ಕಪಿಲ್‌ದೇವ್‌ ನಿವಾಸದಲ್ಲಿ ಗೆಲುವಿನ ಪಾರ್ಟಿ!

ಹೊಸದಿಲ್ಲಿ: ಎರಡೂ ಟೆಸ್ಟ್‌ಗಳಲ್ಲಿ ಪ್ರವಾಸಿ ಆಸ್ಟ್ರೇಲಿಯವನ್ನು ಮೂರೇ ದಿನಗಳಲ್ಲಿ ಬಗ್ಗುಬಡಿದ ಭಾರತದ ಸಾಹಸಕ್ಕೆ ಎಲ್ಲ ದಿಕ್ಕುಗಳಿಂದಲೂ ಪ್ರಶಂಸೆ ಗಳ ಸುರಿಮಳೆ ಆಗುತ್ತಿದೆ.

“ಬೋರ್ಡರ್‌-ಗಾವಸ್ಕರ್‌ ಟ್ರೋಫಿ’ಯನ್ನು ಉಳಿಸಿಕೊಂಡ ಖುಷಿಗಾಗಿ ಸಂಭ್ರ ಮಾಚರಣೆಗಳೂ ನಡೆಯುತ್ತಿವೆ.

ಇದಕ್ಕೆ 1983ರ ವಿಶ್ವಕಪ್‌ ವಿಜೇತ ತಂಡದ ಸದಸ್ಯರೂ ಹೊರತಲ್ಲ.

ದ್ವಿತೀಯ ಟೆಸ್ಟ್‌ ಪಂದ್ಯವನ್ನು ರವಿವಾರವೇ ಗೆದ್ದ ಬಳಿಕ ಅಂದಿನ ವಿಶ್ವಕಪ್‌ ವಿಜೇತ ತಂಡದ ನಾಯಕ ಕಪಿಲ್‌ದೇವ್‌ ಅವರ ಹೊಸದಿಲ್ಲಿ ನಿವಾಸದಲ್ಲಿ ಅಂದಿನ ಹೀರೋಗಳೆಲ್ಲ ಸೇರಿ ಪಾರ್ಟಿ ನಡೆಸಿದರು. ಮದನ್‌ಲಾಲ್‌, ಕೀರ್ತಿ ಆಜಾದ್‌, ರವಿಶಾಸ್ತ್ರಿ, ಸುನೀಲ್‌ ಗಾವಸ್ಕರ್‌ ಅವರೆಲ್ಲ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.

“1983ರ ವಿಶ್ವಕಪ್‌ ವಿಜೇತ ತಂಡದ ದಿಲ್ಲಿ ಹುಡುಗರೊಂದಿಗೆ ಸೇರಿ ಕಪಿಲ್‌ದೇವ್‌ ನಿವಾಸದಲ್ಲಿ ಟೆಸ್ಟ್‌ ಗೆಲುವನ್ನು ಸಂಭ್ರಮಿಸಲಾಯಿತು. ಭರ್ಜರಿ ಔತಣ, ಅಮೋಘ ಮಾತುಕತೆ, ಅದ್ಭುತ ಸಂಜೆ…’ ಎಂಬುದಾಗಿ ಸುನೀಲ್‌ ಗಾವಸ್ಕರ್‌ ಪ್ರತಿಕ್ರಿಯಿಸಿದ್ದಾರೆ.

ಜತೆಗೊಂದು ಚಿತ್ರವನ್ನೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ರವಿಶಾಸ್ತ್ರಿ ಕೂಡ ಟ್ವಿಟರ್‌ನಲ್ಲಿ ಒಂದು ಚಿತ್ರವನ್ನು ಹಾಕಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೂಜಾ ವಿಚಾರಕ್ಕೆ ಅರ್ಚಕನನ್ನೇ ಓಡಾಡಿಸಿ ಹಲ್ಲೆ ಮಾಡಿದ ಕಂಪ್ಲಿಕೊಪ್ಪ ಗ್ರಾಮಸ್ಥರು.

Tue Feb 21 , 2023
ಮಠದ ಪೂಜೆ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಹಾಗೂ ಅರ್ಚಕನ ನಡುವೇ ಮಾರಾಮಾರಿ ನಡೆದ ಘಟನೆ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಕಳೆದ ಐವತ್ತಕ್ಕೂ ಹೆಚ್ಚು ವರ್ಷಗಳಿಂದ ಬಸವಣ್ಣ ದೇವಸ್ಥಾನದ ಪ್ರಕಾಶ್ ಮುಳುಗಂದಮಠ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ‌. ಇವರ ಕಾರ್ಯವೈಖರಿ ಬಗ್ಗೆ ಬೇಸತ್ತ ಗ್ರಾಮಸ್ಥರು ಅರ್ಚಕರನ್ನು ಪೂಜೆ ಮಾಡದಂತೆ ಹೇಳಿದ್ದಾರೆ. ಇವತ್ತು ಮಠದ ಪೂಜೆ ವಿಷಯವಾಗಿ ಗ್ರಾಮಸ್ಥರು ಅರ್ಚಕರ ನಡುವೆ ಮಾತಿಗೆ ಮಾತು ನಡೆದಿದೆ. ಇದು ವಿಕೋಪಕ್ಕೆ ತಿರುಗಿ ದೇವಸ್ಥಾನದಲ್ಲಿಯೇ ಅರ್ಚಕೊಂದಿಗೆ […]

Advertisement

Wordpress Social Share Plugin powered by Ultimatelysocial