ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರ ಮುಂಬರುವ ಹಾಸ್ಯ-ಥ್ರಿಲ್ಲರ್ ತೂತು ಮಡಿಕೆ

 

ಬೆಂಗಳೂರು: ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರ ಮುಂಬರುವ ಹಾಸ್ಯ-ಥ್ರಿಲ್ಲರ್ ತೂತು ಮಡಿಕೆ ಹಾಡುಗಳ ಮೂಲಕ ಚಿತ್ರದ ಕುರಿತ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಹೌದು.. ತೂತು ಮಡಿಕೆ ಎಂಬ ಶೀರ್ಷಿಕೆ ಮೂಲಕವೇ ಸಾಕಷ್ಟು ಕುತೂಹಲ ಕೆರಳಿಸಿದ್ದ ಈ ಚಿತ್ರ ಹಾಡುಗಳ ಮೂಲಕ ಮತ್ತಷ್ಟು ಬಝ್ ಸೃಷ್ಟಿಸಿದೆ.

ಚಿತ್ರ ಇದೇ ವಾರ ತೆರೆಗೆ ಬರಲಿದ್ದು, ಚಿತ್ರದ ಹಾಡುಗಳ ತುಣುಕುಗಳು ಚಿತ್ರದ ಕುರಿತ ನಿರೀಕ್ಷೆಯನ್ನು ದ್ವಿಗುಣಗೊಳಿಸಿದೆ.

ಈ ಕುರಿತು ಮಾತನಾಡಿರುವ ಚಿತ್ರದ ನಟ-ನಿರ್ಮಾಪಕ ಚಂದ್ರ ಕೀರ್ತಿ ಅವರು, ‘ನಟನಾಗಿ ಮತ್ತು 7 ವರ್ಷಗಳಿಂದ ಚಿತ್ರರಂಗದಲ್ಲಿದ್ದ ನನಗೆ ಸರಿಯಾದ ರೀತಿಯ ಪಾತ್ರಗಳು ಸಿಗಲಿಲ್ಲ. ಪೋಷಕ ಪಾತ್ರಗಳು ನನ್ನ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಯಾರೂ ನನ್ನನ್ನು ನಾಯಕನನ್ನಾಗಿ ಮಾಡಲು ಬಯಸದ ಕಾರಣ, ನಾನು ನಾಯಕರಲ್ಲಿ ಒಬ್ಬನಾಗಲು ನಿರ್ದೇಶಕನಾಗಬೇಕಾಯಿತು ಎಂದು ಹೇಳಿದ್ದಾರೆ.

ಈ ಚಿತ್ರಕ್ಕೆ ರಘು ನಿಡುವಳ್ಳಿ ಅವರ ಸಂಭಾಷಣೆ ಇದ್ದು, ತೂತು ಮಡಿಕೆಯು ಕೊಳೆಗೇರಿಯ ಹಿನ್ನೆಲೆಯಲ್ಲಿ ನಡೆಯುತ್ತದೆ ಮತ್ತು ಪುರಾತನ ಪ್ರತಿಮೆ ಸುತ್ತ ಈ ಕಥೆ ಸುತ್ತುತ್ತದೆ ಎಂದು ನಿರ್ದೇಶಕರು ಹೇಳಿದ್ದಾರೆ. ನಂತರ ಕೆಲವು ಉಲ್ಲಾಸದ ಘಟನೆಗಳು ತಿರುವುಗಳಿಗೆ ಕಾರಣವಾಗುತ್ತದೆ. ಮಧುಸೂಧನ್ ರಾವ್ ಮತ್ತು ಶಿವಕುಮಾರ್ ಕೆಬಿ ನಿರ್ಮಿಸಿರುವ ಈ ಚಿತ್ರದಲ್ಲಿ ಪವನ ಗೌಡ ನಾಯಕಿಯಾಗಿ ನಟಿಸಿದ್ದಾರೆ. ತೂತು ಮಡಿಕೆ ಚಿತ್ರದಲ್ಲಿ ಗಿರೀಶ್ ಶಿವ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannad

Please follow and like us:

Leave a Reply

Your email address will not be published. Required fields are marked *

Next Post

ಐಶ್ವರ್ಯಾ ರೈ ನಟನೆಯ ಪೊನ್ನಿಯಿನ್ ಸೆಲ್ವನ್ ಚಿತ್ರದ ಹೊಸ ಪೋಸ್ಟರ್

Thu Jul 7 , 2022
ಮುಂಬೈ : ಬಾಲಿವುಡ್ ಬ್ಯೂಟಿ ಐಶ್ವರ್ಯಾ ರೈ ನಟನೆಯ ಪೊನ್ನಿಯಿನ್ ಸೆಲ್ವನ್ ಚಿತ್ರದ ಹೊಸ ಪೋಸ್ಟರ್ ಅನ್ನು ಚಿತ್ರದ ನಿರ್ಮಾಪಕರು ಹಂಚಿಕೊಂಡಿದ್ದು ಐಶ್ವರ್ಯಾ ರೈ ಬಚ್ಚನ್ ಲುಕ್ ಗೆ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಒಂದು ಕಾಲದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿದ್ದ ಐಶು ಮದುವೆ ಬಳಿಕ ಅಳೆದು ತೂಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 2018 ರಲ್ಲಿ ತೆರೆಕಂಡ ಫನ್ನಿ ಖಾನ್ ಸಿನಿಮಾದ ಬಳಿಕ ಸಿನಿಮಾ ರಂಗದಿಂದ ದೂರವಾಗಿದ್ದ […]

Advertisement

Wordpress Social Share Plugin powered by Ultimatelysocial