ಉತ್ತರ ಪ್ರದೇಶದಲ್ಲಿ ಚುನಾವಣಾ ಮೈತ್ರಿಗಳು ಗಂಟೆ ಗಂಟೆಗೂ ಬದಲಾಗುತ್ತಿದ್ದು, ಅಖಿಲೇಶ್ ಯಾದವ್ಗೆ ಪೂರ್ಣ ಬೆಂಬಲ ಘೋಷಿಸಿದ್ದ ಭೀಮ್ ಆರ್ಮಿ ಕೇವಲ 24 ಗಂಟೆಗಳಲ್ಲಿಯೇ ವಾಪಾಸ್ ತೆಗೆದುಕೊಂಡಿದೆ. ದಲಿತರನ್ನು ಅಖಿಲೇಶ್ ಯಾದವ್ ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ, ಅವರನ್ನು ಚುನಾವಣಾ ಕಣದಲ್ಲಿಳಿಸಲು ಆಹ್ವಾನ ನೀಡುತ್ತಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಶನಿವಾರ ದೂರಿದ್ದಾರೆ.
ಇದಕ್ಕೂ ಮೋದಲು ಬಿಜೆಪಿ ಸೋಲಿಸಲು ಒಗ್ಗಟ್ಟು ಅತ್ಯಂತ ಮುಖ್ಯ ಎಂದು ಹೇಳಿ, ಅಖಿಲೇಶ್ ಯಾದವ್ ನೇತೃತ್ವದ ಮೈತ್ರಿಕೂಟ ಬೆಂಬಲಿಸುವುದಾಗಿ ಹೇಳಿದ್ದರು.
ಆದರೆ, ಶನಿವಾರ ಬೆಳಗ್ಗೆ ತಮ್ಮ ಬೆಂಬಲ ಹಿಂಪಡೆದಿದ್ದಾರೆ. ಕಾರಣ ದಲಿತ ಸಮುದಾಯವನ್ನು ಅಖಿಲೇಶ್ ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ ಎಂದು ಆಜಾದ್ ಟೀಕಿಸಿದ್ದಾರೆ. ‘ ಆರು ತಿಂಗಳಿನಿಂದ ‘ಅಖಿಲೇಶ್ ಯಾದವ್ ಜೊತೆ ಚುನಾವಣಾ ಮೈತ್ರಿಗಾಗಿಕಾಯುತ್ತಿದ್ದೆ. ಆದರೆ, ಅದು ಉತ್ತಮ ಫಲಿತಾಂಶ ನೀಡಲಿಲ್ಲ. ಅವರು ದಲಿತರ ನಾಯಕತ್ವ ಇಷ್ಟಪಡುವುದಿಲ್ಲ ಅವರು ದಲಿತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡುತ್ತಿದ್ದಾರೆ ಎಂದು ಚಂದ್ರಶೇಖರ್ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada