ನನ್ನ ಮಗ ಸ್ನೇಹಿತರಿಗೆ ಬ್ರೆಡ್, ಬಿಸ್ಕೆಟ್​ ತರಲು ಹೋಗಿದ್ದ, ಅವನ ಬಗ್ಗೆ ಏನೆನೋ ಮಾತಾಡ್ಬೇಡಿ…ಕಣ್ಣೀರಿಟ್ಟು ಮನವಿ ಮಾಡಿದ ನವೀನ್​​ ತಾಯಿ

ಉಕ್ರೇನ್​ನಲ್ಲಿ ಬಾಂಬ್​ ದಾಳಿಗೆ ಬಲಿಯಾದ ಮೆಡಿಕಲ್​ ವಿದ್ಯಾರ್ಥಿ ನವೀನ್​ ನಿವಾಸಕ್ಕೆ ಇಂದು ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆತನ ಬಗ್ಗೆ ಟ್ರೋಲ್​ ಪೇಜ್​ನಲ್ಲಿ ನಡೆಯುತ್ತಿರುವ ಚರ್ಚೆಗೆ ಬೇಸರ ವ್ಯಕ್ತಪಡಿಸಿದರು. ನವೀನ್​ ತಾಯಿ ಸಹ ತಮ್ಮ ಮಗನ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನಾಡಬೇಡಿ ಟ್ರೋಲಿಗರಿಗೆ ಕೈಮುಗಿದು ಮನವಿ ಮಾಡಿದರು.

ಹಾವೇರಿ: ಇಂದು ಮೃತ ನವೀನ್ ನಿವಾಸಕ್ಕೆ ಉಕ್ರೇನ್​ನಿಂದ ಹಿಂದಿರುಗಿದ ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಪುತ್ರನ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನು ಆಡದಂತೆ ಮನವಿ ಮಾಡಿದ ನವೀನ್​ ತಾಯಿಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನವೀನ್​​ ಸೀನಿಯರ್​​​​ ಸುಮನ್, ನಾನು ಫೈನಲ್ ಇಯರ್ ಸ್ಟೂಡೆಂಟ್, ನಾನು ಹಾಸ್ಟೆಲ್ ಬಂಕರ್​​​​ನಲ್ಲಿದ್ದೆ. ಅಮೀತ್ ಜೊತೆ ನವೀನ್​​ ಬಂಕರ್​​​ನಲ್ಲಿದ್ದ. ನನ್ನ ತಮ್ಮನ ರೀತಿ ಇದ್ದ. ​​ಕರ್ಫ್ಯೂ ಸಮಯ ಮುಗಿದ ಮೇಲೆ ನವೀನ್​ ಹೊರಗೆ ಹೋಗಿದ್ದನು. ಆದರೆ ಕೆಲವೊಂದು ಟ್ರೋಲ್​​ ಪೇಜ್​ಗಳು ಅನಾವಶ್ಯಕವಾಗಿ ಏನೇನು ಹೇಳುತ್ತಿದ್ದಾರೆ. ಹಾಗೇ ಮಾಡಬೇಡಿ ಎಂದು ಮನವಿ ಮಾಡಿದರು.

ನಂತರ ನವೀನ್​ ಸ್ನೇಹಿತ ಅಮೀತ್ ಮಾತನಾಡಿ, ನವೀನ್​ ನಮ್ಮೊಟ್ಟಿಗೆ ಚೆನ್ನಾಗಿದ್ದ. ನಾನು ಊರಿಗೆ ವಾಪಸ್ಸಾಗಿದ್ದೇನೆ ಎನ್ನುವುದಕ್ಕಿಂತ ನವೀನ್​ ನಮ್ಮೊಟ್ಟಿಗೆ ಇಲ್ಲ ಎಂಬ ಬೇಜಾರಿದೆ. ನಾವ್ಯಾರು ನವೀನ್​​​ ಮೃತದೇಹ ನೋಡಿಲ್ಲ. ಅವನ ಕುಟುಂಬದವರು ನೋವಿನಲ್ಲಿದ್ದಾರೆ. ಸರ್ಕಾರದ ಅಧಿಕಾರಿಗಳು ಆದಷ್ಟು ಬೇಗ ನವೀನ್​ ಮೃತದೇಹವನ್ನು ಇಲ್ಲಿಗೆ ತರಿಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.

ನನ್ನ ಮಗ ಯಾವತ್ತೂ ಊಟಕ್ಕಾಗಿ ಆಸೆ ಪಟ್ಟವನಲ್ಲ. ಬಂದವರೆಲ್ಲ ಊಟ ಯಾಕೆ ತರುವುದಕ್ಕೆ ಹೋದ ಅಂತಾ ಕೇಳುತ್ತಾರೆ. ಆತನ​​​ ಸ್ನೇಹಿತರು ಮಲಗಿದ್ದರು. ಅವರಿಗೆ ಊಟ ತರಲು ನವೀನ್​ ಹೊರಗೆ ಹೋಗಿದ್ದ. ನನ್ನ ಮಗ ಬಡವರ ಧ್ವನಿಯಾಗಿದ್ದ. ದಯಮಾಡಿ ಯಾರೂ ನವೀನ್​​​ ಯಾಕೆ ಹೊರಗೆ ಹೋಗಿದ್ದ ಎಂದು ಕೇಳಬೇಡಿ ಎಂದು ನವೀನ್​​ ತಾಯಿ ವಿಜಯಲಕ್ಷ್ಮಿ ಕೈ ಮುಗಿದು ಬೇಡಿಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭೀಕರ ಕಾರು ಅಪಘಾತದಲ್ಲಿ ಸಂಸದರ 22 ವರ್ಷದ ಪುತ್ರ ದುರಂತ ಸಾವು

Thu Mar 10 , 2022
ಚೆನ್ನೈ: ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ರಾಜ್ಯಸಭಾ ಸದಸ್ಯ ಎನ್​​.ಆರ್​. ಇಳಂಗೋವನ್ ಅವರ ಪುತ್ರ ರಾಕೇಶ್​ (22) ಗುರುವಾರ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ಸಂಸದರ ಪುತ್ರ ಪುದುಚೇರಿಯಿಂದ ಚೆನ್ನೈಗೆ ಹೆಚ್ಚು ಪ್ರಯಾಣಿಕರೊಂದಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ನಿಯಂತ್ರಣ ತಪ್ಪಿದ ಕಾರು ರಸ್ತೆಯ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತದ ಸಂಭವಿಸಿದೆ. ರಾಕೇಶ್​ ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಪ್ರಯಾಣಿಕ ಗಂಭೀರವಾರ ಗಾಯಗೊಂಡಿದ್ದಾರೆ. ‘ ಘಟನೆಗೆ ಸಂಬಂಧಿಸಿದಂತೆ ಇನ್ನು ಹೆಚ್ಚಿನ […]

Advertisement

Wordpress Social Share Plugin powered by Ultimatelysocial