ಭ್ರಷ್ಟರು ಯಾವುದೇ ಒಂದು ಪಕ್ಷಕ್ಕೆ ಸೀಮಿತ ಮಾಡಬೇಡಿ.ಬಹಳ ನಿರ್ಭಯವಾಗಿ, ನಿರ್ದಾಕ್ಷಿಣ್ಯವಾಗಿ ಹೇಳುವೆ.
ಭ್ರಷ್ಟರನ್ನು ಯಾವುದೇ ಒಂದು ಪಕ್ಷಕ್ಕೆ ಸೀಮಿತ ಮಾಡಬೇಡಿ, ಎಲ್ಲ ಕಡೆನೂ ಇದ್ದಾರೆ.
ಆದರೆ ನಮ್ಮ ದೌರ್ಭಾಗ್ಯ ಎಲ್ಲ ಪಕ್ಷದಲ್ಲಿ ಅನೇಕ ವೇಳೆ ಅವರದ್ದೇ ಮೇಲುಗೈ ಸಾಧಿಸುತ್ತಾರೆ.
ಮಾರ್ಮಿಕವಾಗಿ ಈ ಉತ್ತರ ಕೊಟ್ಟಿರುವೆ ಎಂದ ರಮೇಶಕುಮಾರ.ಪಿಎಸ್ಐ ಪರಿಕ್ಷೆಯಲ್ಲಿ ಅಕ್ರಮ ವಿಚಾರ
ಈ ಕುರಿತು ನನಗೆ ಸಂಪೂರ್ಣ ಮಾಹಿತಿ ಇಲ್ಲ, ಆದರೆ ಆತುರ ಪಟ್ಟು ವ್ಯಾಖ್ಯಾನ ಮಾಡಬಾರದು.
ಮಾತಿಗೆ ತೂಕ ಇದೆ, ಹೀಗಾಗಿ ಅದರ ಕುರಿತು ಸಂಪೂರ್ಣ ತಿಳಿದು ಮಾತನಾಡಬೇಕು.
ಅದರ ವಿಚಾರಣೆ ಇನ್ನೂ ಆಗಬೇಕು, ಅರ್ದಮರ್ದ ತಿಳಿದುಕೊಂಡು ಯಾರಾದರನ್ನು ಅಪಾದಿಸಬಾರದು.
ಇಂತಹ ಘಟನೆ ನಡೆದಿದ್ದು ಇದೊಂದು ನಾಗರಿಕ ಸಮಾಜಕ್ಕೆ ಅಪಮಾನ.
ಸಂವಿಧಾನದ ಅನ್ವಯ ಕಾನೂನು ಉಲ್ಲಂಘಿಸುವವರಿಗೆ ಶಿಕ್ಷೆ ಆಗಲೇ ಬೇಕು.ಆಗಲೇ ಇದೊಂದು ದೇಶ ಎಂದು ಆಗುವದು.
ದೇಶ ಮುನ್ನಡಿಸಲು ಸಂವಿಧಾನ ಮಾಡಿದ್ದು, ಸಂವಿಧಾನದ ಪರಿಚ್ಚೇದದ ಅನ್ವಯ ವಿವಿಧ ಕಾನೂನು ಮಾಡಲಾಗಿದೆ.
ಯಾವುದೇ ಕಾನೂನು ಯಾರೇ ಉಲ್ಲಂಘಿಸಿದಾಗ ಅವರಿಗೆ ಶಿಕ್ಷೆ ಆಗಬೇಕು.
ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ಆಗದಿದ್ದರೆ, ಕಾನೂನಿಗೆ ಏನು ಗೌರವ ಸಂವಿಧಾನಕ್ಕೆ ಏನು ಗೌರವ.
ಬಡವರಿಗೆ ಒಂದು ಶ್ರೀಮಂತರಿಗೆ ಒಂದು ಕಾನೂನಾ..? ಬಲಾಡ್ಯರಿಗೊಂದು ದುರ್ಬಲರಿಗೊಂದು ಕಾನೂನಾ..?
ಕಾನುನು ಎಂಬುದು ಸರ್ವ ಶ್ರೇಷ್ಟ, ಹಾಗೂ ಸಂವಿಧಾನ ಎಂಬುದು ಅಂತಿಮವಾಗಬೇಕು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: