದಿವಂಗತ ಏಸ್‌ ಇನ್ವೆಸ್ಟರ್‌ ರಾಕೇಶ್‌ ಜುಂಜುನ್‌ವಾಲಾ ಪತ್ನಿ ರೇಖಾ ಜುಂಜುನ್‌ವಾಲಾ ನಿವ್ವಳ ಆಸ್ತಿ ಮೌಲ್ಯವು ಸುಮಾರು 1,000 ಕೋಟಿ ರೂ.ಗೂ ಹೆಚ್ಚು ಏರಿಕೆ ಕಂಡಿದೆ.ಡಿಸೆಂಬರ್ ತ್ರೈಮಾಸಿಕದ ಟೈಟಾನ್ ಕಂಪನಿಯ ಷೇರುದಾರರ ಮಾಹಿತಿಯ ಪ್ರಕಾರ, ರೇಖಾ ಜುಂಜುನ್‌ವಾಲಾ 4,58,95,970 ಟೈಟಾನ್ ಷೇರುಗಳನ್ನು ಹೊಂದಿದ್ದರು. ಇದು ಟೈಟಾನ್ ಕಂಪನಿ ಲಿ.ನ ಒಟ್ಟು ಷೇರುಗಳಲ್ಲಿ ಶೇ. 5.17ರಷ್ಟು ಆಗಿತ್ತು. ಟೈಟಾನ್ ಕಂಪನಿ ಷೇರಿನ ಬೆಲೆಯು ಕಳೆದ ಎರಡು ವಾರಗಳಲ್ಲಿ ಸುಮಾರು 225 ರೂ.ನಷ್ಟು ಏರಿಕೆ ಕಂಡಿದ್ದು 2,535 ರೂ.ಗೆ ತಲುಪಿದೆ.ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕಂಪನಿಯ ಷೇರುದಾರರ ಮಾಹಿತಿಯ ಪ್ರಕಾರ ಟೈಟಾನ್ ಕಂಪನಿ ಲಿ.ನಲ್ಲಿರುವ ರೇಖಾ ಜುಂಜುನ್‌ವಾಲಾ ಅವರ ಷೇರುಗಳನ್ನು ಊಹಿಸಿದರೆ, ಕಳೆದ ಎರಡು ವಾರಗಳಲ್ಲಿ ಟೈಟಾನ್ ಷೇರಿನ ಬೆಲೆಯಲ್ಲಿನ ಏರಿಕೆಯಿಂದಾಗಿ ರೇಖಾ ಜುಂಜುನ್‌ವಾಲಾ ಅವರ ನಿವ್ವಳ ಆಸ್ತಿ ಮೌಲ್ಯವು 1,032 ಕೋಟಿ ರೂ.ನಷ್ಟು ಏರಿಕೆ ಕಂಡಿದೆ.ಬಿಎಸ್‌ಇ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಕಂಪನಿಯ ಷೇರುದಾರರ ಮಾಹಿತಿಯ ಪ್ರಕಾರ ಟೈಟಾನ್ ಕಂಪನಿ ಲಿ.ನಲ್ಲಿರುವ ರೇಖಾ ಜುಂಜುನ್‌ವಾಲಾ ಅವರ ಷೇರುಗಳನ್ನು ಊಹಿಸಿದರೆ, ಕಳೆದ ಎರಡು ವಾರಗಳಲ್ಲಿ ಟೈಟಾನ್ ಷೇರಿನ ಬೆಲೆಯಲ್ಲಿನ ಏರಿಕೆಯಿಂದಾಗಿ ರೇಖಾ ಜುಂಜುನ್‌ವಾಲಾ ಅವರ ನಿವ್ವಳ ಆಸ್ತಿ ಮೌಲ್ಯವು 1,032 ಕೋಟಿ ರೂ.ನಷ್ಟು ಏರಿಕೆ ಕಂಡಿದೆ.ಟಾಟಾ ಗ್ರೂಪ್‌ಗೆ ಸೇರಿದ ಈ ಕಂಪನಿಯಲ್ಲಿರುವ ತನ್ನ ಪಾಲನ್ನು ಕಡಿಮೆ ಮಾಡದೇ ಇದ್ದಲ್ಲಿ ರೇಖಾ ಜುಂಜುನ್‌ವಾಲಾ ಅವರ ನಿವ್ವಳ ಆಸ್ತಿ ಮೌಲ್ಯವು ಕಳೆದ ಎರಡು ವಾರಗಳಲ್ಲಿ ಮತ್ತಷ್ಟು ಹೆಚ್ಚಾಗುತ್ತಿತ್ತು.2022ರ ಸೆಪ್ಟೆಂಬರ್‌ ತ್ರೈಮಾಸಿಕದ ಅಂತ್ಯಕ್ಕೆ ಟೈಟಾನ್ ಕಂಪನಿಯಲ್ಲಿ ರೇಖಾ ಜುಂಜುನ್‌ವಾಲಾ ಅವರು 1.50 ಕೋಟಿ ಟೈಟಾನ್ ಷೇರುಗಳನ್ನು ಅಥವಾ ಕಂಪನಿಯಲ್ಲಿ ಶೇ. 1.69ರಷ್ಟು ಪಾಲನ್ನು ಹೊಂದಿದ್ದರು. ಇದೇ ವೇಳೆ ಅವರ ದಿವಂಗತ ಪತಿ ರಾಕೇಶ್ ಜುಂಜುನ್‌ವಾಲಾ ಅವರು 3.41 ಕೋಟಿ ಟೈಟಾನ್ ಕಂಪನಿಯ ಷೇರುಗಳನ್ನು ಅಥವಾ ಕಂಪನಿಯಲ್ಲಿ ಶೇ. 3.85ರಷ್ಟು ಪಾಲನ್ನು ಹೊಂದಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿ.ರೂಪಾ ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ, ಸಂಬಂಧಪಟ್ಟವರು ಉತ್ತರ ನೀಡಲಿ-ಪ್ರತಾಪ್‌ ಸಿಂಹ.

Mon Feb 20 , 2023
ಐಪಿಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಐಜಿಪಿ ಡಿ.ರೂಪ ಅವರು ಕೇಳಿರುವ ಪ್ರಶ್ನೆಗಳು ನೈತಿಕವಾಗಿವೆ. ಇದಕ್ಕೆ ರೋಹಿಣಿ ಸಿಂಧೂರಿ ಮತ್ತು ಸಂಬಂಧಪಟ್ಟವರು ಉತ್ತರ ಕೊಡಬೇಕು ಎಂದು ಸಂಸದ ಪ್ರತಾಪ್‌ ಸಿಂಹ ಒತ್ತಾಯಿಸಿದರು.ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಚಾಮರಾಜನಗರ ಆಕ್ಸಿಜನ್ ದುರಂತದಲ್ಲಿ 24 ಮಂದಿ ಸಾವಿಗೀಡಾದರು. ಚಾಮರಾಜಪೇಟೆಗೆ ಆಕ್ಸಿಜನ್‌ ಪೂರೈಸುವ ಜವಾಬ್ದಾರಿ ಮೈಸೂರು ಜಿಲ್ಲಾಡಳಿತಕ್ಕಿತ್ತು. ಆಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆಗಿದ್ದರು. ಆದರೆ, ಆ ಬಗ್ಗೆ ಯಾರೂ ಪ್ರಶ್ನೆ ಮಾಡಲಿಲ್ಲ. ಮಾತ್ರವಲ್ಲದೇ […]

Advertisement

Wordpress Social Share Plugin powered by Ultimatelysocial