ಉಕ್ರೇನ್ನಲ್ಲಿ ಬಾಂಬ್ ದಾಳಿಗೆ ಬಲಿಯಾದ ಮೆಡಿಕಲ್ ವಿದ್ಯಾರ್ಥಿ ನವೀನ್ ನಿವಾಸಕ್ಕೆ ಇಂದು ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಆತನ ಬಗ್ಗೆ ಟ್ರೋಲ್ ಪೇಜ್ನಲ್ಲಿ ನಡೆಯುತ್ತಿರುವ ಚರ್ಚೆಗೆ ಬೇಸರ ವ್ಯಕ್ತಪಡಿಸಿದರು. ನವೀನ್ ತಾಯಿ ಸಹ ತಮ್ಮ ಮಗನ ಬಗ್ಗೆ ಇಲ್ಲ-ಸಲ್ಲದ ಮಾತುಗಳನ್ನಾಡಬೇಡಿ ಟ್ರೋಲಿಗರಿಗೆ ಕೈಮುಗಿದು ಮನವಿ ಮಾಡಿದರು.
ಹಾವೇರಿ: ಇಂದು ಮೃತ ನವೀನ್ ನಿವಾಸಕ್ಕೆ ಉಕ್ರೇನ್ನಿಂದ ಹಿಂದಿರುಗಿದ ಆತನ ಸ್ನೇಹಿತರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ನಂತರ ನವೀನ್ ಸ್ನೇಹಿತ ಅಮೀತ್ ಮಾತನಾಡಿ, ನವೀನ್ ನಮ್ಮೊಟ್ಟಿಗೆ ಚೆನ್ನಾಗಿದ್ದ. ನಾನು ಊರಿಗೆ ವಾಪಸ್ಸಾಗಿದ್ದೇನೆ ಎನ್ನುವುದಕ್ಕಿಂತ ನವೀನ್ ನಮ್ಮೊಟ್ಟಿಗೆ ಇಲ್ಲ ಎಂಬ ಬೇಜಾರಿದೆ. ನಾವ್ಯಾರು ನವೀನ್ ಮೃತದೇಹ ನೋಡಿಲ್ಲ. ಅವನ ಕುಟುಂಬದವರು ನೋವಿನಲ್ಲಿದ್ದಾರೆ. ಸರ್ಕಾರದ ಅಧಿಕಾರಿಗಳು ಆದಷ್ಟು ಬೇಗ ನವೀನ್ ಮೃತದೇಹವನ್ನು ಇಲ್ಲಿಗೆ ತರಿಸಲು ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದರು.
ನನ್ನ ಮಗ ಯಾವತ್ತೂ ಊಟಕ್ಕಾಗಿ ಆಸೆ ಪಟ್ಟವನಲ್ಲ. ಬಂದವರೆಲ್ಲ ಊಟ ಯಾಕೆ ತರುವುದಕ್ಕೆ ಹೋದ ಅಂತಾ ಕೇಳುತ್ತಾರೆ. ಆತನ ಸ್ನೇಹಿತರು ಮಲಗಿದ್ದರು. ಅವರಿಗೆ ಊಟ ತರಲು ನವೀನ್ ಹೊರಗೆ ಹೋಗಿದ್ದ. ನನ್ನ ಮಗ ಬಡವರ ಧ್ವನಿಯಾಗಿದ್ದ. ದಯಮಾಡಿ ಯಾರೂ ನವೀನ್ ಯಾಕೆ ಹೊರಗೆ ಹೋಗಿದ್ದ ಎಂದು ಕೇಳಬೇಡಿ ಎಂದು ನವೀನ್ ತಾಯಿ ವಿಜಯಲಕ್ಷ್ಮಿ ಕೈ ಮುಗಿದು ಬೇಡಿಕೊಂಡರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada