ಬೆಳ್ಳಂ ಬೆಳಗೆ ಯುವಕನ ಕೊಲೆ. ಪ್ಲಾಸ್ಟಿಕ್ ದಾರದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಬೈಲಹೊಂಗಲ ನಗರದ ಸಂಸ್ಕೃತ ಬಾರ್ ಹತ್ತಿರ ಘಟನೆ ನಡೆದಿದೆ. ಶಶಿಕಾಂತ ಸುರೇಶ ಮಿರಜಕರ (33) ಕೊಲೆಯಾದ ವ್ಯಕ್ತಿ. ಮಧ್ಯ ವ್ಯಸನಿಯಾಗಿದ್ದ ಈತ ಪ್ರತಿದಿನ ಕುಡಿದು ಗಲಾಟೆ ಮಾಡುತ್ತಿದ್ದ ಎನ್ನಲಾಗುತ್ತಿದೆ. ಸ್ಥಳಕ್ಕೆ ಡಿವೈಎಸ್ಪಿ ಕಟಗಿ ಸೇರಿದಂತೆ ಸಿಪಿಐ ಸಾತೇನಹಳ್ಳಿ ಹಾಗೂ ಪಿಎಸ್ಐ ಈರಪ್ಪ ರಿತ್ತಿ ಹಾಜರಾಗಿದ್ದು ಶ್ವಾನ ದಳದೊಂದಿಗೆ ಕೊಲೆಯ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಇದನ್ನೂ ಓದಿ:ಆಕ್ಮಸಿಕ ಬೆಂಕಿಯಿಂದ ಬೆಳೆಗಳ ನಾಶ