ವ್ಯಾಪಾರಿಗಳ ಪರ ನಿಂತ ಚಾಲೆಂಜಿಂಗ್​ ಸ್ಟಾರ್ ಪತ್ನಿ

ಸಮಾಜಮುಖಿ ಕೆಲಸಗಳು, ಕಷ್ಟದಲ್ಲಿರೋರಿಗೆ ಸಹಾಯ ಮಾಡೋದು, ರೈತರ ಪರ ದನಿಯೆತ್ತೋದು ಇಂತಹ ಕಾರ್ಯಗಳಲ್ಲಿ ಸದಾ ಮುಂದಿರ್ತಾರೆ ಚಾಲೆಂಜಿಂಗ್​ ಸ್ಟಾರ್ ದರ್ಶನ್​. ಇದೀಗ ಅದೇ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದಾರೆ ಚಾಲೆಂಜಿಂಗ್ ಸ್ಟಾರ್ ಪತ್ನಿ ವಿಜಯಲಕ್ಷ್ಮೀ .

ಕೊರೊನಾ ಮತ್ತು ಲಾಕ್​ಡೌನ್​ನಿಂದ ತೀರಾ ನಷ್ಟಕೀಡಾಗಿರೋ ಕಿರಾಣಿ ಅಂಗಡಿಗಳ ಪರ ದನಿಯೆತ್ತಿದ್ದಾರೆ ವಿಜಯಲಕ್ಷ್ಮಿ ದರ್ಶನ್. ಟ್ವಿಟ್ಟರ್​​​ನಲ್ಲಿ ಬರೆದುಕೊಂಡಿರೋ ವಿಜಯಲಕ್ಷ್ಮಿ, ಇನ್ನುಮುಂದಾದ್ರೂ ಅಮೇಜಾನ್​ ಮೂಲಕ ದಿನಸಿ ಖರೀದಿ ಮಾಡೋ ಬದಲು, ನಿಮ್ಮ ಅಕ್ಕಪಕ್ಕದಲ್ಲಿರೋ ದಿನಸಿ ಅಂಗಡಿಗಳಲ್ಲಿ ಖರೀದಿ ಮಾಡಿ, ಸ್ಟಾರ್​ ಹೋಟೇಲ್​ಗಳಲ್ಲಿ ಕಾಫಿ ಕುಡಿಯೋ ಬದಲು, ಚಿಕ್ಕಪುಟ್ಟ ಹೊಟೇಲ್​ಗಳು, ಟೀ ಅಂಗಡಿಗಳಲ್ಲಿ ಕುಡಿಯಿರಿ. ಕಿರಾಣಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನ ಖರೀದಿ ಮಾಡಿ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, ಪಿಜಾ, ಮ್ಯಾಕ್​ಡೋನಲ್ಸ್, ಕೆಎಫ್​ಸಿಗಳು, ಲಾಕ್ಡೌನ್​ ಇದ್ದರೂ ಕೂಡ ಬದುಕುತ್ತವೆ. ಆದರೆ, ಸಣ್ಣಪುಟ್ಟ ವ್ಯಾಪಾರಿಗಳು ತೊಂದರೆ ಅನುಭವಿಸ್ತಾ ಇದ್ದಾರೆ. ಹಾಗಾಗಿ ಎಲ್ಲರೂ ಕೂಡ ಕಿರಾಣಿ ಅಂಗಡಿಗಳಿಗೆ ಪ್ರಾಮುಖ್ಯತೆ ಕೊಡಿ. ಇದರಿಂದ ಅವರ ಬದುಕಿಗೆ ಸಹಾಯವಾಗುತ್ತದೆ ಅಂತ ಮನವಿ ಮಾಡಿದ್ದಾರೆ.

ಈಗಾಗ್ಲೇ ವಿದೇಶಿ ಪ್ರಾಡಕ್ಟ್​ಗಳನ್ನ ಬಿಟ್ಟು ಸ್ವದೇಶಿ ಪ್ರಾಡಕ್ಟ್​ಗಳನ್ನೇ ಬಳಸುವಂತೆ ಅಭಿಯಾನವೊಂದು ಶುರುವಾಗಿದೆ. ಅಂತೆಯೇ ವಿದೇಶಿ ಆಯಪ್​ಗಳನ್ನ ಬಿಟ್ಟು,ಆನ್​ಲೈನ್​ ಗ್ರೋಸರಿ ಶಾಪಿಂಗ್​ ಬಿಟ್ಟು, ಕಿರಾಣಿ ಅಂಗಡಿಗೆ ಭೇಟಿ ನೀಡಿ, ನಮ್ಮವರ ಬದುಕಿಗೆ, ನಾವೇ ನೆರವಾಗಿ ನಿಲ್ಲಬೇಕಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಕೆಂಪೇಗೌಡ ಪ್ರತಿಮೆ ನಿರ್ಮಾಣ

Fri May 22 , 2020
ರಾಜಧಾನಿ ನಿರ್ಮಾತೃ ಕೆಂಪೇಗೌಡ ಅವರ ೧೦೮ ಅಡಿ ಎತ್ತರದ ಪ್ರತಿಮೆಯನ್ನು ದೇವನಹಳ್ಳಿ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ರಾಮನಗರ ಜಿಲ್ಲೆಯ ಕೆಂಪಾಪುರದಲ್ಲಿ ಮಾತನಾಡಿದ ಅವರು, ಸುಮಾರು ೨೩ಎಕರೆ ಸ್ಥಳದಲ್ಲಿ ೬೬ಕೋಟಿ ವೆಚ್ಚದಲ್ಲಿ ಪ್ರತಿಮೆ ನಿರ್ಮಾಣವಾಗಲಿದ್ದು, ಜೂ.೨೭ರ ಕೆಂಪೇಗೌಡ ಜಯಂತಿಯAದು ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ತಿಳಿಸಿದ್ರು.  ಜೊತೆಗೆ ಕೆಂಪೇಗೌಡರ ಕಾಲದ ಪ್ರಸಿದ್ಧ ಸ್ಥಳಗಳನ್ನು ಇಂಟರ್ ಲಿಂಕ್ […]

Advertisement

Wordpress Social Share Plugin powered by Ultimatelysocial