ವಿಧಾನ ಪರಿಷತ್ ಪಶ್ಚಿಮ ಪದವೀಧರ ಮತಕ್ಷೇತ್ರ ಚುನಾವಣೆ ಯಾವುದೇ ಅಡೆತಡೆಯಿಲ್ಲದೆ ಸುಸೂತ್ರವಾಗಿ ನಡೆದಿದೆ. ನಗರದಲ್ಲಿನ ಎಪಿಎಂಸಿ, ರೈತ ಭವನದಲ್ಲಿ ಎರಡು ಕಡೆ ಬೂತ್ ನಿರ್ಮಾಣ ಮಾಡಿದ್ದು ಕರೋನಾ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕೂಡ ಸ್ಯಾನಿಟೈಸರ್, ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪೊಲೀಸ್ ಇಲಾಖೆಯ ಬಿಗಿಭದ್ರತೆಯಲ್ಲಿ ಎಲೆಕ್ಷನ್ ಸಾಧಾರಣವಾಗಿ ಸಾಗಿದೆ. ಒಂದಡೆ ಬಿಜೆಪಿ ಪಕ್ಷದ ಕಾರ್ಯಕರ್ತರು ,ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಪಕ್ಷೇತರರ ಅಭ್ಯರ್ಥಿ ಕಾರ್ಯಕರ್ತರು, ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.