ನಾಯಕ ಕಿರಣ್ ನಾರಾಯಣ್ ಲುಕ್ ಗೆ ಅಪಾರ ಮೆಚ್ಚುಗೆ.

ಶ್ರೀ ಲಕ್ಷ್ಮೀಬೆಟ್ರಾಯ ಕಂಬೈನ್ಸ್ ಲಾಂಛನದಲ್ಲಿ ನಾಗತಿಹಳ್ಳಿ ಪ್ರತಿಭ ಹಾಗೂ ಕಿರಣ್ ನಾರಾಯಣ್ ನಿರ್ಮಿಸಿರುವ “ಸ್ನೇಹರ್ಷಿ” ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಈ ಚಿತ್ರಕ್ಕಾಗಿ ರಾಜು ಎನ್.ಕೆ ಗೌಡ ಅವರು ಬರೆದಿರುವ ಅರಿವಿಲ್ಲದೆ ಶುರುವಾದಂತಿದೆ ಎಂಬ ಹಾಡು ಡಿ ಬಿಟ್ಸ್ ಮೂಲಕ ಬಿಡುಗಡೆಯಾಗಿದ್ದು, ಜನಮನಸೂರೆಗೊಂಡಿದೆ. ಈಗಾಗಲೇ 1.3 ಮಿಲಿಯನ್ ಗೂ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ.

ಹಾಡಿನಲ್ಲಿ ಅಭಿನಯಿಸಿರುವ ನಾಯಕ ಕಿರಣ್ ನಾರಾಯಣ್ ಅವರ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಸುರದ್ರೂಪಿ ನಟ ಸಿಕ್ಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಪ್ರಶಂಸೆಯ ನುಡಿಗಳಿಗೆ ಕಿರಣ್ ನಾರಾಯಣ್ ಧನ್ಯವಾದ ತಿಳಿಸಿದ್ದಾರೆ.

ನಾಯಕನಾಗಿ ನಟಿಸಿರುವ ಕಿರಣ್ ನಾರಾಯಣ್ ಈ ಚಿತ್ರದ ನಿರ್ದೇಶಕರು ಹೌದು‌. ನಾಗತಿಹಳ್ಳಿ ಪ್ರತಿಭ ಕಥೆ ಬರೆದಿದ್ದಾರೆ. ಸುಮಧುರ ಹಾಡುಗಳಿಗೆ ಆಕಾಶ್ ಅಯ್ಯಪ್ಪ ಸಂಗೀತ ನೀಡಿದ್ದಾರೆ. ರವಿಕಿಶೋರ್ ಛಾಯಾಗ್ರಹಣ ಹಾಗೂ ಶ್ರೀಕಾಂತ್ ಸಂಕಲನ ಈ ಚಿತ್ರಕ್ಕಿದೆ.

ಕಿರಣ್ ನಾರಾಯಣ್ ಅವರಿಗೆ ನಾಯಕಿಯಾಗಿ ಸಂಜನಾ ಅಭಿನಯಿಸಿದ್ದಾರೆ. ಸುಧಾ ಬೆಳವಾಡಿ, ಚಕ್ರವರ್ತಿ, ನವೀನ್, ದೇವಕಿ, ರಂಗನಾಥ್, ಮಾರುತಿ, ಸೌಮ್ಯ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಂದೇ ಕಡೆ ಕಾಣಿಸಿದ ನಾಲ್ಕು ಹೆಬ್ಬಾವು!

Tue Feb 15 , 2022
ಅಂಕೋಲಾ: ತಾಲ್ಲೂಕಿನ ಸಿಂಗನಮಕ್ಕಿಯಲ್ಲಿ ಅರಣ್ಯ ಇಲಾಖೆಯ ಗೇರು ತೋಟದಲ್ಲಿ ಸೋಮವಾರ ಕಾಣಿಸಿಕೊಂಡ ನಾಲ್ಕು ಹೆಬ್ಬಾವುಗಳನ್ನು ಉರಗ ತಜ್ಞ ಮಹೇಶ ನಾಯ್ಕ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆ ಸಹಾಯದಿಂದ ಕಾಡಿಗೆ ಬಿಟ್ಟರು. ಸಿಂಗನಮಕ್ಕಿಯ ತೋಟದ ಗುತ್ತಿಗೆ ಪಡೆದ ಸಿಬ್ಬಂದಿ ಗೇರು ಹಣ್ಣು ಕೀಳಲು ಹೋದಾಗ ಎರಡು ಹೆಬ್ಬಾವುಗಳು ಇರುವುದನ್ನು ಗಮನಿಸಿದರು. ಅರಣ್ಯ ಇಲಾಖೆಗೆ ತಿಳಿಸಿ ಅವರ ಮೂಲಕ ಮಹೇಶ ನಾಯ್ಕ ಅವರನ್ನು ಕರೆದುಕೊಂಡು ಬರಲಾಯಿತು. ನಂತರ ಅಲ್ಲಿಯೇ ಇನ್ನೆರಡು ಹೆಬ್ಬಾವುಗಳು ಇರುವುದು […]

Advertisement

Wordpress Social Share Plugin powered by Ultimatelysocial