ಉದ್ಧವ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ದಾಳ ಉರುಳಿಸಿ, ಹೊಸ ಸರ್ಕಾರ ರಚಿಸಿ ಸಿಎಂ ಗದ್ದುಗೆ ಏರಿದ್ದ ಏಕ್ನಾಥ್ ಶಿಂಧೆಗೆ ಡಬಲ್ ಜಯ ಸಿಕ್ಕಿದೆ. ಚುನಾವಣಾ ಆಯೋಗ ಈಗಾಗಲೇ ಶಿಂಧೆ ಬಣಕ್ಕೆ ಶಿವಸೇನೆಯ ಚಿಹ್ನೆಯನ್ನ ಅಧಿಕೃತಗೊಳಿಸಿದೆ. ಅತ್ತ ಅಧಿಕಾರವನ್ನೂ ಕಳ್ಕೊಂಡು ಈಗ ಪಕ್ಷವನ್ನೂ ಕಳಕೊಂಡ ಉದ್ಧವ್ ಠಾಕ್ರೆ ಅತಂತ್ರದಲ್ಲಿದ್ದಾರೆ.
ಆದ್ರೂ ಇದೆಲ್ಲದಕ್ಕೂ ಅಮಿತ್ ಶಾ ಕಾರಣ ಅನ್ನೋದು ಅವರ ಆರೋಪ.
ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆಗೆ ಅತ್ತ ಸಿಎಂ ಖುರ್ಚಿಯೂ ಇಲ್ಲ. ಅಧಿಕಾರವೂ ಇಲ್ಲ. ಈಗ ತಮ್ಮದೇ ತಂದೆಯ ಬಳುವಳಿಯಾಗಿ ಬಂದಿದ್ದ ಪಕ್ಷವೂ ಇಲ್ಲದಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಶಿಂಧೆ ಅವರ ಶಿವಸೇನೆ ಪಕ್ಷಕ್ಕೆ ಚುನಾವಣಾ ಆಯೋಗ ಧನಸ್ಸು ಚಿಹ್ನೆ ಹಾಗೂ ಅಧಿಕೃತ ಹೆಸರನ್ನ ಘೋಷಣೆ ಮಾಡಿತ್ತು. ಉದ್ಧವ್ ಠಾಕ್ರೆ ವರ್ಸಸ್ ಏಕನಾಥ್ ಶಿಂಧೆ ಚಿಹ್ನೆ ಗುದ್ದಾಟದಲ್ಲಿ ಶಿಂಧೆ ಬಣ ಗೆದ್ದು ಬೀಗಿತ್ತು. ಬಿಲ್ಲು ಬಾಣವನ್ನ ಹಿಡಿದು ಸಂಭ್ರಮಾಚರಣೆ ನಡೆಸಿದ್ರೆ ಅತ್ತ ಉದ್ದವ್ ಠಾಕ್ರೆ ಬಣ ಅಸ್ಥಿತ್ವವನ್ನೇ ಕಳಕೊಂಡು ಒದ್ದಾಡುತ್ತಿದೆ.
ಅಮಿತ್ ಶಾ ವಿರುದ್ಧ ಮೊಗ್ಯಾಂಬೋ ಖುಷ್ ಹುವಾ ಅಂತ ಲೇವಡಿ
ಶಿವಸೇನೆಯ ಅಧೀಕೃತ ಚಿಹ್ನೆ ಹಾಗೂ ಹೆಸರನ್ನ ಚುನಾವಣಾ ಆಯೋಗ ಏಕನಾಥ್ ಶಿಂಧೆ ಅವರ ಶಿವಸೇನೆ ಪಕ್ಷಕ್ಕೆ ನೀಡಿರೋದನ್ನ ಖಂಡಿಸಿ ಉದ್ಧವ್ ಠಾಕ್ರೆ ಆಕ್ರೋಶ ಹೊರಹಾಕಿದ್ದಾರೆ. ಚುನಾವಣಾ ಆಯೋಗ, ಮೋದಿ, ಅಮಿತ್ ಶಾ ಮೇಲೆ ಕೆಂಡಕಾರಿದ್ದಾರೆ. ಚುನಾವಣಾ ಆಯೋಗ ಕೇಂದ್ರ ಬಿಜೆಪಿ ಸರ್ಕಾರದ ಗುಲಾಮ ಅಂತ ಆರೋಪಿಸಿದ್ದಾರೆ. ಅಮಿತ್ ಶಾ ವಿರುದ್ಧ ಮೊಗ್ಯಾಂಬೋ ಖುಷ್ ಹುವಾ ಅಂತ ಲೇವಡಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಏನು ನಡೆಯುತ್ತಿದೆ. ತುಂಬಾ ಒಳ್ಳೆಯ ದಿನಗಳು ಮಹಾರಾಷ್ಟ್ರಕ್ಕೆ ಆಗಮಿಸಿವೆ. ಯಾಕೆಂದ್ರೆ ಶಿವಸೇನೆಯ ಹೆಸರು ಮತ್ತು ಚಿಹ್ನೆಯನ್ನ ಗುಲಾಮರಿಗೆ ನೀಡಲಾಗಿದೆ. ಇದರಿಂದ ಮೊಗ್ಯಾಂಬೋಗೆ ಖುಷಿಯಾಗಿದೆ.
– ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮಾಜಿ ಸಿಎಂ
ಕೇಂದ್ರ ಸಚಿವ ಅಮಿತ್ ಶಾರನ್ನ ಮೊಗ್ಯಾಂಬೋಗೆ ಹೋಲಿಸಿ ಉದ್ಧವ್ ಠಾಕ್ರೆ ಹೇಗೆ ಲೇವಡಿ ಮಾಡಿದ್ದಾರೆ ಅಂತ. ಇನ್ನೂ ಉದ್ಧವ್ ಠಾಕ್ರೆಯ ಈ ಉದ್ದಟತನಕ್ಕೆ ಅಮಿತ್ ಶಾ ಸಹ ತಿರುಗೇಟು ನೀಡಿದ್ದಾರೆ. ಏಕ್ನಾಥ್ ಶಿಂಧೆ ಬಣಕ್ಕೆ ಜಯಸಿಕ್ಕಿದೆ.. ಶಿವಸೇನೆಯ ಜೊತೆ ಸತ್ಯವಿದೆ.. ಉದ್ದಟತನದಿಂದ ಉದ್ದಾವ್ ಠಾಕ್ರೆ ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಕುಟುಕಿದ್ದಾರೆ.
ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂದ ಉದ್ಧವ್ ಠಾಕ್ರೆ
ಈಗಾಗಲೇ ಉದ್ದವ್ ಠಾಕ್ರೆ ಬಣ ಸಂಖ್ಯಾಬಲ ಎದುರಿಸ್ತಾ ಇದೆ. ಏಕ್ನಾಥ್ ಶಿಂಧೆ ಶಿವಸೇನೆಯ ಬಹುತೇಕ ಶಾಸಕರು ಹಾಗೂ ಸಂಸದರ ಬಲ ಹೊಂದಿದ್ದಾರೆ. ಚುನಾವಣಾ ಆಯೋಗ ಕೂಡಾ ಇದೆಲ್ಲವನ್ನೂ ಅಳೆದು ತೂಗಿಯೇ ಏಕ್ನಾಥ್ ಶಿಂಧೆ ಬಣವನ್ನ ಅಧಿಕೃತ ಶಿವಸೇನೆ ಅಂತಾ ಘೋಷಿಸಿತ್ತು. ಆದ್ರೆ ಉದ್ಧವ್ ಠಾಕ್ರೆಗೆ ಈ ಆದೇಶ ಸಮಾಧಾನ ತಂದಿಲ್ಲ. ಹೀಗಾಗಿ ಆಯೋಗದ ತೀರ್ಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ಮೂಲಕ ಅಂತಿಮ ಹಂತದ ಹೋರಾಟಕ್ಕೆ ಇಳಿದಿದ್ದಾರೆ. ಚುನಾವಣಾ ಆಯೋಗದ ಆದೇಶದ ಬೆನ್ನಲ್ಲೇ ಶಿವಸೇನೆ ಕಚೇರಿಯನ್ನ ಶಿಂಧೆ ಬಣ ಸ್ವಾದೀನ ಪಡಿಸಿಕೊಂಡಿದೆ. ಇದರಿಂದ ಮತ್ತಷ್ಟು ಕೆರಳಿರೋ ಉದ್ದಾವ್ ಠಾಕ್ರೆ, ಶಿವಸೇನೆ ಚಿಹ್ನೆಯನ್ನ ಮತ್ತೆ ಪಡೆಯಲು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದ್ರೆ ಸುಪ್ರೀಂ ಕೋರ್ಟ್ನಲ್ಲಿ ಉದ್ಧವ್ ಠಾಕ್ರೆಗೆ ತಮ್ಮ ಧನಸ್ಸು ವಾಪಸ್ ಸಿಗುತ್ತಾ ಅನ್ನೋದೇ ಅನುಮಾನ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada