ಬೆಂಗಳೂರು: ಅನೇಕಲ್ನಲ್ಲಿ ಅಂಗನವಾಡಿ ಮಕ್ಕಳ ಆಹಾರ ದುರ್ಬಳಕೆ ಪ್ರಕರಣ ಸಂಬಂಧ ಸಚಿವರ ರಾಜೀನಾಮೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಆನೇಕಲ್ನಲ್ಲಿ ಕೇವಲ ಸ್ಯಾಂಪಲ್ ಅಷ್ಟೇ. ಇಡೀ ರಾಜ್ಯದಲ್ಲೇ ಇದು ನಡೆಯುತ್ತಿದೆ. ನಮ್ಮ ಶಾಸಕರು, ಸಂಸದರಿರುವ ಕಡೆಯೇ ಹೀಗೆ. ಇನ್ನು ಬಿಜೆಪಿ ಶಾಸಕರಿರುವ ಕಡೆ ಹೇಗೆ ನಡೆಯುತ್ತಿರಬಹುದು. ಯಡಿಯೂರಪ್ಪನವರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರದಿಂದ ಅಂಗನವಾಡಿಗೆ ಕೊಟ್ಟ ಆಹಾರ ಪದಾರ್ಥವನ್ನು ಬಿಜೆಪಿಯ ಸ್ಥಳೀಯ ನಾಯಕರು ತಮ್ಮ ಸ್ವಂತ ಕೊಡುಗೆಯ ರೀತಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಸಕ್ಕರೆ ಸೇರಿ ಬೇರೆ ಆಹಾರ ಪದಾರ್ಥದ ಕವರ್ ಚೇಂಜ್ ಮಾಡಿ ಅವರ ಕವರ್ಗೆ ಹಾಕಿದ್ದಾರೆ. ಅದನ್ನ ಜನರಿಗೆ ನಾವು ಕೊಟ್ಟಿದ್ದು ಅಂತ ಹಂಚಿದ್ದಾರೆ. ಆನೇಕಲ್ ತಾಲೂಕಿನಾದ್ಯಂತ ಹಂಚಿದ್ದಾರೆ. ಹಿಂದೆಯೂ ಹೀಗೆ ಮಾಡಿದ್ದರು. ಆಗಲೂ ನಾವು ಬಯಲಿಗೆಳೆದಿದ್ದೆವು. ಮಕ್ಕಳು, ಬಾಣಂತಿಯರ ಆಹಾರ ಈ ರೀತಿ ಮಾಡಿದ್ರೆ ಹೇಗೆ? ಬಿಜೆಪಿಯವರಿಗೆ ಮಾನಮರ್ಯಾದೆ ಇದ್ಯಾ? ಇವರು ಇನ್ನೆಂತ ಬಂಡರಿರಬೇಕು. ಇದು ನಿರ್ಲಜ್ಜತನದ ಪರಮಾವಧಿ. ಇದರ ಬಗ್ಗೆ ನಮ್ಮವರು ಕೇಸ್ ಕೂಡ ಕೊಟ್ಟಿದ್ದಾರೆ. ಇದಕ್ಕೆ ಏಳು ವರ್ಷ ಜೈಲು ಶಿಕ್ಷೆಯಾಗಲಿದೆ. ಹೀಗಾಗಿ ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆ ನೇರ ಹೊಣೆ ಸಿಎಂ ಯಡಿಯೂರಪ್ಪ ಆಗುತ್ತಾರೆ. ಸಿಎಂ ಅವರೇ ಇನ್ ಚಾರ್ಜ್ ಇದ್ರೂ ಹೀಗಾಗಿದೆ. ಮಹಿಳಾ ಮಕ್ಕಳ ಕಲ್ಯಾಣ ಸಚಿವೆ ಏನ್ಮಾಡ್ತಿದ್ದಾರೆ? ಇದರ ಬಗ್ಗೆ ಡಿ.ಕೆ.ಶಿವಕುಮಾರ್ ಬಹಿರಂಗ ಪಡಿಸಿದ್ದಾರೆ. ಆ ಬಗ್ಗೆ ಕೂಡಲೇ ಸಿಎಂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಆಹಾರ ಸ್ವಂತಕ್ಕೆ ಬಳಕೆ:ಸಿದ್ದರಾಮಯ್ಯ
Please follow and like us: