ಕೋಲಾರದ ಶ್ರೀನಿವಾಸಪುರ ದಲ್ಲಿ ಮತ್ತೊಂದು ಆಡಿಯೋ ಬಾಂಬ್.
ಜೆಡಿಎಸ್ ಕಾರ್ಯಕರ್ತನೊಂದಿಗೆ ಮಾತನಾಡಿರುವ ಆಡಿಯೋ ಎಲ್ಲೆಡೆ ವೈರಲ್.
ನಿನ್ನೆ ನಡೆದಕೊಂಡಿದ್ದು ಸರಿನಾ ಸುಧಾಕರ್ ಜೊತೆ ಕಾಣಿಸಿಕೊಂಡಿದ್ದು.
ಏನಣ್ಣ ಹೀಗಾಯ್ತು, ನೀವು ಅವರು ಚೆನ್ನಾಗಿದ್ದೀರ ಎಂದು ಮಾಜಿ ಶಾಸಕನನ್ನ ಪ್ರಶ್ನೆ ಮಾಡುವ ಕಾರ್ಯಕರ್ತ.
ನಿಮ್ಮತ್ರ ಹಣ ಇಲ್ಲ ಅನ್ನೋದು ನನಗೂ ಗೊತ್ತಿದೆ ಅಣ್ಣಾ.
ನಿಮ್ಮನ್ನ ನಾವು ದುಡ್ಡು ಕಾಸು ಕೊಡಿ ಎಂದು ಕೇಳಿದ್ದೀರಾ ಹೇಳಿ.
ಆದ್ರೆ ನೀವು ಮಾಡ್ತಾ ಇರೋದು ಸರಿನಾ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಪ್ರಶ್ನೆ ಮಾಡುವ ಕಾರ್ಯಕರ್ತ.
ನಿಮ್ಮ ಅವರ ಸಂಬಂದ ಚನ್ನಾಗಿದೆ ಅಂದ್ರೆ ಚನ್ನಾಗಿರಿ ಅಣ್ಣಾ.
ಸುಮ್ಮನಿರಪ್ಪ ಅವರು ೨೪ ಗಂಟೆ ನಮ್ಮ ಕೆಲಸ ಮಾಡಿಕೊಡ್ತಾರೆ.
ಅಲ್ಲಾ ಅಣ್ಣಾ ನಾವೆಲ್ಲಾ ನಿಮ್ಮ ಪರವಾಗಿರುವವರು ಏನ್ ಮಾಡೋದು.
ಎಂಎಲ್ ಎ ಗಿರಿ ಪುಡಗೋಸಿ ಮಿನಿಸ್ಟರ್ ಪೋಸ್ಟ್ ಬೇಡ ನೀವೆ ಇಟ್ಟು ಕೊಳ್ರಯ್ಯ.
ನಾವು ಸೋಷಿಯಲ್ ಮೀಡಿಯಾದಲ್ಲಿರುವವರು, ಕಾರ್ಯಕರ್ಯರು ಏನ್ ಮಾಡೋದು.
ಹೇ ನಿಮಗೆ ಇದೆಲ್ಲಾ ಅರ್ಥ ಆಗಲ್ಲ ಸುಮ್ಮನಿರಯ್ಯ.
ಇವಾಗ್ಲೆ ಎರಡು ಮೂರು ಅಟ್ರಾಸಿಟಿ ಕೇಸ್ ಹಾಕಿದ್ದಾರೆ.
ನಾವು ಅವರನ್ನ ಬಿಜೆಪಿಯವರನ್ನ ಹೋಗಿ ಕೇಳ ಬೇಕು.
ಅವರು ಇವಾಗಲೆ ಜೆಡಿಎಸ್ ನಮ್ಮನ್ನ ಬಿಜೆಪಿಯ ಬಿ ಟೀಂ ಅಂತಾ ಇದ್ದಾರೆ.
ಅಷ್ಟೋತ್ತಿಗೆ ಫೋನ್ ನಲ್ಲಿ ಬದಲಾದ ವಾಯ್ಸ್,
ಜೆಡಿಎಸ್ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್.
ಹೇ ಅವರು ಬಿ ಟೀಂ ಅಂತಾದ್ರು ಅನ್ನಲಿ, ಪುಡುಗೋಸಿ ಅಂತಾದ್ರು ಅನ್ನಲಿ.
ಸುಧಾಕರ್ ಎಲೆಕ್ಷನ್ ಗೆ ೫ ಕೋಟಿ ಹಣ ಕೊಡ್ತಾರೆ ಸುಮ್ಮನಿರಯ್ಯ.
ಎರಡು ಮೂಕ್ಕಾಲು ನಿಮಿಷದ ಎಡಿಟೇಡ್ ಆಡಿಯೋ ಎಲ್ಲೆಡೆ ವೈರಲ್.
ರಮೇಶ್ ಕುಮಾರ್ ಗೆ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಖೆಡ್ಡಾ ತಯಾರಿ ಮಾಡಿದ್ರಾ.
ಅರೋಗ್ಯ ಸಚಿವ ಸುಧಾಕರ್ ಜೊತೆ ಸೇರಿ ಗೇಮ್ ಪ್ಲಾನ್ ಮಾಡಿದ್ರಾ.
ಅರೋಗ್ಯ ಸಚಿವ ಸುಧಾಕರ್ ರಮೇಶ್ ಕುಮಾರ್ ಸೋಲಿಸಲು ವೆಂಕಟಶಿವಾರೆಡ್ಡಿ ಅಸ್ತ್ರವಾದ್ರ.
ಜೆಡಿಎಸ್ ಕೋಲಾರ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಸ್ಟ್ರಾಟರ್ಜಿ ಆಡಿಯೋ ವೈರಲ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada