ಕೂದಲಿಗೆ ಸರಿಯಾದ ಪೋಷಣೆಗಳು ಸಿಗದಿದ್ದಾಗ ಕೂದಲುದುರುತ್ತದೆ.ಹಾಗೇ ನೀರಿನ ಬದಲಾವಣೆಯಾದಾಗ, ನಮ್ಮ ಕೆಟ್ಟ ಜೀವನಶೈಲಿಯಿಂದ ಕೂದಲು ಉದುರಿ ಹೋಗುತ್ತದೆ. ಹಾಗಾಗಿ ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಬೃಂಗರಾಜ್ ಪುಡಿಯನ್ನು ಹೀಗೆ ಬಳಸಿ.ಬೃಂಗರಾಜ್ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಹಲವಾರು ಗಿಡಮೂಲಿಕೆ ಅಂಶಗಳನ್ನು ಒಳಗೊಂಡಿದೆ. ಬೃಂಗರಾಜ್ ಅನ್ನು ಅನೇಕ ತೈಲಗಳು, ಶಾಂಪೂಗಳು, ಕಂಡೀಷನರ್ ಗಳು ಮತ್ತು ಸೀರಮ್ ಗಳಲ್ಲಿ ಬಳಸಲಾಗುತ್ತದೆ. ಹಾಗೇ ಬೃಂಗರಾಜ್ ಪುಡಿಯನ್ನು ಕೂದಲಿಗೆ ಬಳಸಬಹುದು. ಇದು ಕೂದಲನ್ನು ಹೊಳೆಯುವಂತೆ ಮಾಡುತ್ತದೆ.1 ಚಮಚ ಬೃಂಗರಾಜ್ ಪುಡಿಗೆ 3-4 ಹನಿ ತೆಂಗಿನೆಣ್ಣೆಯನ್ನು ಸೇರಿಸಿ, 1 ಚಮಚ ಮೊಸರು ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಕೂದಲಿನ ಹಚ್ಚಿ. ಮತ್ತು 20 ನಿಮಿಷಗಳ ಕಾಲ ಬಿಡಿ. ನಂತರ ಕೂದಲನ್ನು ತೊಳೆಯಿರಿ.ಒಂದು ಪಾತ್ರೆ ಬಿಸಿ ಮಾಡಿ ಅದರಲ್ಲಿ 2 ಚಮಚ ತೆಂಗಿನೆಣ್ಣೆಯನ್ನು ಸೇರಿಸಿ ಅದಕ್ಕೆ ಬೃಂಗರಾಜ್ ಪುಡಿಯನ್ನು ಸೇರಿಸಿ. ಈ ಎಣ್ಣೆಯನ್ನು ಸೋಸಿ ಕೂದಲಿಗೆ ಹಚ್ಚಿ. ಇದು ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ.Th ಕೂದಲು ಉದುರುತ್ತಿದ್ದರೆ ಬೃಂಗರಾಜ್ ಪುಡಿಯನ್ನು ಹೀಗೆ ಬಳಸಿ.!
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada