ರೈಲ್ವೆ ನಿಲ್ದಾಣದ ಅಂಗಡಿ ವ್ಯಾಪಾರಸ್ಥರಿಂದ ರೈಲ್ವೆ ಸಚಿವರಿಗೆ ಪತ್ರ

ದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಯಿಟ್ಟು ಜೀವನ ನಡೆಸುವವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಸಮಯದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ, ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಸೇರಿದಂತೆ ರೈಲ್ವೆ ನಿಲ್ದಾಣದಲ್ಲಿರುವ ಅಂಗಡಿಯವರು ಈ ಪತ್ರ ಬರೆದಿದ್ದಾರೆ.
ಮಾರ್ಚ್ ೨೨ರಿಂದಲೇ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ರೈಲುಗಳ ಓಡಾಟ ನಿಂತಿದೆ. ಇದ್ರಿಂದಾಗಿ ನಿಲ್ದಾಣದಲ್ಲಿರುವ ಅಂಗಡಿ ವ್ಯಾಪಾರಸ್ಥರು ಮನೆಯಲ್ಲಿ ಕುಳಿತಿದ್ದಾರೆ. ಆದ್ರೆ ಪರವಾನಗಿ ಶುಲ್ಕವಾಗಿ ಅವರು ೨ ಲಕ್ಷದಿಂದ ೪೦ ಸಾವಿರದವರೆಗೆ ಪಾವತಿ ಮಾಡಬೇಕಾಗಿದೆ. ಇದು ಅಂಗಡಿ ವ್ಯಾಪಾರಸ್ಥರಿಗೆ ಹೊರೆಯಾಗ್ತಿದೆ.
ಅಖಿಲ ಭಾರತ ರೈಲ್ವೆ ಆಹಾರ ಮತ್ತು ಆಹಾರ ಒಕ್ಕೂಟದಿಂದ ಪರವಾನಗಿ ಶುಲ್ಕವನ್ನು ಮನ್ನಾ ಮಾಡುವಂತೆ ರೈಲ್ವೆ ಸಚಿವರು ಮತ್ತು ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಸೋಶಿಯಲ್ ಮೀಡಿಯಾದಲ್ಲಿ ಆರಂಭವಾಯ್ತು ಹ್ಯಾಷ್ ಟ್ಯಾಗ್ #ResignHMBommai …!

Wed Apr 29 , 2020
ಇತ್ತೀಚೆಗಷ್ಟೇ ಸಿಆರ್ ಫಿ ಎಫ್ ಯೋಧನ ಬಂಧನ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಬೆಳಗಾವಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ರು. ಸಿಆರ್ ಫಿ ಎಫ್ ನ ಯೋಧ ಸಚಿನ ಸಾವಂತ್ರನ್ನ ಠಾಣೆಯಲ್ಲಿ ಕೋಳ ಹಾಕಿ ಕೂರಿಸಿದ್ದ ಪೋಟೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿತ್ತು. ಒಂದು ಸುವ್ಯವಸ್ಥೆವುಳ್ಳ ಕಾನೂನಿನಲ್ಲಿ ದೇಶ ಕಾಯುವ ಯೋಧನಿಗೆ ಈ ರೀತಿ ಮಾಡುವುದು ಎಷ್ಟು ಸರಿ ಎಂದು ಪರ-ವಿರೋಧ ಚರ್ಚೆಗೆ […]

Advertisement

Wordpress Social Share Plugin powered by Ultimatelysocial