ರಾಜ್ಯದಲ್ಲಿ ಮತ್ತೆ ಮುನ್ನೆಲೆಗೆ ಬಂದ ಆಣೆ ಪ್ರಮಾಣ ವಿಚಾರ
ಹಣ ಮತ್ತು ಸಚಿವ ಸ್ಥಾನಕ್ಕಾಗಿ ಬಿಜೆಪಿಗೆ ಹೋಗಿದ್ದಾರೆಂಬ ಸಿದ್ದು ಹೇಳಿಕೆ.
ಸಿದ್ದರಾಮಯ್ಯ ಅವರನ್ನು ಆಣೆ ಪ್ರಮಾಣಕ್ಕೆ ಕರೆದ ಸಚಿವ ಬೈರತಿ ಬಸವರಾಜ್
ದಾವಣಗೆರೆಯಲ್ಲಿ ಸಿದ್ದುಗೆ ಬಹಿರಂಗ ಸವಾಲು ಹಾಕಿದ ಸಚಿವ ಬೈರತಿ ಬಸವರಾಜ್
ನಾನು ದುಡ್ಡು ತಗೊಂಡಿರೋ ಬಗ್ಗೆ ಕಾಂಗ್ರೆಸ್ ನವರು ಪ್ರೂವ್ ಮಾಡಲಿ.
ಇಲ್ಲ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಬನ್ನಿ ಆ ದೇವರು ಮುಟ್ಟಿ ಪ್ರಮಾಣ ಮಾಡ್ತೀನಿ.
ಅವರು ಮುಟ್ಟಿ ಪ್ರಮಾಣ ಮಾಡಲಿ-ಸಚಿವ ಬೈರತಿ ಬಸವರಾಜ್ ಸವಾಲು.
ಅವರು ಎಲ್ಲಿ ಕರಿತಾರೆ ನಾನು ಅಲ್ಲಿ ಹೊಗೋಕೆ ತಯಾರಿದ್ದೇನೆ.
ಅವರು ದುಡ್ಡು ತಗೊಂಡಿದ್ದು ಪ್ರೂವ್ ಮಾಡಲಿ, ಇಲ್ಲವೇ ದಾಖಲೆ ಬಿಡುಗಡೆ ಮಾಡ್ಲಿ.
ನಮ್ಮದು ಯಾವುದೇ ಆಮಿಷಗಳಿಗೆ ಹೋಗುವ ಜಾಯಮಾನವಲ್ಲ.
ಈ ತರ ಮಾತನಾಡೋದು ಎಷ್ಟು ಸಮಂಜಸ.
ನಾವು ಸ್ವಾಭಿಮಾನಕ್ಕೆ ಪಕ್ಷವನ್ನ ಬಿಟ್ಟಿದ್ದು ಅದು ಎಲ್ಲರಿಗೂ ಗೊತ್ತಿದೆ ಅವರಿಗೂ ಗೊತ್ತಿದೆ.
ಬರೀ ಸುಳ್ಳು ಹೇಳಕೊಂಡು ರಾಜಕಾರಣ ಮಾಡೋಕೆ ಹೊರಟಿದ್ದಾರೆ.
ನಾನು ದುಡ್ಡು ತಗೊಂಡಿದ್ದೀನಿ ಅಂತ ಹೇಳ್ತಾರಲ್ಲ ಪ್ರೂವ್ ಮಾಡಲಿ.
ನಾನು ಇವತ್ತೇ ರಾಜಕೀಯದಿಂದ ನಿವೃತ್ತಿ ತಗೊಳ್ತೀನಿ..
ಕಾಂಗ್ರೆಸ್ ನವರಿಗೆ ಸಚಿವ ಬೈರತಿ ಬಸವರಾಜ್ ಬಹಿರಂಗ ಸವಾಲು.
ಸಿದ್ದರಾಮಯ್ಯ ಹಿರಿಯ ರಾಜಕಾರಣಿ, ಸಿಎಂ ಆಗಿದ್ದವರು ಅಂತವರ ಬಾಯಲ್ಲಿ ಈ ರೀತಿ ಮಾತು ಬರಬಾರದು.
ಕಾಂಗ್ರೆಸ್ ನವರು 200 ಯುನಿಟ್ ಫ್ರೀ ವಿದ್ಯುತ್ ಕೊಡುವ ವಿಚಾರ
ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಯಾಕೆ ಕೊಡಲಿಲ್ಲ.
ಎಲ್ಲವನ್ನ ಉಚಿತವಾಗಿ ಕೊಡ್ತೀನಿ ಅಂದ್ರೆ ಈಡೀ ರಾಜ್ಯನೆ ಕೇಳ್ತಾರೆ ಕೊಡೊಕೆ ಆಗುತ್ತಾ?.
ಅಧಿಕಾರಕ್ಕೆ ಬಂದ ಮೇಲೆ ಎಲ್ಲವನ್ನ ಫ್ರೀ ಕೊಡ್ತರಾ..?
ಇದೆಲ್ಲಾ ಸುಮ್ಮನೆ ಪ್ರಚಾರಕ್ಕೆ ಕಾಂಗ್ರೆಸ್ ಗಿಮಿಕ್ ಅಷ್ಟೇ.
ಕಾಂಗ್ರೆಸ್ ವಿರುದ್ಧ ಸಚಿವ ಬೈರತಿ ಬಸವರಾಜ್ ಗರಂ..
ಬೈರತಿ ಬಸವರಾಜ್ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ.
https://play.google.com/store/apps/details?id=com.speed.newskannada