ಬಿಜೆಪಿ ಶಾಸಕರು ಸರ್ಕಾರದ ಅನುದಾನದಲ್ಲಿ ಪೂರೈಸುವ ಆಹಾರ ಪೊಟ್ಟಣಗಳ ಮೇಲೆ ಭಾವಚಿತ್ರ ಹಾಗು ಪಕ್ಷದ ಚಿಹ್ನೆ ಮುದ್ರಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ಅನುದಾನದಲ್ಲಿ ಪೂರೈಕೆ ಮಾಡುವ ಆಹಾರ ಪೂರೈಕೆಯಲ್ಲಿ ಈ ರೀತಿಯ ರಾಜಕೀಯ ಮಾಡಬಾರದು. ಸಿಎಂ ಕ್ರಮಕೈಗೊಳ್ಳಲು ಸೂಚಿಸದಿದ್ರೆ ಹೋರಾಟ ಅನಿವಾರ್ಯ. ಅಂಗನವಾಡಿ ಮಕ್ಕಳ ಹಾಗೂ ಗರ್ಭಿಣಿ ಸ್ತ್ರೀಯರ ಪೌಷ್ಠಿಕ ಆಹಾರಗಳನ್ನು ಬಿಜೆಪಿ ಸಿಂಬಲ್ನಲ್ಲಿ ರೀ ಪ್ಯಾಕ್ ಮಾಡಿ ಹಂಚಿದವರ ವಿರುದ್ಧ ಸಿಎಂ ಯಡಿಯೂರಪ್ಪ ಕ್ರಮಕೈಗೊಳ್ಳಬೇಕು. ಇಲ್ಲದಿದ್ರೇ ಪ್ರಧಾನಿ ಮೋದಿ ಅವರಿಗೆ ಕಳಿಸೋದು ಅನಿವಾರ್ಯ ಆಗುತ್ತೆ. ಬಿಜೆಪಿ ಅಕ್ರಮವನ್ನು ಆಧಾರ ಸಮೇತ ಕಾಂಗ್ರೆಸ್ ನಾಯಕರು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು
ಬಿಜೆಪಿ ವಿರುದ್ದ ಕ್ರಮಕ್ಕೆ ಕಾಂಗ್ರೆಸ್ ಒತ್ತಾಯ
Please follow and like us: