ಉಡುಪಿಯಲ್ಲಿ ವಿಶಿಷ್ಟ ಪ್ರೇಮಿಗಳ ದಿನಾಚರಣೆ
ಗೋ ಆಲಿಂಗನ ಮಾಡಿಕೊಳ್ಳುವ ಮೂಲಕ ವ್ಯಾಲೆಂಟೈನ್ಸ್ ಡೇ ಆಚರಣೆ
ಮಣಿಪಾಲದ ಶಿವಪಾಡಿ ದೇವಸ್ಥಾನದಲ್ಲಿ ವಿಶಿಷ್ಟ ಆಚರಣೆ
ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಪ್ರೇಮಿಗಳ ದಿನಾಚರಣೆಯಂದು ಗೋ ಅಪ್ಪುಗೆ ಗೆ ಆಸಕ್ತಿವಹಿಸಿತ್ತು
ಪ್ರಾಣಿ ಕಲ್ಯಾಣ ಮಂಡಳಿ ಗೋ ಅಪ್ಪುಗೆಗೆ ಆದೇಶ ಮಾಡಿತ್ತು
ಬಳಿಕ ವಿವಾದ ಉಂಟಾದ ಹಿನ್ನೆಲೆಯಲ್ಲಿ ಈ ಸೂಚನೆ ವಾಪಸ್ಸು ಪಡೆದಿತ್ತು
ಮಣಿಪಾಲದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದ ಆಚರಣೆ
ಗೋ ಆಲಿಂಗನ ಮಾಡಿ ಗೋಪೂಜೆ ನೆರವೇರಿಸಿದ ಭಕ್ತರು
ಪ್ರೇಮಿಗಳ ದಿನ ಒಂದು ಪಾಶ್ಚಾತ್ಯ ವಿಕೃತಿ
ಇದರ ಹಿನ್ನೆಲೆ ಹೆಚ್ಚಿನ ಜನರಿಗೆ ತಿಳಿದಿಲ್ಲ
ಭಾರತದಲ್ಲಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಚರಿಸುತ್ತಾರೆ
ಕೇಂದ್ರ ಸರಕಾರ ಗೋ ಆಲಿಂಗನ ದಿನ ಆಚರಿಸಲು ಚಿಂತನೆ ನಡೆಸಿತ್ತು
ಮುಂದಿನ ದಿನಗಳಲ್ಲಿ ಇದು ಅಧಿಕೃತವಾಗಿ ಪ್ರಾರಂಭವಾಗಲಿ ಎಂದ ಭಕ್ತರು
ಕಾರ್ಯಕ್ರಮದಲ್ಲಿ ಶಾಸಕ ರಘುಪತಿ ಭಟ್ ತಾಯಿ ಸರಸ್ವತಿ ಕೂಡಾ ಭಾಗಿ
ದೇವಸ್ಥಾನದ ಮುಖ್ಯಸ್ಥ ಮಹೇಶ್ ಠಾಕೂರ್ ನೇತೃತ್ವದಲ್ಲಿ ನಡೆದ ಗೋ ಆಲಿಂಗನ ದಿನ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada