ಬೆಂಗಳೂರು: ಆಯುರ್ವೇದ ಔಷಧಗಳಲ್ಲಿ ಒಂದಾಗಿರುವ ಚ್ಯವನಪ್ರಾಶ್ಗೆ ವೈಜ್ಞಾನಿಕ ಆಧಾರವನ್ನು ಪತಂಜಲಿ ಸಂಶೋಧನಾ ಸಂಸ್ಥೆಯ (ಪಿಆರ್ಐ) ವಿಜ್ಞಾನಿಗಳ ತಂಡ ನೀಡಿದೆ ಎಂದು ಪತಂಜಲಿ ಯೋಗಪೀಠ ಹೇಳಿದೆ.
ಪುರಾತನ ಆಯುರ್ವೇದ ಜ್ಞಾನವನ್ನು ಆಧುನಿಕ ವಿಜ್ಞಾನದ ಬೆಳಕಿನಲ್ಲಿ ಅರ್ಥೈಸುವ ಪ್ರಕ್ರಿಯೆಯಲ್ಲಿ ಇದು ಇನ್ನೊಂದು ಮೈಲಿಗಲ್ಲು ಎಂದು ಪತಂಜಲಿ ಸಂಶೋಧನಾ ಪ್ರತಿಷ್ಠಾನ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.
ಚಳಿಗಾಲವು ಈಗಾಗಲೇ ಕಾಲಿಟ್ಟಿದೆ. ದಿನದ ತಾಪಮಾನ ಕುಗ್ಗುತ್ತಿರುವಂತೆ ಮಕ್ಕಳಿಗೆ ಬೆಚ್ಚಗಿನ ಉಡುಪು ತೊಡಿಸುವುದರಿಂದಷ್ಟೇ ಚಳಿಗಾಲದಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ. ಇನ್ನೊಂದು ಸನ್ನಿವೇಶವೂ ಈಗ ನಮ್ಮಲ್ಲಿ ಭಯ ಮೂಡಿಸಿದೆ. ಅಲ್ಲಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಶಾಲೆಗಳು ಪುನರಾರಂಭಗೊಂಡಿವೆ. ನಮ್ಮ ಚಿಕ್ಕ ಮಕ್ಕಳಿಗೆ ರೋಗನಿರೋಧಕ ಶಕ್ತಿ ನೀಡಲು ಇದುವರೆಗೆ ಯಾವುದೇ ಲಸಿಕೆಗಳನ್ನು ಅಭಿವೃದ್ಧಿಪಡಿಸಿಲ್ಲ. ಇವು ಕೆಲಮಟ್ಟಿಗೆ ಆತಂಕ ಮೂಡಿಸಿವೆ. ಚಳಿಗಾಲದಲ್ಲಿ ಮೂಗು ಸೋರುವುದು, ಜ್ವರ ಮತ್ತು ಕೆಮ್ಮು ಎಂದಿಗೂ ಮುಗಿಯದ […]