ಆಕಸ್ಮಿಕವಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾದ ಘಟನೆ ಹುಬ್ಬಳ್ಳಿ ಕೊಪ್ಪಿಕಾ ರಸ್ತೆಯಲ್ಲಿ ನಡೆದಿದೆ. ರಾಮರಡ್ಡಿ ತಿರ್ಲಾಪೂರ ನಿವಾಸಿ ಇಂದು ಹುಬ್ಬಳ್ಳಿಗೆ ಕೊಪ್ಪಿಕರ್ ರಸ್ತೆಯಲ್ಲಿ ಮದುವೆ ಸಮಾರಂಭಕ್ಕೆ ಬಟ್ಟೆ ಖರೀದಿಸಲು ಬಂದು ಕಾರ್ ಪಾರ್ಕಿಂಗ್ ನಲ್ಲಿ ನಿಲ್ಲಿಸಿದಾಗ ಬಿಸಿಲಿನ ತಾಪಕ್ಕೆ ಏಕಾಏಕಿ ಕಾರಿನಲ್ಲಿ ಬೆಂಕಿ ಹತ್ತಿದ ಪರಿಣಾಮ ಸಂಪೂರ್ಣವಾಗಿ ಕಾರಿನ ಮುಂಬಾಗ ಸುಟ್ಟಿದೆ. ಇನ್ನು ಸ್ಥಳದಲ್ಲೇ ಇದ್ದ ಸ್ಥಳೀಯರ ಸಹಾಯದಿಂದ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳ ತಂಡ ಬೆಂಕಿ ನಂದಿಸಿ ಮುಂದೇ ಆಗಬೇಕಿದ್ದ ಅನಾಹುತ ತಪ್ಪಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada