ಗ್ಯಾಂಗ್ಟಾಕ್: ಕರೋನವೈರಸ್ನಿಂದಾಗಿ ಸಿಕ್ಕಿಂ ಪ್ರವಾಸೋದ್ಯಮ ಕ್ಷೇತ್ರಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಏಕೆಂದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಈ ವರ್ಷದ ಕೈಲಾಸ ಮಾನಸಸರೋವರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಸಿಕ್ಕಿಂ ಪ್ರವಾಸೋದ್ಯಮ ಸಚಿವ ಬಿ ಎಸ್ ಪಂಥ್ ಮಾಹಿತಿ ನೀಡಿದ್ದು, ಈ ‘ಬಾರಿ ಮಾನಸ ಸರೋವರ ಯಾತ್ರೆಯೂ ಇರುವುದಿಲ್ಲ ಹಾಗೂ ನಾಥು ಲಾ ಪಾಸ್ (ರಸ್ತೆ) ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರ ಈ ವರ್ಷ ನಡೆಯುವುದಿಲ್ಲ’ ಎಂದಿದ್ದಾರೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಾಥು ಲಾ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರ ನಡೆಯುತ್ತದೆ ಜತೆಗೆ ಜೂನ್ ತಿಂಗಳಿನಲ್ಲಿ ಕೈಲಾಸ ಮಾನಸರೋವರ ಯಾತ್ರೆ ನಡೆಯುತ್ತದೆ. ವಿದೇಶಾಂಗ ಸಚಿವಾಲಯವು ಪ್ರತಿವರ್ಷ ಜೂನ್ನಿಂದ ಸಪ್ಟೆಂಬರ್ವರೆಗೆ ಎರಡು ವಿಭಿನ್ನ ಮಾರ್ಗಗಳ ಮೂಲಕ ಯಾತ್ರೆ ಆಯೋಜಿಸುತ್ತದೆ. ಆದರೆ ಈ ಬಾರಿ ಲಾಕ್ಡೌನ್ ಹಿನ್ನೆಲೆಯಲ್ಲಿ ಇವೆಲ್ಲವನ್ನೂ ರದ್ದು ಮಾಡಿದೆ. ಈ ಕುರಿತು ಸಿಕ್ಕಿಂ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ ಎಂದು ಪಂಥ್ ತಿಳಿಸಿದರು. ಈ ವರ್ಷ ಸಿಕ್ಕಿಂ ರಾಜ್ಯ ಸರ್ಕಾರ ೧೦ ಕೋಟಿಗಿಂತ ಹೆಚ್ಚು ಆದಾಯವನ್ನು ಕಳೆದುಕೊಂಡಿದೆ.
ಮಾನಸ ಸರೋವರ ಯಾತ್ರೆ ರದ್ದು
Please follow and like us: