ನವದೆಹಲಿ: ಜನವರಿ 2 ರಂದು ಜೋಹಾನ್ಸ್ಬರ್ಗ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮುನ್ನಾದಿನದ ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಗೈರು ಹಾಜರಾಗಿದ್ದರು.ಇನ್ನೊಂದೆಡೆಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಅವರು ಈಗ ಕೊಹ್ಲಿ ಗೈರಾಗಿರುವುದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಆದರೆ ನಿಜವಾದ ಸಂಗತಿ ಏನೆಂದರೆ ವಿರಾಟ್ ಅವರು ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮೊದಲು ವಿವಾದಾತ್ಮಕ ಮಾಧ್ಯಮ ಸಂವಾದದ ನಂತರ ಯಾವುದೇ ಸುದ್ದಿಗೊಷ್ಟಿಗೆ ಹಾಜರಾಗಿಲ್ಲ.ಮಾಧ್ಯಮಗಳೊಂದಿಗಿನ ಆ ಸಂವಾದದ ನಂತರ ವಿರಾಟ್ ಅವರನ್ನು ಪತ್ರಿಕಾಗೋಷ್ಠಿಗಳಿಂದ ದೂರ ಇಡಲಾಗಿದೆ ಎಂದು ನಂಬಲಾಗಿತ್ತು.
ಆದಾಗ್ಯೂ, ಭಾನುವಾರ, ಅಂತಹ ಎಲ್ಲಾ ವದಂತಿಗಳಿಗೆ ದ್ರಾವಿಡ್ ತೆರೆ ಎಳೆದಿದ್ದಾರೆ, ವಿರಾಟ್ ಪಿಸಿಗಳಿಗೆ ಹಾಜರಾಗದಿರಲು ನಿಜವಾದ ಕಾರಣವೆಂದರೆ ಮೂರನೇ ಟೆಸ್ಟ್ನ ಮುನ್ನಾದಿನದಂದು ಮಾಧ್ಯಮ ವ್ಯವಸ್ಥಾಪಕರು ಅವರನ್ನು ದೊಡ್ಡ ಪ್ರತಿಕಾಗೊಷ್ಟಿಗೆ ಸಿದ್ಧವಾಗುತ್ತಿದ್ದಾರೆ.ಅದು ವಿರಾಟ್ ಕೊಹ್ಲಿ ಅವರ 100 ನೇ ಟೆಸ್ಟ್ ಕೂಡ ಆಗಲಿದೆ ಎಂದು ಹೇಳಿದ್ದಾರೆ.
‘ಸುದ್ದಿಗೋಷ್ಠಿಯಲ್ಲಿ ಯಾರು ಹಾಜರಾಗುತ್ತಾರೆ ಎಂಬುದನ್ನು ನಾನು ನಿರ್ಧರಿಸುವುದಿಲ್ಲ.ಮಾಧ್ಯಮ ವ್ಯವಸ್ಥಾಪಕರು ನಿರ್ಧರಿಸಿದ್ದಾರೆ ಮತ್ತು ವಿರಾಟ್ ಕೇಪ್ ಟೌನ್ ಟೆಸ್ಟ್ ಸುದ್ದಿಗೋಷ್ಠಿಗೆ ಹಾಜರಾಗಲಿದ್ದಾರೆ ಎಂದು ಅವರು ನನಗೆ ಹೇಳಿದ್ದು ನೆನಪಿದೆ, ಅದು ಅವರ 100 ನೇ ಟೆಸ್ಟ್.ಆ ದಿನ ಪತ್ರಕರ್ತರೊಂದಿಗೆ ಮಾತನಾಡಲು ಒಳ್ಳೆಯ ಸಮಯ ಸಿಗುತ್ತದೆ.” ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada