ಬೆಂಗಳೂರು : ಸಿಎಂ ಆಗಬೇಕು ಅಂತಾನೇ ಕುಮಾರಸ್ವಾಮಿಗೆ ಹುಚ್ಚು ಇದೆ ಬಿಟ್ಟು ಜನಸೇವೆ ಮಾಡ್ಬೇಕು ಅಂತಾ ಇದೀಯಾ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ ಟಾಂಗ್ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಿಎಂ ಆಗುವ ಹುಚ್ಚು ಎಂದು ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದರು.ಎಲ್ಲರಿಗೂ ಸಿಎಂ ಆಗಬೇಕು ಅನ್ನೋ ಹುಚ್ಚು ಇರುತ್ತದೆ ಎಂದರು.ರಾಹುಲ್ ಗಾಂಧಿ ಸಲಹೆಗಾರರಾದ ರಾಜು ಅವರು ಬೆಂಗಳೂರಿಗೆ ಆಗಮಿಸಿದ್ದರು. ಆ ವೇಳೆ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದರು.ವಿರೋಧ ಪಕ್ಷದ ನಾಯಕರನ್ನ ಸಹಜವಾಗಿಯೇ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬೇರೆ ಏನೂ ಇಲ್ಲ ಬಿಡಿ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada