ವಿಕ್ರಾಂತ್ ರೋಣ ವಿಶ್ವಾದ್ಯಂತ ಕೌಂಟ್ ಡೌನ್ ಶುರು..!

 

‘ವಿಕ್ರಾಂತ್ ರೋಣ’ ರಿಲೀಸ್ ಗೆ ಜಗತ್ತಿನಾದ್ಯಂತ ಕೌಂಟ್ ಡೌನ್ ಶುರುವಾಗಿದೆ..! ಚಿತ್ರ ಬಿಡುಗಡೆಗೂ ಮುನ್ನ ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಕ್ರಮ ಆಯೋಜನೆಯಾಗುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿ ವಿಕ್ರಾಂತ ರೋಣ ಹವಾ ತುಂಬಾ ಜೋರಾಗಿದ್ದು, ಖಾಸಗಿ ಮಾಲ್ ನಲ್ಲಿ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ.

ಇನ್ನೊಂದೆಡೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಗೆ ರಿಯಲ್ ಸ್ಟಾರ್ ಉಪೇಂದ್ರ ಸಾಥ್ ನೀಡಿದ್ದಾರೆ. ಒಟ್ಟಾರೆ ಹೇಳುವುದಾದರೆ, ವಿರ್ಕಾಂತ್ ರೋಣ ಪ್ರೀ ರಿಲೀಸ್ ಇವೆಂಟ್ ಭರ್ಜರಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ನಟ ಸುದೀಪ್ ಸೇರಿದಂತೆ ಚಿತ್ರದ ಸಂಪೂರ್ಣ ತಂಡ ಹಾಜರಾಗಿದೆ.

ಆದರೆ, ಮತ್ತೊಂದೆಡೆ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿಗಳು ತೀವ್ರ ಪರದಾಟ ನಡೆಸಿದ್ದಾರೆ. ಕಿಚ್ಚ ಸುದೀಪ್ ಅಭಿನಯದ ಈ ಚಿತ್ರ ಹಾಲಿವುಡ್ ನಲ್ಲಿಯೂ ಬಿಡುಗಡೆಯಾಗುತ್ತಿರುವುದು ಈ ಬಾರಿಯ ವಿಶೇಷ. ಇದಕ್ಕೂ ಮೊದಲು ಕಳೆದ ಎರಡು ದಿನಗಳಿಂದ ವಿಕ್ರಾಂತ್ ರೋಣ ತಂಡ ದೇಶದ ವಿವಿಧ ನಗರಗಳಲ್ಲಿ ಪ್ರೀರಿಲೀಸ್ ಇವೆಂಟ್ ಆಯೋಜಿಸುವುದರಲ್ಲಿ ನಿರತವಾಗಿದೆ. ಇದೆ ಸರಣಿಯಲ್ಲಿ ಇಂದು ಬೆಂಗಳೂರಿನ ಲುಲೂ ಮಾಲ್ ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರಿಯಲ್ ಸ್ಟಾರ್ ಉಪೇಂದ್ರ , ಸಚಿವ ಮುನಿರತ್ನ , ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂತಾದವರು ವಿಕ್ರಾಂತ್ ರೋಣ ಟೀಮ್ ಜೊತೆಗೆ ಹಾಜರಾಗಿದ್ದಾರೆ.

ಉಪೇಂದ್ರ ಅವರು ಮಾತನಾಡಿದ ಅವರು, ‘ಸುದೀಪ್ ಅವರನ್ನು ನೋಡಿ ಹೀರೋ ಅಗಿ ಎಂದು ಹೇಳಿದ್ದೆ. ಆದರೆ ಅವರು ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಅಲ್ಲದೇ ಇದು ಪ್ಯಾನ್ ಇಂಡಿಯಾ ಅಲ್ಲ ಪ್ಯಾನ್ ವರ್ಲ್ಡ್ ಸಿನಿಮಾ. ಯಶ್ ಪ್ಯಾನ್ ಇಂಡಿಯಾ ಹೋಡಿತಿವಿ ಅಂದ್ರು ಈಗ ನಾವು ಪ್ಯಾನ್ ವರ್ಲ್ಡ್ ಹೋಡಿತಿವಿ. ಜೊತೆಗೆ ವಿಕ್ರಾಂತ್ ರೋಣ ಅಂದ್ರೆ ವಿಕ್ಟರಿ ರೋಣ ಎಂದು ಅರ್ಥ. ಇದರೊಂದಿಗೆ ನನಗೆ ಟಿಕೆಟ್ ಸಿಗಲ್ಲ ಫಸ್ಟ್ ಡೇ ಈ ಸಿನಿಮಾವನ್ನು ಜನಗಳ ಜೊತೆ ಕುಳಿತು ನೋಡಬೇಕೆಂದು ಆಸೆ ಇದೆ‘ ಎಂದು ಹೇಳಿದ್ದಾರೆ.

ಇದು ನನ್ನೊಬ್ಬನ ಕನಸಲ್ಲ ಎಲ್ಲರ ಕನಸು ಇನ್ನು, ಕಾರ್ಯಕ್ರಮದಲ್ಲಿ ಮಾತನಾಡಿದ ಕಿಚ್ಚ ಸುದೀಪ್ ಅಭಿಮಾನಿಗಳ ಸೌಂಡ್ಗೆ ಇದು ಸೌಂಡ್ ಅಂದ್ರೆ ಎಂದು ನೆರೆದವರಿಗೆ ಉತ್ತೇಜಿಸಿದರು. ಇದಾದ ಬಳಿಕ ಸಿನಿಮಾದ ಕುರಿತು ಮಾತನಾಡಿದ ಅವರು, ‘ಈ ಸಿನಿಮಾ ನನ್ನೋಬ್ಬನ ಕನಸಲ್ಲ. ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಇದು ಎಲ್ಲರ ಕನಸು. ಅಲ್ಲದೇ ವಿಕ್ರಾಂತ್ ರೋಣ ಹಾಗೂ ನನಗೆ ಯಾವುದೇ ವ್ಯತ್ಯಾಸ ಇಲ್ಲ ಅವನೇ ನಾನು ನಾನೇ ಅವನು‘ ಎಂದು ಹೇಳಿದ್ದಾರೆ.

