ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗೆ ಅದ್ಭುತ ಮನೆಮದ್ದುಗಳನ್ನು ಪ್ರಯತ್ನಿಸಿ.

ತುಮಾನ ಬದಲಾದಂತೆ ನೆಗಡಿ, ಕೆಮ್ಮು ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಎಷ್ಟೇ ಕಸರತ್ತು ಮಾಡಿದ್ರೂ ಕೆಮ್ಮು ಕಡಿಮೆಯಾಗುವುದೇ ಇಲ್ಲ. ಕೆಮ್ಮಿನಿಂದ ಗಂಟಲು ಮತ್ತು ಶ್ವಾಸಕೋಶದಲ್ಲಿ ವೈರಲ್ ಸೋಂಕು ಬರುವ ಸಾಧ್ಯತೆಯೂ ಹೆಚ್ಚಾಗುತ್ತದೆ. ಕೆಮ್ಮಿನಿಂದ ಮುಕ್ತಿ ಪಡೆಯಲು ಕೆಲವು ಸುಲಭವಾದ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬೇಕು.

ಜೇನುತುಪ್ಪ : ಜೇನುತುಪ್ಪವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ಇದು ಕೆಮ್ಮನ್ನು ತೊಡೆದುಹಾಕಲು ರಾಮಬಾಣವಿದ್ದಂತೆ. ಶುಂಠಿರಸಕ್ಕೆ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಕೆಮ್ಮು ಕಡಿಮೆಯಾಗುತ್ತದೆ.

ಅರಿಶಿನ : ಅರಿಶಿನವು ಎಂಟಿವೈರಲ್, ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಅದಕ್ಕಾಗಿಯೇ ಅರಿಶಿನವನ್ನು ಆಯುರ್ವೇದದಲ್ಲಿ ಬಳಸಲಾಗುತ್ತದೆ. ಒಂದು ಲೋಟ ಕಿತ್ತಳೆ ರಸವನ್ನು ತೆಗೆದುಕೊಳ್ಳಿ, ಅದಕ್ಕೆ ಒಂದು ಚಮಚ ಅರಿಶಿನ ಮತ್ತು ಚಿಟಿಕೆ ಕಾಳುಮೆಣಸಿನ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಇದನ್ನು ಕುಡಿಯುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ : ಬೆಳ್ಳುಳ್ಳಿ ಎಂಟಿ ಬ್ಯಾಕ್ಟೀರಿಯಲ್ ಮತ್ತು ಎಂಟಿವೈರಲ್ ಗುಣಗಳನ್ನು ಹೊಂದಿದೆ. ಹಾಗಾಗಿ ಬೆಳ್ಳುಳ್ಳಿಯನ್ನು ಹುರಿದು ತಿಂದರೆ ನೆಗಡಿ, ಕೆಮ್ಮು ನಿವಾರಣೆಯಾಗುತ್ತದೆ.

ಶುಂಠಿ : ಶುಂಠಿ ಕೂಡ ಕೆಮ್ಮಿಗೆ ಪರಿಣಾಮಕಾರಿ ಮನೆಮದ್ದು. ಶುಂಠಿಯನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ. ನಂತರ ಅದನ್ನು ಫಿಲ್ಟರ್ ಮಾಡಿಕೊಂಡು ಬಿಸಿಯಾಗಿ ಸೇವಿಸಿ. ನೀವು ಹಸಿ ಶುಂಠಿಯನ್ನು ಸಹ ಅಗಿದು ತಿನ್ನಬಹುದು. ಕೆಮ್ಮಿನಿಂದ ಮುಕ್ತಿ ಪಡೆಯಲು ಇದು ಅತ್ಯಂತ ಪರಿಣಾಮಕಾರಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದು ಲಕ್ಷ ಲಂಚದ ಬೇಡಿಕೆಯನ್ನ ಇಟ್ಟಿದ್ದ ಬಸವರಾಜ್ ಕಾಕರ್ ಗಲ್.

Fri Feb 3 , 2023
  ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ನಾರಬಂಡಿಯ ಹನುಮಂತ ದಿನಾಂಕ 31/1/23 ರಂದು ಅಬಕಾರಿ ವಲಯ ನಿರೀಕ್ಷಕರಾದ ಬಸವರಾಜ್ ಕಾಕರಗಲ್ ಒಂದು ಲಕ್ಷದ ಲಂಚದ ಬೇಡಿಕೆಯನ್ನ ಇಟ್ಟಿರುವ ಬಗ್ಗೆ ,ರಾಯಚೂರು ನಲ್ಲಿರುವ ಲೋಕಾಯುಕ್ತ ಪೊಲೀಸ ಠಾಣೆಯಲ್ಲಿ ದೂರನ್ನ ಸಲ್ಲಿಸಿರುತ್ತಾರೆ.ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ1988,ಪ್ರಕರಣ ತಿದ್ದುಪಡಿ 2018ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ,ಇನ್ನು ಈ ವಿಷಯ ಕುರಿತಂತೆ ಮಾನವಿ ವಲಯದ ಅಬಕಾರಿ ನಿರಕ್ಷಕರಾದ ಬಸವರಾಜ ಕಾಕರ ಗಲ್ ಹನುಮಂತ ಅವರಿಂದ ಒಂದು ಲಕ್ಷ ರೂಪಾಯಿ ಲಂಚ […]

Advertisement

Wordpress Social Share Plugin powered by Ultimatelysocial