ಮತ್ತೆ ಸಿನಿಮಾ ಮಾಡ್ತಾರಾ ಚೆಲುವಿನ ಚಿತ್ತಾರ ಬೆಡಗಿ ‘ಐಶು’!

ಬಾಲ ನಟಿಯಾಗಿ ಬಣ್ಣ ಹಚ್ಚಿ ಹೆಸರು ಮಾಡಿದ್ದ ನಟಿ ಅಮೂಲ್ಯ, ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ‘ಚೆಲುವಿನ ಚಿತ್ತಾರ’ ಅನ್ನೋ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಟಿಯಾಗಿ ಕಾಣಿಸಿಕೊಂಡಿದ್ದರು. ಬಳಿಕ ಚಂದನವನದಲ್ಲಿ ಬಹುಬೇಡಿಕೆಯ ನಟಿಯಾದರು. ಒಂದು ಕಾಲದಲ್ಲಿ ಅಮೂಲ್ಯಅಂದ್ರೆ ಸಾಕು ಫ್ಯಾನ್ಸ್ ಹುಚ್ಚೆದ್ದು ಕುಣಿಯುತ್ತಿದ್ದರು.

ಬ್ಯಾಕ್ ಟು ಬ್ಯಾಕ್ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ಅಮೂಲ್ಯ ಜಗದೀಶ್ ಚಂದ್ರ ಅವರನ್ನ ವಿವಾಹವಾಗಿ ಎರಡು ಅವಳಿ ಮಕ್ಕಳ ತಾಯಿಯಾಗಿದ್ದಾರೆ. ಎರಡು ಮಕ್ಕಳ ತಾಯಿಯಾದ್ರೂ ಇವತ್ತಿಗೂ ಅವರ ಸೌಂದರ್ಯವನ್ನ ಹಾಗೇ ಮೇಂಟೈನ್ ಮಾಡಿದ್ದಾರೆ. ಇದೀಗ ಅವರ ಅಭಿಮಾನಿಗಳು ಮತ್ತೇ ಸಿನಿಮಾ ಮಾಡುತ್ತಾರಾ ಅಮೂಲ್ಯ ಅನ್ನೋ ಪ್ರಶ್ನೆ ಕೇಳುತ್ತಲೇ ಇದ್ದಾರೆ. ಅದಕ್ಕೆ ಅಮೂಲ್ಯ ಕಡೆಯಿಂದ ಇನ್ನೂ ಯಾವುದೇ ರೀತಿಯ ಉತ್ತರ ಬಂದಿಲ್ಲ.

ಅಮೂಲ್ಯ ಇವರು 14 ಸೆಪ್ಟೆಂಬರ್ 1993 ಬೆಂಗಳೂರಿನಲ್ಲಿ ಜನಿಸಿದರು. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿರುವ ಅಮೂಲ್ಯ ತಾಯಿ ಜಯಮ್ಮನ ಮಡಿಯಲಲ್ಲಿ ಬೆಳೆದರು. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಪದವಿ ಪಡೆದುಕೊಂಡಿದ್ದಾರೆ. ಇವರು ಕಾಲೇಜು ದಿನಗಳಲ್ಲಿ ಸ್ಪೋರ್ಟ್ಸ್, ಭರತ ನಾಟ್ಯ, ಡಾನ್ಸ್ಗಳಲ್ಲಿ ಆಸಕ್ತಿ ಹೊಂದಿದ್ದರು.

ನಟಿ ಅಮೂಲ್ಯ ಮತ್ತೇ ಸಿನಿಮಾಗಳನ್ನ ಮಾಡಬೇಕು ಅನ್ನೋದು ಅಭಿಮಾನಿಗಳ ಆಸೆ. ರಾಜಕೀಯ ಕುಟುಂಬದ ಸೊಸೆಯಾಗಿರೋ ಅಮೂಲ್ಯ ಸಿನಿಮಾ ಮಾಡುತ್ತಾರಾ ಅಥವಾ ರಾಜಕೀಯ ಕಡೆ ಹೋಗುತ್ತಾರಾ ಅನ್ನೋ ಪ್ರಶ್ನೆ ಕಾಡುತ್ತಲೇ ಇದೆ. ಸದ್ಯ ಇದೀಗ ತಮ್ಮ ಮುದ್ದು ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ನಟಿ ಅಮೂಲ್ಯ ಮತ್ತೆ ಬೆಳ್ಳಿ ಪರದೆ ಮೇಲೆ ಯಾವಾಗಾ ಕಾಣಿಸಿಕೊಳ್ಳುತ್ತಾರೆ ಎಂಬುದನ್ನು ಕಾಡು ನೋಡಬೇಕಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡೈವೋರ್ಸ್‌ ನೋಟಿಸ್‌ ನೀಡಿದಕ್ಕೆ ಪತ್ನಿ ಆತ್ಮಹತ್ಯೆ

Tue Feb 14 , 2023
ಕೆ.ಆರ್‌.ಪುರ: ವಿಚ್ಛೇದನ ನೀಡುವಂತೆ ಪತಿ ನೋಟಿಸ್‌ ನೀಡಿದಕ್ಕೆ ಪತ್ನಿ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಸೀಗೆಹಳ್ಳಿ ಸಮೀಪದ ಸಾಯಿ ಬಡಾವಣೆಯಲ್ಲಿ ನಡೆದಿದೆ. ಸೀಗೆಹಳ್ಳಿ ನಿವಾಸಿ ರಾಣಿ (27) ನೇಣಿಗೆ ಶರಣಾದ ಮಹಿಳೆ. ಕಳೆದ 8 ತಿಂಗಳ ಹಿಂದೆ ಮುಳಬಾಗಿಲು ತಾಲೂಕಿನ ದೊಡ್ಡಮುದ್ದೇನಹಳ್ಳಿ ಗ್ರಾಮದ ಸಾಫ್ಟವೇರ್‌ ಉದ್ಯೋಗಿ ಆಗಿದ್ದ ಜೀವನ್‌ ಕುಮಾರ್‌ ಎಂಬಾತನ ಜತೆ ರಾಣಿ ವಿವಾಹವಾಗಿದ್ದರು. ಮದುವೆಯಾದ ನಂತರ ಜೀವನಕುಮಾರ್‌ ತನ್ನ ಪತ್ನಿ […]

Advertisement

Wordpress Social Share Plugin powered by Ultimatelysocial