ಅಪ್ಪು ನೆನೆದ ಜಾನಿ ಮಾಸ್ಟರ್
ಕಾರ್ಯಕ್ರಮ ಯಾವುದೇ ಆಗಿರಲಿ ಅಲ್ಲಿ ನಟ ಪುನೀತ್ ರಾಜ್ಕುಮಾರ್ ಅವರನ್ನು ಇದೀಗ ಎಲ್ಲಡೆ ನೆನಪಿಸಿಕೊಳ್ಳಲಾಗುತ್ತಿದೆ. ಅದೇ ರೀತಿ ಇದೀಗ ವಿಕ್ರಾಂತ್ ರೋಣ ಕಾರ್ಯಕ್ರಮದಲ್ಲಿಯೂ ಸಹ ಜಾನಿ ಮಾಸ್ಟರ್ ಅಪ್ಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಲ್ಲದೇ ನನ್ನನ್ನು ಇಲ್ಲಿ ಪರಿಸಯಿಸಿದ್ದೇ ಅಪ್ಪು ಸರ್. ಅಲ್ಲದೇ ಯಾರು ಎಲ್ಲೇ ಡ್ಯಾನ್ಸ್ ಮಾಡಿದ್ರು ಅಲ್ಲಿ ಅಪ್ಪು ಸರ್ ಇರ್ತಾರೆ ಎಂದ ಜಾನಿ ಮಾಸ್ಟರ್ ಹೇಳಿದ್ದಾರೆ.
ಇದರ ಜೊತೆ ಇನ್ನು 2 ದಿನದಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಅಲ್ಲದೇ ಸುದೀಪ್ ಅವರ 27 ವರ್ಷವೂ ಕಂಪ್ಲೀಟ್ ಆಗುತ್ತಿದೆ. 27 ವರ್ಷದಿಂದ ಒಂದು ಲೆಕ್ಕ, ವಿಕ್ರಾಂತ್ ರೋಣ ರಿಲೀಸ್ ಆದ್ಮೇಲೆ ಒಂದು ಲೆಕ್ಕ ಎಂದು ನಟ ನಿರೂಪ್ ಭಂಡಾರಿ ಹೇಳಿದ್ದಾರೆ.
ಬಹುತೇಕ ಟಿಕೆಟ್ಗಳು ಮಾರಾಟ
ಚಿಕ್ಕಮಂಗಳೂರು ಜಿಲ್ಲೆ, ಮೈಸೂರು ಸೇರಿದಂತೆ ಅನೇಕ ಕಡೆ ಥಿಯೇಟರ್ಗಳಲ್ಲಿ ಟಿಕೆಟ್ ಖಾಲಿ ಆಗಿದ್ದು, ಮೊದಲ ದಿನ ಶೋ ನೋಡಬೇಕು ಎಂದು ಆಸೆ ಹೊಂದಿದ್ದ ಅನೇಕ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಕೇವಲ ರಾಜ್ಯದಲ್ಲಿ ಮಾತ್ರವಲ್ಲದೇ ಜರ್ಮನಿಯಲ್ಲಿ ಸಹ ಈ ಸಿನಿಮಾಗೆ ಬಹಳ ಬೇಡಿಕೆ ಇದ್ದು, ಈಗಾಗಲೇ ಅರ್ಧಕ್ಕಿಂತ ಹೆಚ್ಚು ಟಿಕೆಟ್ಗಳು ಸೋಲ್ಡ್ ಆಗಿದೆ. ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಜನರಲ್ಲಿ ಬಹಳ ನಿರೀಕ್ಷೆ ಇದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕೆಜಿಎಫ್ ನಂತರ ಮತ್ತೊಮ್ಮೆ ಸ್ಯಾಂಡಲ್ವುಡ್ನ ಸಿನಿಮಾ ಎಲ್ಲೆಡೆ ಟ್ರೆಂಡಿಂಗ್ನಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನ ಕಳ್ಳತನ ಮಾಡ್ತಿದ್ದ ಆರೋಪಿಗಳ ಬಂಧನ!

Wed Jul 27 , 2022
ಮಾದೇಶ್ ಹಾಗೂ ಗಣೇಶ್ ಬಂಧಿತ ಆರೋಪಿಗಳು ಬಂಧಿತರಿಂದ ಒಂಬತ್ತು ಲಕ್ಷ ಮೌಲ್ಯದ 10 ದ್ವಿಚಕ್ರವಾಹನ ವಶ ಶೈಲೇಶ್ ಪರ್ಸಾನಿಯಾ ಎಂಬುವವರ ವಾಹನ ಕದ್ದಿದ್ದ ಹಿನ್ನಲೆ ದೂರು ದಾಖಲಾಗಿತ್ತು ತನಖೆ ನಡೆಸಿದಾಗ ಮತ್ತಷ್ಟು ವಾಹನ ಕಳ್ಳತನ ಪ್ರಕರಣ ಪತ್ತೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial