ನಂದಮೂರಿ ಬಾಲಕೃಷ್ಣ ಅವರ ೧೦೭ನೇ ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ, ಇನ್ನು ಈ ಚಿತ್ರಕ್ಕೆ ತೆಲುಗಿನ ಸ್ಟಾರ್ ನಿರ್ದೇಶಕ ಗೋಪಿಚಂದ್ ಮಲ್ಲಿನೇನಿ ಅವರ ಕೈಚಳಕ ಇದ್ದು, ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿದೆ. ಇನ್ನು ಈ ಚಿತ್ರದ ಹಾಟ್ ಟಾಪಿಕ್ ಏನಪ್ಪ ಅನ್ನೂದಾದ್ರೆ ʼಕಳನಾಯಕನ ಪಾತ್ರದ್ದುʼ , ಹೌದು ಕನ್ನಡದ ʼಬ್ಲಾಕ್ ಕೋಬ್ರಾ ದುನಿಯಾ ವಿಜಯ್ʼ ಈ ಚಿತ್ರದಲ್ಲಿ ಆಕ್ಟ್ ಮಾಡ್ತಿದ್ದಾರೆ ಅನ್ನೋ ಊಹಾಪೋಹಗಲು ಗಾಂಧೀನಗರದಲ್ಲಿ ಶುರುವಾಗಿದೆ. ಇನ್ನು ಈ ವಿಚಾರವಾಗಿ ಸ್ಟಾರ್ ನಿರ್ದೇಶಕ ಗೋಪಿಚಂದ್ ಬ್ರೇಕ್ ಹಾಕಿದ್ದು, ಟ್ವಿಟರ್ನಲ್ಲಿ ವಿಜಯ್ ಗೆ ಟ್ವೀಟ್ ಮಾಡುವ ಮೂಲಕ ಸ್ವಾಗತ ಕೋರಿದ್ದಾರೆ. ಈ ಹಿಂದೆ ʼರಿಯಲ್ ಸ್ಟಾರ್ ಉಪೇಂದ್ರʼ ತೆಲುಗಿನ ʼಸನ್ ಆಫ್ ಸತ್ಯಮೂರ್ತಿʼ ಚಿತ್ರದಲ್ಲಿ ತಮ್ಮ ಕೈಚಳಕವನ್ನ ತೋರಿಸಿ ಸೈ ಎನಿಸಿಕೊಂಡಿದ್ರು, ಇದೀಗ ದುನಿಯಾ ವಿಜಯ್ ತಮ್ಮ ಚಾಪನ್ನ ಮೂಡಿಸಲು ಹೊರಟಿದ್ದಾರೆ. ಸ್ಪೀಡ್ ನ್ಯೂಸ್ ವತಿಯಿಂದ ದುನಿಯಾ ವಿಜಯ್ ಗೆ ʼಆಲ್ ದಿ ವೆರಿ ಬೆಸ್ಟ್ʼ
ತೆಲುಗಿಗೆ ಎಂಟ್ರಿ ಆಗ್ತಿದ್ದಾರೆ ‘ಬ್ಲಾಕ್ ಕೋಬ್ರಾ’..?
Please follow and like us: