ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗಣಿ ಮತ್ತು ಭೂವಿಜ್ಞಾನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಿರಿಯ ನಾಗರಿಕರ ಸಬಲೀಕರಣ ಸಚಿವ ಹಾಲಪ್ಪ ಆಚಾರ ಮಾತನಾಡಿ,
ಸಾರ್ವಜನಿಕ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನ ಕಂದಾಯ ಮಂತ್ರಿ ಆರ್ ಅಶೋಕ್ ರವರು ಸರ್ಕಾರದ ಸೌಲಭ್ಯಗಳನ್ನು ಬಡವರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎಂದು ಈ ಯೋಜನೆಯನ್ನ
ಜಾರಿಗೆ ತಂದಿದ್ದಾರೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ ಹೇಳಿದರು
ನಮ್ಮ ಅಧಿಕಾರದ ಅವಧಿಯಲ್ಲಿ ಹೋಸ ಬದಲಾವಣೆ ತಂದಿದ್ದೆವೆ ಕೇಂದ್ರ ಸರ್ಕಾರಕ ಮಹಿಳೆಯರಿಗಾಗಿ10 ಕೋಟಿ ಫಲಾನುಭವಿಗಳಿಗೆ ಉಜ್ವಲ್ ಯೋಜನೆಯಡಿ ಗ್ಯಾಸ್ ವಿತರಣೆ ಮಾಡಿದ್ದೆವೆ
ಪ್ರತಿಯೊಂದು ಕುಟುಂಬಕ್ಕೆ ಶ್ಯಾಸ್ವತವಾದ ಶುದ್ಧ ಕುಡಿಯುವ ನೀರು ಪೂರೈಸಲು ನಲ್ಲಿ ಜೋಡಣೆ ಮಾಡಲಾಗಿದೆ
ಸ್ವಾತಂತ್ರ್ಯ ದೋರಕಿ 76 ವರ್ಷ ಕಳೆದವು ಆದರೇ ಇದುವರೆಗೆ ಕೆಲಸವೂ ಹಳ್ಳಿಗಳಲ್ಲಿ ವಿದ್ಯುತ್ ಸೌಲಭ್ಯ ಇರಲಿಲ್ಲ 20 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸೌಲಭ್ಯ ಒದಗಿಸಿದ್ದು ನಮ್ಮ ಕೇಂದ್ರ ಸರ್ಕಾರದ ಸಾಧನೆ ಎಂದರು
ಪೂರ್ವಜರ ಕಾಲದಿಂದಲು ಭೂ ದಾಖಲೆಗಳಲ್ಲಿ ಡಬಲ್ ಸರ್ವೇ ನಂಬರಗಳಿದ್ದವು ಅಂದು 800 ಖಾತೆಗಳಿದ್ದವು ಇಂದು 2500 ಖಾತೆಗಳಾಗಿ ಬದಲಾವಣೆ ಯಾಗಿವೆ
ಇದು ತಹಶೀಲ್ದಾರ ಮಾಡಿರುವ ಕಾರ್ಯಕ್ರಮ ಜನ ಮೆಚ್ಚುಗೆ ಪಡೆದು ಪಾತ್ರರಾಗಿದ್ದಾರೆ ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರ ಈ ವರ್ಷ ತಾಲೂಕಿಗೆ 8000 ಆಶ್ರಯ ಮನೆಗಳನ್ನ ಮಂಜೂರ ಮಾಡಲಾಗಿದೆ
ಮನೆಗಳು ಕಟ್ಟಕಡೆಯ ವ್ಯಕ್ತಿಗೂ ಸಿಗುವಂತಾಗಬೇಕು ಫಲಾನುಭವಿಗಳಿಗೆ ಮನೆ ತಲುಪಿಸುವ ಕೆಲಸ ಪಂಚಾಯತಿಯವರು ಪ್ರಾಮಾಣಿಕ ಮಾಡಬೇಕು ಪಾಲಕರು ತಮ್ಮ ತಮ್ಮ ಮಕ್ಕಳಿಗೆ ಪೂರ್ತಿ ಪ್ರಮಾಣದಲ್ಲಿ ಶಿಕ್ಷಣ ಕೋಡಿಸಬೇಕು ಶಿಕ್ಷಣ ಅರ್ಧಕ್ಕೆ ಮೋಟಕು ಗೋಳಿಸಬಾರದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಹಾವಳಿ, ಉಪಾಧ್ಯಕ್ಷ ಒಂದಲ್ಲ ಮುಗಳಿ, ಸದಸ್ಯರುಗಳಾದ ಶೇಖರಗೌಡ ಮಾಲಿ ಪಾಟೀಲ್,ಅಂದಿನ ಗೌಡ ಹಾರೋಹಳ್ಳಿ ಕಾಳಪ್ಪ ಬಡಿಗೇರ ಶರಣಪ್ಪ ವಡ್ಡರ ಗೀತವ್ವ ತುಪ್ಪದ ಕಲ್ಲಿನಾಥ ಲಿಂಗಣ್ಣ ನವರ .ಗಾಳೇಪ್ಪ ತಳವಾರ
ಅಧಿಕಾರಿಗಳಾದ ತಹಶೀಲ್ದಾರ್ ಶ್ರೀ ಶೈಲ ತಳವಾರ ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ ಬೀರಿದಾರ,ಹಿಂದೂ ಏಲಿಗಾರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು
ದೊಡ್ಡಬಸಪ್ಪ ಹಕಾರಿ ಯಲಬುರ್ಗಾ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada