ದಿಢಿರ್ ಕುಸಿತ ಕಂಡ ಟೊಮಾಟೋ ಬೆಲೆ

ಕಳೆದ ಒಂದೂವರೆ ತಿಂಗಳಿನಿಂದ ಏರುಗತಿಯಲ್ಲಿ ಸಾಗಿದ್ದ ಟೊಮೇಟೊ ಬೆಲೆ ದಿಢೀರ್‌ ಕುಸಿತ ಕಂಡಿದ್ದು, ಲಕ್ಷ್ಮೇಶ್ವರ ತಾಲೂಕಿನ ಯಲ್ಲಾಪೂರ ಲಕ್ಷ್ಮಣನ ಲಮಾಣಿಯವರು ಟೊಮೇಟೋವನ್ನು ತಮ್ಮ ಹೊಲದಲ್ಲಿಯೇ ಗುಂಪು ಹಾಕಿ ಬಿಜವನ್ನು ಉತ್ಪತ್ತಿ ಮಾಡುತ್ತಿದ್ದಾನೆ.ಟೋಮೇಟೋ ಕುಸಿತದಿಂದ ನೊಂದ ರೈತ ಕಂಗಾಲಾಗಿದ್ದಾನೆ.ಉತ್ತಮ ಬೆಲೆ ನಿರೀಕ್ಷಿಸಿ ಮಾರುಕಟ್ಟೆಗೆ ಟೊಮೆಟೋ ತರುವ ತಾಲೂಕಿನ ರೈತರಿಗೆ ಬೆಲೆ ಕುಸಿತದಿಂದ ಇದೀಗ ಹಾಕಿದ್ದ ಬಂಡವಾಳವೂ ಕೈಗೆ ಎಟುಕುತ್ತಿಲ್ಲ. ಪರಿಣಾಮ ಬೆಳೆಗಾರರು ಬೇಸತ್ತಿದ್ದಾರೆ.ಟೊಮೇಟೊ ಕೆಜಿಗೆ 50ರಿಂದ 60 ರೂ.ವರೆಗೂ ಮಾರಾಟವಾಗುತ್ತಿತ್ತು. ರೈತರಿಗೂ ಒಳ್ಳೆಯ ಧಾರಣೆ ಸಿಕ್ಕಿತ್ತು. ಆದರೆ ಕಳೆದ ಒಂದುವರೆ ತಿಂಗಳಿಂದ ಟೊಮೇಟೊ ಧಾರಣೆ 20 ರೂ. ಮೇಲೆ ಏರಿಕೆಯೇ ಆಗಿಲ್ಲ. ಸದ್ಯ ಹಾಪ್‌ಕಾಮ್ಸ್‌ನಲ್ಲಿ ಕೆಜಿ ಟೊಮೆಟೋ 6 ರೂ. ಇದ್ದರೆ, ತರಕಾರಿ ಮಾರುಕಟ್ಟೆಯಲ್ಲಿ8 ರಿಂದ 10 ರೂ. ಇದೆ. ಆದರೆ ರೈತರಿಗೆ ಸಿಗುವುದು ಬಿಡಿಗಾಸು!ಹೆಚ್ಚಾದ ಉತ್ಪಾದನೆ, ನಿರಾಸೆಯಲ್ಲಿ ರೈತರು: ಕಳೆದ ತಿಂಗಳಿನಿಂದ ಟೋಮೇಟೋ ಮಾರುಕಟ್ಟೆಗೆ ಅಷ್ಟೊಂದು ಬರುತ್ತಿಲ್ಲ. ದಿನದಿಂದ ದಿನಕ್ಕೆ ಟೊಮೇಟೊ ಆವಕ ಹೆಚ್ಚುತ್ತಿರುವುದರಿಂದ ಸಗಟು ದರ ಇಳಿಕೆಯಾಗುತ್ತಿದ್ದು, ಚಿಲ್ಲರೆ ಮಾರಾಟ ದರ ಕೆಜಿಗೆ 5ಕ್ಕೆ ಬಂದು ನಿಂತಿದೆ..

Please follow and like us:

Leave a Reply

Your email address will not be published. Required fields are marked *

Next Post

ಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ತಹಸಿಲ್ ಕಚೇರಿಯಲ್ಲಿ ಡಾಕ್ಟರ್ ಬಿ ಆರ್ ಅಂಬೇಡ್ಕರ ಜಯಂತಿ ಪೂರ್ವಭಾವಿ ಸಭೆ

Thu Apr 8 , 2021
ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕೋವಿಡ ಮಾರ್ಗಸೂಚಿ ಸಂಪೂರ್ಣ ಉಲ್ಲಂಘನೆಯಾಗುತ್ತಿವೆ. ಅಲ್ಲಿ ಯಾವುದೇ ನಿಬಂಧನೆ ಪಾಲನೆ ಆಗುತ್ತಿಲ್ಲ ಆದರೆ ಡಾಕ್ಟರ್ ಬಿ.ಆರ್. ಅಂಬೇಡ್ಕರ ಜಯಂತಿ ಆಚರಣೆಯಲ್ಲಿ ಕೊವಿಡ ಕಡ್ಡಾಯ ಪಾಲಿಸಿರಿ ಎಂದು ಏಕೆ ಹೇಳುತ್ತೀರಿ ಎಂದು ದಲಿತ ಮುಖಂಡರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು . ಕಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿ ಲೋಕಸಭೆ ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಯಾವದೇ ಕೊವಿಡ ಪಾಲನೆ ಆಗುತ್ತಿಲ್ಲ.ಸಾವಿರಾರು ಜನರು ಬಹಿರಂಗ ಚುನಾವಣಾ […]

Advertisement

Wordpress Social Share Plugin powered by Ultimatelysocial