ಮಾನಸ ಸರೋವರ ಯಾತ್ರೆ ರದ್ದು

ಗ್ಯಾಂಗ್‌ಟಾಕ್: ಕರೋನವೈರಸ್‌ನಿಂದಾಗಿ ಸಿಕ್ಕಿಂ ಪ್ರವಾಸೋದ್ಯಮ ಕ್ಷೇತ್ರಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಏಕೆಂದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈ ವರ್ಷದ ಕೈಲಾಸ ಮಾನಸಸರೋವರ ಯಾತ್ರೆಯನ್ನು ರದ್ದುಗೊಳಿಸಲಾಗಿದೆ. ಈ ಕುರಿತು ಸಿಕ್ಕಿಂ ಪ್ರವಾಸೋದ್ಯಮ ಸಚಿವ ಬಿ ಎಸ್ ಪಂಥ್ ಮಾಹಿತಿ ನೀಡಿದ್ದು, ಈ ‘ಬಾರಿ ಮಾನಸ ಸರೋವರ ಯಾತ್ರೆಯೂ ಇರುವುದಿಲ್ಲ ಹಾಗೂ ನಾಥು ಲಾ ಪಾಸ್ (ರಸ್ತೆ) ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರ ಈ ವರ್ಷ ನಡೆಯುವುದಿಲ್ಲ’ ಎಂದಿದ್ದಾರೆ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ನಾಥು ಲಾ ಪಾಸ್ ಮೂಲಕ ಭಾರತ ಮತ್ತು ಚೀನಾ ನಡುವಿನ ಗಡಿ ವ್ಯಾಪಾರ ನಡೆಯುತ್ತದೆ ಜತೆಗೆ ಜೂನ್ ತಿಂಗಳಿನಲ್ಲಿ ಕೈಲಾಸ ಮಾನಸರೋವರ ಯಾತ್ರೆ ನಡೆಯುತ್ತದೆ. ವಿದೇಶಾಂಗ ಸಚಿವಾಲಯವು ಪ್ರತಿವರ್ಷ ಜೂನ್‌ನಿಂದ ಸಪ್ಟೆಂಬರ್‌ವರೆಗೆ ಎರಡು ವಿಭಿನ್ನ ಮಾರ್ಗಗಳ ಮೂಲಕ ಯಾತ್ರೆ ಆಯೋಜಿಸುತ್ತದೆ. ಆದರೆ ಈ ಬಾರಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಇವೆಲ್ಲವನ್ನೂ ರದ್ದು ಮಾಡಿದೆ. ಈ ಕುರಿತು ಸಿಕ್ಕಿಂ ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ತಿಳಿಸಿದೆ ಎಂದು ಪಂಥ್ ತಿಳಿಸಿದರು. ಈ ವರ್ಷ ಸಿಕ್ಕಿಂ ರಾಜ್ಯ ಸರ್ಕಾರ ೧೦ ಕೋಟಿಗಿಂತ ಹೆಚ್ಚು ಆದಾಯವನ್ನು ಕಳೆದುಕೊಂಡಿದೆ.

Please follow and like us:

Leave a Reply

Your email address will not be published. Required fields are marked *

Next Post

ಕಾರ್ಮಿಕ ಮಹಿಳೆ ಸಾವು

Thu Apr 23 , 2020
ಲಾಕ್‌ಡೌನ್‌ನಿಂದ ಜನರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದಂತು ಸತ್ಯ. ಬೇರೆ ಊರುಗಳಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಎಷ್ಟೋ ಕುಟುಂಬಗಳು ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ರಾಮನಗರ ಜಿಲ್ಲೆ ಕನಕಪುರ ಗ್ರಾಮದ ಚಂದ್ರ ಎಂಬಾತನ ಮಡದಿ ಕವಿತಾ ಅನಾರೋಗ್ಯದಿಂದ ಬಳಲುತ್ತಿದ್ದ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಲಾಕ್‌ಡೌನ್‌ನಿಂದ ಶವ ಸಂಸ್ಕಾರಕ್ಕೆ ಸ್ವಗ್ರಾಮ್‌ಕ್ಕೆ ತೆರಳಲು ಆಗದ ಕಾರಣ ಕುಶಾಲನಗರದ ರುದ್ರಭೂಮಿಯಲ್ಲಿ ಮಹಿಳೆ ಅಂತ್ಯಸAಸ್ಕಾರ ನೇರವೇರಿಸಲಾಯಿತು. ರಕ್ಷಣಾ ವೇದಿಕೆ ಉಮೇಶ್, ಸಂದೀಪ್, ಯೂತ್ ಕಮಿಟ್ ಕಲೀಲ್ ಕ್ರಿಯೇಟಿವ್ ಶವ […]

Advertisement

Wordpress Social Share Plugin powered by Ultimatelysocial