ದೆಹಲಿ: ರೈಲ್ವೆ ನಿಲ್ದಾಣಗಳಲ್ಲಿ ಅಂಗಡಿಯಿಟ್ಟು ಜೀವನ ನಡೆಸುವವರು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದಾರೆ. ಸಂಪೂರ್ಣ ಲಾಕ್ಡೌನ್ ಸಮಯದಲ್ಲಿ ಪರವಾನಗಿ ಶುಲ್ಕವನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ, ಪುಸ್ತಕಗಳು ಮತ್ತು ನಿಯತಕಾಲಿಕೆಗಳು ಸೇರಿದಂತೆ ರೈಲ್ವೆ ನಿಲ್ದಾಣದಲ್ಲಿರುವ ಅಂಗಡಿಯವರು ಈ ಪತ್ರ ಬರೆದಿದ್ದಾರೆ.
ಮಾರ್ಚ್ ೨೨ರಿಂದಲೇ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ರೈಲುಗಳ ಓಡಾಟ ನಿಂತಿದೆ. ಇದ್ರಿಂದಾಗಿ ನಿಲ್ದಾಣದಲ್ಲಿರುವ ಅಂಗಡಿ ವ್ಯಾಪಾರಸ್ಥರು ಮನೆಯಲ್ಲಿ ಕುಳಿತಿದ್ದಾರೆ. ಆದ್ರೆ ಪರವಾನಗಿ ಶುಲ್ಕವಾಗಿ ಅವರು ೨ ಲಕ್ಷದಿಂದ ೪೦ ಸಾವಿರದವರೆಗೆ ಪಾವತಿ ಮಾಡಬೇಕಾಗಿದೆ. ಇದು ಅಂಗಡಿ ವ್ಯಾಪಾರಸ್ಥರಿಗೆ ಹೊರೆಯಾಗ್ತಿದೆ.
ಅಖಿಲ ಭಾರತ ರೈಲ್ವೆ ಆಹಾರ ಮತ್ತು ಆಹಾರ ಒಕ್ಕೂಟದಿಂದ ಪರವಾನಗಿ ಶುಲ್ಕವನ್ನು ಮನ್ನಾ ಮಾಡುವಂತೆ ರೈಲ್ವೆ ಸಚಿವರು ಮತ್ತು ರೈಲ್ವೆ ಮಂಡಳಿಗೆ ಪತ್ರ ಬರೆಯಲಾಗಿದೆ.
ರೈಲ್ವೆ ನಿಲ್ದಾಣದ ಅಂಗಡಿ ವ್ಯಾಪಾರಸ್ಥರಿಂದ ರೈಲ್ವೆ ಸಚಿವರಿಗೆ ಪತ್ರ
Please follow and like us: