ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಮುಡಿಗೇರಿಸಿಕೊಂಡವರು ಯಾರ್ಯಾರು?

ಎಸ್​ಎಸ್​ ರಾಜಮೌಳಿ ಅವರ ಆರ್​ಆರ್​ಆರ್​ ಸಿನಿಮಾ ಹಾಗೂ ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ದಾದಾ ಸಾಹೇಬ್ ಫಾಲ್ಕೆ ಇಂಟರ್​ನ್ಯಾಷನಲ್ ಫಿಲ್ಮ್ ಫೆಸ್ಟಿವ್ಲ್ ಅವಾರ್ಡ್ ಪಡೆದುಕೊಂಡಿದೆ.

ಕಾಶ್ಮೀರ್ ಫೈಲ್ಸ್ ಸಿನಿಮಾ ಭಾರತದಲ್ಲಿ ಸೂಪರ್ ಹಿಟ್ ಆಗಿದೆ. ತ್ರಿಬಲ್ ಆರ್ ಸಿನಿಮಾ ಭಾರತ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಚಲನಚಿತ್ರೋದ್ಯಮದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಟ್ವಿಟರ್​ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಾಗೆಯೇ ಪ್ರಶಸ್ತಿ ಪದಾನ ಸಮಾರಂಭದ ವಿಡಿಯೋ ಕ್ಲಿಪ್ ಅನ್ನೂ ಶೇರ್ ಮಾಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಬೆಸ್ಟ್ ಫಿಲ್ಮ್ ಅವಾರ್ಡ್ ಪಡೆದಿದೆ. ಈ ಪ್ರಶಸ್ತಿಯನ್ನು ಭಯೋತ್ಪಾದನೆಯ ಸಂತ್ರಸ್ತರಿಗೆ ಹಾಗೂ ಆಶೀರ್ವಾದ ಮಾಡಿದ ಭಾರತೀಯ ಜನರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.

ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಟ್ವಿಟರ್​ನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಹಾಗೆಯೇ ಪ್ರಶಸ್ತಿ ಪದಾನ ಸಮಾರಂಭದ ವಿಡಿಯೋ ಕ್ಲಿಪ್ ಅನ್ನೂ ಶೇರ್ ಮಾಡಿದ್ದಾರೆ. ಕಾಶ್ಮೀರ್ ಫೈಲ್ಸ್ ಸಿನಿಮಾ ಬೆಸ್ಟ್ ಫಿಲ್ಮ್ ಅವಾರ್ಡ್ ಪಡೆದಿದೆ. ಈ ಪ್ರಶಸ್ತಿಯನ್ನು ಭಯೋತ್ಪಾದನೆಯ ಸಂತ್ರಸ್ತರಿಗೆ ಹಾಗೂ ಆಶೀರ್ವಾದ ಮಾಡಿದ ಭಾರತೀಯ ಜನರಿಗೆ ಅರ್ಪಿಸುತ್ತೇನೆ ಎಂದಿದ್ದಾರೆ.

ಆಲಿಯಾ ಭಟ್ ಅವರು ಬೆಸ್ಟ್ ಆಯಕ್ಟ್ರೆಸ್ ಅವಾರ್ಡ್ ಗೆದ್ದರು. ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಗಂಗೂಬಾಯಿ ಕಥಿಯಾವಾಡಿ ಸಿನಿಮಾದಲ್ಲಿ ಅವರ ಪಾತ್ರಕ್ಕಾಗಿ ನಟಿ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು.

ನಟ ರಣಬೀರ್ ಅವರು ಬ್ರಹ್ಮಾಸ್ತ್ರ ಸಿನಿಮಾಗಾಗಿ ಬೆಸ್ಟ್ ನಟ ಪ್ರಶಸ್ತಿ ಪಡೆದರು. ಕಾಂತಾರ ನಟ ರಿಷಬ್ ಶೆಟ್ಟಿ ಅತ್ಯುತ್ತಮ ಭರವಸೆಯ ನಟ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಭೇಡಿಯಾ ಸಿನಿಮಾಗಾಗಿ ನಟ ವರುಣ್ ಧವನ್ ಅವರು ಕ್ರಿಟಿಕ್ಸ್ ಬೆಸ್ಟ್ ಆಯಕ್ಟರ್ ಪ್ರಶಸ್ತಿ ಗೆದ್ದರು. ಹಿರಿಯ ನಟ ಅನುಪಮ್ ಖೇರ್ ಕಾಶ್ಮೀರ್ ಫೈಲ್ಸ್ ಸಿನಿಮಾದಲ್ಲಿ ಅವರ ಅಭಿನಯಕ್ಕಾಗಿ ಬಹುಮುಖ ನಟ ಪ್ರಶಸ್ತಿ ಪಡೆದಿದ್ದಾರೆ.

ನಟಿ ರೇಖಾ ಅವರನ್ನು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗಾಗಿ ಗೌರವಿಸಲ್ಪಟ್ಟರು. ನಟಿ ಎಂದಿನಂತೆ ಸುಂದರವಾ ರೇಶ್ಮೆ ಸೀರೆ ಉಟ್ಟು ಕಾರ್ಯಕ್ರಮಕ್ಕೆ ಬಂದಿದ್ದರು.

ನಟಿ ಆಲಿಯಾ ಭಟ್ ಅವರು ತಮ್ಮ ಪ್ರಶಸ್ತಿಯನ್ನು ಹಿಡಿದು ಸೆಲ್ಫಿಗೆ ಪೋಸ್ ಕೊಟ್ಟಿದ್ದು ಹೀಗೆ. ನಟಿ ಸುಂದರವಾದ ಡಿಸೈನರ್ ಸೀರೆ ಉಟ್ಟು ಕಾರ್ಯಕ್ರಮಕ್ಕೆ ಬಂದಿದ್ದರು.

ಬಹುಭಾಷಾ ನಟ ದುಲ್ಕರ್ ಸಲ್ಮಾನ್ ಅವರು ಚುಪ್ ಸಿನಿಮಾದ ಪಾತ್ರಕ್ಕಾಗಿ ಬೆಸ್ಟ್ ನೆಗೆಟಿವ್ ರೋಲ್ ಪ್ರಶಸ್ತಿ ಪಡೆದರು. ಸೀತಾರಾಮಂ ನಟ ಬಾಲಿವುಡ್​ನಲ್ಲಿಯೂ ಆಯಕ್ಟಿವ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಚಿವೆಗೆ ಸೀರೆ, ನೇಕಾರರಿಗೆ ಬರೆ ಜಟಾಪಟಿ.

Tue Feb 21 , 2023
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಮಂಡಿಸಿದ ಬಜೆಟ್ ಸಂದರ್ಭದಲ್ಲಿ ರಾಜ್ಯದ ನೇಕಾರರು ಸಿದ್ಧಪಡಿಸಿದ ಕಸೂತಿಯ ಸೀರೆಯನ್ನು ಅವರಿಗೆ ಕಳುಹಿಸಲಾಗಿತ್ತು ಎನ್ನುವ ಜವಳಿ ಸಚಿವ ಶಂಕರ್ ಪಾಟೀಲ್ ಮೊನೆನಕೊಪ್ಪ ಅವರ ಹೇಳಿಕೆಗೆ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ ಘಟನೆ ವಿಧಾನಪರಿಷತ್‌ನಲ್ಲಿಂದು ನಡೆಯಿತು.ಈ ವೇಳೆ ಮಧ್ಯ ಪ್ರವೇಶಿಸಿದ ಬಿ.ಕೆ. ಹರಿಪ್ರಸಾದ್, ನೇಕಾರರಿಗೆ ಈ ಬಾರಿಯ ಬಜೆಟ್‌ನಲ್ಲಿ ಏನೆನೂ ಕೊಡುಗೆ ನೀಡಿಲ್ಲ. ಅವರಿಗೆ ರಾಜ್ಯದಿಂದ ಕಸೂತಿ ಮಾಡಿದ್ದ […]

Advertisement

Wordpress Social Share Plugin powered by Ultimatelysocial