ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ: ನಟ ಚೇತನ್

ನ್ಯಾಯಾಧೀಶರ ಕುರಿತು ಟ್ವೀಟ್ ಮಾಡಿದ ಪ್ರಕರಣಕ್ಕೆ ಜೈಲುವಾಸ ಅನುಭವಿಸಿ ಸೋಮವಾರ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್, ತಮ್ಮ ನಿಲುವಿನ ಕುರಿತು ಮತ್ತೆ ಸ್ಪಷ್ಟಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಪ್ರಶ್ನೆ ಮಾಡುವುದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ.

ತಪ್ಪು ಕಂಡಲ್ಲಿ ಮಾತನಾಡುತ್ತೇನೆ. ಮತ್ತಷ್ಟು ಜನರಿಗೆ ತಲುಪಲು ಆ ಪ್ರಶ್ನೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವೆ. ಯಾವುದೇ ಕಾರಣಕ್ಕೂ ಟ್ವಿಟ್ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದಿದ್ದಾರೆ. ಸೋಮವಾರ ಸಂಜೆ ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ನಟ ಚೇತನ್ ಅವರನ್ನು ಅಭಿಮಾನಿಗಳು ಮತ್ತು ಅವರ ತತ್ವವನ್ನು ಮೆಚ್ಚಿಕೊಂಡವರು ಜೈಲು ಮುಂದೆಯೇ ಸ್ವಾಗತಿಸಿದರು. ನೆಚ್ಚಿನ ನಟನ ಪರ ಘೋಷಣೆ ಕೂಗಿದರು. ಪತ್ನಿ ಮೇಘಾ ಕೂಡ ಪತಿಯ ಬಿಡುಗಡೆಗೆ ಹರ್ಷ ವ್ಯಕ್ತ ಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಯಲ್ಲೋ ಬೋರ್ಡ್' ನಲ್ಲಿ ಮೊದಲ ಬಾರಿಗೆ ಹಲವು ವಿಷಯಗಳನ್ನು ಕಲಿತೆ: ಅಹಲ್ಯಾ ಸುರೇಶ್

Wed Mar 2 , 2022
    ಆದಿ ಪುರಾಣ, ಕಮರೊಟ್ಟು ಚೆಕ್ ಪೋಸ್ಟ್, ಮಾರ್ಗರೇಟ್ ಚಿತ್ರಗಳಲ್ಲಿ ನಟಿಸಿರುವ ಅಹಲ್ಯಾ ಸುರೇಶ್ ತ್ರಿಲೋಕ್ ರೆಡ್ಡಿಯವರ ಮುಂಬರುವ ಚಿತ್ರ ಯಲ್ಲೋ ಬೋರ್ಡ್ ನಲ್ಲಿ ನಟಿಸುತ್ತಿದ್ದಾರೆ. ಪ್ರದೀಪ್ ಬಗೋಡಿ ನಾಯಕ ನಟನಾಗಿರುವ ಈ ಚಿತ್ರದಲ್ಲಿ ಹಿಂದಿನ ಚಿತ್ರಗಳಿಗಿಂತ ಭಿನ್ನ ಪಾತ್ರ ಎನ್ನುತ್ತಾರೆ ಅಹಲ್ಯಾ.ಯಲ್ಲೋ ಬೋರ್ಡ್ ಅಹಲ್ಯಾ ಅವರ ಮೊದಲ ಕಮರ್ಷಿಯಲ್ ಚಿತ್ರವಾಗಿದ್ದು ಇದರಲ್ಲಿ ಕೆಲವೊಂದು ಮೊದಲ ಪ್ರಯತ್ನಗಳನ್ನು ಮಾಡಿದ್ದಾರೆ. ಹಲವು ವಿಧದ ಡ್ರೈವಿಂಗ್ ಪಾಠಗಳನ್ನು ಕಲಿತಿದ್ದಾರಂತೆ. ಕೆಲವೊಂದು ಯುದ್ಧದ […]

Advertisement

Wordpress Social Share Plugin powered by Ultimatelysocial