ಹಲವು ಬಗೆಯ ಫೇಸ್ ಪ್ಯಾಕ್ ಗಳನ್ನು ನೀವು ಬಳಸಿರಬಹುದು.

ಲವು ಬಗೆಯ ಫೇಸ್ ಪ್ಯಾಕ್ ಗಳನ್ನು ನೀವು ಬಳಸಿರಬಹುದು. ಕೆಲವು ಅದ್ಭುತ ಎನಿಸುವ ಪರಿಣಾಮ ಕೊಟ್ಟರೆ ಮತ್ತೆ ಕೆಲವು ನಿಧಾನಕ್ಕೆ ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದರೆ ಎಲ್ಲಾ ರೀತಿಯ ತ್ವಚೆಗಳಿಗೂ ಹೊಂದಿಕೊಳ್ಳುವ ಅತ್ಯುತ್ತಮ ಫೇಸ್ ಪ್ಯಾಕ್ ಎಂದರೆ ಕಿತ್ತಳೆ ಹಣ್ಣಿನ ಸಿಪ್ಪೆಯದ್ದು.

ಕಿತ್ತಳೆ ತಿಂದಾದ ಬಳಿಕ ಸಿಪ್ಪೆಯನ್ನು ಎಸೆಯದೆ ಒಟ್ಟು ಮಾಡಿ. ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಸಣ್ಣ ತುಂಡುಗಳಾಗಿ ಮಾಡಿ, ಮಿಕ್ಸಿಯಲ್ಲಿ ರುಬ್ಬಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿ ಮುಚ್ಚಿಡಿ. ಬೇಕಾದಾಗ ಬಳಸಿ.

ಇದರ ಪೇಸ್ಟ್ ತಯಾರಿಸುವಾಗ ಕಿತ್ತಳೆ ಸಿಪ್ಪೆಯ ಪುಡಿಗೆ, ಒಂದು ಚಮಚ ಅಡುಗೆ ಸೋಡಾ ಬೆರೆಸಿ. ಬೆರಳು ಬಳಸಿ ಮಿಕ್ಸ್ ಮಾಡಿ ಪೇಸ್ಟ್ ತಯಾರಿಸಿ ಮುಖಕ್ಕೆ ಸ್ಕ್ರಬ್ ರೀತಿಯಲ್ಲಿ ತಿಕ್ಕಿ. ಇದರಿಂದ ಮುಖದ ಮೊಡವೆ ಸಮಸ್ಯೆ ದೂರವಾಗುತ್ತದೆ.

ಕಿತ್ತಳೆ ಸಿಪ್ಪೆಯ ಪುಡಿಗೆ ಶ್ರೀಗಂಧ ತೇದು ಬೆರೆಸಿ ಹಚ್ಚುವುದರಿಂದ ಮುಖದ ಕಲೆ ಸಮಸ್ಯೆ ದೂರವಾಗುತ್ತದೆ. ಇದಕ್ಕೆ ರೋಸ್ ವಾಟರ್ ಬೆರೆಸಿ ಹಚ್ಚಿಕೊಂಡರೆ ಮುಖದ ಸುಕ್ಕು, ನೆರಿಗೆಗಳು ಇಲ್ಲವಾಗುತ್ತವೆ.

ಈ ಪುಡಿಗೆ ಹಾಲು ಇಲ್ಲವೇ ಜೇನುತುಪ್ಪ ಬೆರೆಸಿ ಹಚ್ಚಿಕೊಂಡರೆ ಮುಖದ ತೇವಾಂಶ ಬಹುಕಾಲ ಉಳಿಯುವಂತೆ ನೋಡಿಕೊಳ್ಳುತ್ತದೆ. ಈ ಪೇಸ್ಟ್ ಅನ್ನು ಇಪ್ಪತ್ತು ನಿಮಿಷ ಹೊತ್ತು ಮುಖದ ಮೇಲೆ ಇಟ್ಟುಕೊಂಡರೆ ಸಾಕು, ಬಳಿಕ ಉಗುರು ಬೆಚ್ಚಗಿನ ನೀರಿನಲ್ಲೇ ಮುಖ ತೊಳೆಯುವುದನ್ನು ಮರೆಯದಿರಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಕಿಚನ್, ಡೈನಿಂಗ್ ಟೇಬಲ್ ಮೇಲೆ ಕೂತ್ಕೊಂಡು ಅಭ್ಯರ್ಥಿ ಘೋಷಣೆ ಮಾಡೋ ಪಕ್ಷ ನಮ್ಮದಲ್ಲ"

Mon Feb 20 , 2023
  ನಮ್ಮದು ಪ್ರಜಾಪ್ರಭುತ್ವ ಪಕ್ಷ. ನನ್ನನ್ನು ನಾನೇ ಕ್ಯಾಂಡಿಡೇಟ್ ಅಂತ ಹೇಳಿಕೊಳ್ಳುವುದಕ್ಕೆ ನಾನು ದೊಡ್ಡ ಕುಟುಂಬದವನಲ್ಲ. ಕಿಚನ್, ಡೈನಿಂಗ್ ಟೇಬಲ್ ಮೇಲೆ ಕೂತ್ಕೊಂಡು ಅಭ್ಯರ್ಥಿ ಘೋಷಣೆ ಮಾಡುವ ಪಕ್ಷ ನಮ್ಮದಲ್ಲ. ಪ್ರಭುತ್ವವನ್ನು ಬಿಟ್ಟು ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ರಾಜಕಾರಣ ಮಾಡುವುದಕ್ಕೆ ನಮ್ಮಲ್ಲಿ ಅವಕಾಶ ಇಲ್ಲ ಎಂದು ಹೇಳುವ ಮೂಲಕ ಹಾಸನ ಶಾಸಕ ಬಿಜೆಪಿಯ, ಪ್ರೀತಂ ಜೆ ಗೌಡ ಮತ್ತೊಮ್ಮೆ ಜೆಡಿಎಸ್ ಪಕ್ಷದ “ಕುಟುಂಬ ರಾಜಕಾರಣ”ವನ್ನು ಪರೋಕ್ಷವಾಗಿಯೇ ಮಾತಿನ ಮೂಲಕ ಕುಟುಕಿದರು.ಹಾಸನದಲ್ಲಿ ಮಾತನಾಡಿದ […]

Advertisement

Wordpress Social Share Plugin powered by Ultimatelysocial