ರಸ್ತೆ ತೆರಿಗೆ ವಿನಾಯಿತಿ ಕೋರಿದ ಬಸ್ ಮಾಲೀಕರು

ಬೆಂಗಳೂರು: ಲಾಕ್ ಡೌನ್ ಮುಕ್ತಾಯದ ನಂತರ ಸರ್ಕಾರಿ ಸ್ವಾಮ್ಯದ  ಬಸ್ ಸಂಚಾರ ಆರಂಭವಾಗಿದೆ. ಈ ನಡುವೆ ಇಂದು  ರಾಜ್ಯ ಖಾಸಗಿ ಬಸ್ ಗಳ ಮಾಲೀಕರ ನಿಯೋಗವು ಸಿಎಂ ಯಡಿಯೂರಪ್ಪ ಅವರನ್ನು  ಭೇಟಿ ಮಾಡಿ ಹಲವು ವಿಷಯಗಳನ್ನು ಚರ್ಚಿಸಿತು. ಮುಖ್ಯವಾಗಿ ಲಾಕ್ ಡೌನ್ ನಿಂದಾಗಿ ಭಾರಿ ನಷ್ಟ ಉಂಟಾಗಿದೆ. ಖಾಸಗಿ ಬಸ್ ಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.  ಮೊದಲ‌ ಆರು ತಿಂಗಳು ಸಂಪೂರ್ಣ ರಸ್ತೆ ತೆರಿಗೆ ವಿನಾಯ್ತಿ ಹಾಗೂ ಮುಂದಿನ ಆರು ತಿಂಗಳು ರಸ್ತೆ ತೆರಿಗೆಯಲ್ಲಿ ಶೇ.50 ರಷ್ಟು ವಿನಾಯಿತಿ ನೀಡುವಂತೆ ಕೋರಿದ್ದಾರೆ. ರಸ್ತೆ ತೆರಿಗೆಯಲ್ಲಿ ವಿನಾಯಿತಿ ಕೊಟ್ಟರೆ ಮಾತ್ರ ಬಸ್ ಗಳನ್ನು ರಸ್ತೆಗೆ ಇಳಿಸಲು ಸಾಧ್ಯ, ತೆರಿಗೆ ವಿನಾಯಿತಿ ಕೊಡದಿದ್ರೆ ಬಸ್ ಓಡಿಸೋಕ್ಕೆ ಕಷ್ಟ ಎಂದು ಕೋರಿದ್ದಾರೆ. ಮನವಿ ಸ್ವೀಕರಿಸಿದ ಸಿಎಂ ತೆರಿಗೆ ವಿನಾಯತಿ ಬಗ್ಗೆ ಪರಿಶೀಲನೆ ಮಾಡಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಿಲಿಂಡರ್ ಸ್ಪೋಟ ಓರ್ವ ಸಾವು

Fri May 22 , 2020
ಕಲಬುರ್ಗಿಯ ಸೇಡಂನ ಮೋಮಿನಪುರ ಬಡಾವಣೆಯ ರಾಜು ತಾಯಿತ್ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿವೆ ಹಾಗೂ ನಾಲ್ವರಿಗೆ ಗಾಯಗಳಾಗಿದ್ದವು, ತಕ್ಷಣವೇ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳ ಪೈಕಿ ಮತ್ತೋರ್ವರ ಸ್ಥಿತಿ ಗಂಭೀರವಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮನೆ ಮಾಲೀಕ ರಾಜು ತಾಯಿತ್(50) ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಾಗೂ ಗಾಯಗೊಂಡವರು ಮೃತನ ತಾಯಿ ಗಂಗಮ್ಮ ತಾಯಿತ್ (70),ಹೆಂಡತಿ ಸುಮಾ ತಾಯಿತ್ (40) ಮತ್ತು ಆತನ ಮಗ ಬಸಪ್ಪ […]

Advertisement

Wordpress Social Share Plugin powered by Ultimatelysocial