ಸಚಿವೆಗೆ ಸೀರೆ, ನೇಕಾರರಿಗೆ ಬರೆ ಜಟಾಪಟಿ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಮಂಡಿಸಿದ ಬಜೆಟ್ ಸಂದರ್ಭದಲ್ಲಿ ರಾಜ್ಯದ ನೇಕಾರರು ಸಿದ್ಧಪಡಿಸಿದ ಕಸೂತಿಯ ಸೀರೆಯನ್ನು ಅವರಿಗೆ ಕಳುಹಿಸಲಾಗಿತ್ತು ಎನ್ನುವ ಜವಳಿ ಸಚಿವ ಶಂಕರ್ ಪಾಟೀಲ್ ಮೊನೆನಕೊಪ್ಪ ಅವರ ಹೇಳಿಕೆಗೆ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ ಘಟನೆ ವಿಧಾನಪರಿಷತ್‌ನಲ್ಲಿಂದು ನಡೆಯಿತು.ಈ ವೇಳೆ ಮಧ್ಯ ಪ್ರವೇಶಿಸಿದ ಬಿ.ಕೆ. ಹರಿಪ್ರಸಾದ್, ನೇಕಾರರಿಗೆ ಈ ಬಾರಿಯ ಬಜೆಟ್‌ನಲ್ಲಿ ಏನೆನೂ ಕೊಡುಗೆ ನೀಡಿಲ್ಲ. ಅವರಿಗೆ ರಾಜ್ಯದಿಂದ ಕಸೂತಿ ಮಾಡಿದ್ದ ಸೀರೆ ಕಳುಹಿಸಿದ್ದೀರಿ. ಆದರೆ, ಅವರು ಉಟ್ಟುಕೊಂಡು ಸೀರೆಯಂತೆ ಚೆನ್ನಾಗಿರುವ ನೇಕಾರ ಸಮುದಾಯದ ಮಹಿಳೆಯರ ಕಲ್ಯಾಣಕ್ಕಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದುಹರಿಹಾಯ್ದರು.ಉತ್ತರ ಕರ್ನಾಟಕ ಭಾಗದಲ್ಲಿ ಗಾದೆಯೊಂದಿದೆ ನೇಕಾರನ ಹೆಂಡತಿ ಅರಕಲು ಸೀರೆ ಉಟ್ಟುಕೊಂಡವಳು ಎನ್ನುವುದು. ಆದರೆ, ನಿಜವಾಗಿಯೂ ನೇಕಾರರ ಸ್ಥಿತಿ ಅಯೋಮಯವಾಗಿದೆ. ಅವರ ಸಬಲೀಕರಣಕ್ಕಾಗಿ ಯಾವುದೇ ಕ್ರಮಗಳನ್ನು ಸ ರ್ಕಾರ ಕೈಗೊಂಡಿಲ್ಲ ಎಂದು ಹೇಳಿದರು.ನೀವೇನೋ(ಸಚಿವರು)ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ರಾಜ್ಯದ ನೇಕರಾರು ಸಿದ್ಧಪಡಿಸಿದ ಕಸೂತಿ ಸೀರೆ ಕಳುಹಿಸಿದ್ದೀರಿ. ಆದರೆ, ರಾಜ್ಯದ ನೇಕಾರರ ಸ್ಥಿತಿ ಸಂಕಷ್ಟದಲ್ಲಿದೆ. ಅವರ ಕಲ್ಯಾಣಕ್ಕಾಗಿ ಯಾವುದೇ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿಲ್ಲ ಎಂದರು.ಈರುಳ್ಳಿ ಬೆಲೆ ಹೆಚ್ಚಾಗಿದೆ ಎಂದರೆ ನಾನು ಈರುಳ್ಳಿ ತಿನ್ನುವುದಿಲ್ಲ ಎಂದು ಕೇಂದ್ರ ಸಚಿವರು ಹೇಳುತ್ತಾರೆ. ಇಂತಹವರ ಮುಂದೆ ಸಮಸ್ಯೆ ಹೇಳಿಕೊಂಡರೆ ಏನು ಪ್ರಯೋಜನ. ಜವಳಿ ಉದ್ಯಮ ಶೇ. ೧೪ ರಷ್ಟು ಕೊಡುಗೆ ನೀಡುತ್ತಿದೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಿ ಆದೇಶನೇಕಾರರ ಸಮುದಾಯಕ್ಕೆ ಸರ್ಕಾರ ಘೋಷಣೆ ಮಾಡಿದ ಉಚಿತ ವಿದ್ಯುತ್ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಅನುಷ್ಠಾನ ಸಂಬಂಧ ಆದೇಶ ಹೊರಡಿಸಿದೆ ಎಂದು ಜವಳಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಹೇಳಿದರು.ಸಲೀಂ ಅಹಮದ್ ಪರವಾಗಿ ಬಿ.ಕೆ. ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೇಕಾರರ ಸಮುದಾಯದ ಕಲ್ಯಾಣಕ್ಕಾಗಿ ನೇಕಾರ ಸನ್ಮಾನ್, ವಿದ್ಯಾನಿಧಿ ಯೋಜನೆ, ೨ ಲಕ್ಷದವರೆಗೆ ಬಡ್ಡಿರಹಿತ ಸಾಲ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.ನೇಕಾರರು ಉತ್ಪಾದಿಸುವ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ೪ ಕಡೆ ಕರಕುಶಲ ವಸ್ತುಪ್ರದರ್ಶನ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಕ್ಷನ್ ಮೂಡ್​ನಲ್ಲಿ 'ಸೀತಾ ಲಕ್ಷ್ಮಿ',

Tue Feb 21 , 2023
ಕಿರುತೆರೆಯಲ್ಲಿ ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮೃಣಾಲ್ ಠಾಕೂರ್ ಅವರು ಮರಾಠಿ ಚಿತ್ರ ‘ವಿಟ್ಟಿ ದಂಡು’ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದರು. ಆ ನಂತರ ಮರಾಠಿ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. (ಇನ್ಸ್ಟಾಗ್ರಾಮ್/ಫೋಟೋ/ಮೃಣಾಲ್ ಠಾಕೂರ್) ಸೀತಾರಾಮಂ ಸಿನಿಮಾ ಬಳಿಲ ಮೃಣಾಲ್ ಸದ್ಯ ಸೆಲ್ಫಿ ಎಂಬ ಹಿಂದಿ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜೊತೆ ಮೃಣಾಲ್ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರ ಮಲಯಾಳಂನ […]

Advertisement

Wordpress Social Share Plugin powered by Ultimatelysocial